ಮಧ್ಯಾಹ್ನ 2 ಗಂಟೆ ಅನಂತರ ಈ ಊರಿಗೆ ಬಸ್ಸಿಲ್ಲ

ಕ್ರೋಢಬೈಲೂರು : ಸರಕಾರಿ ಬಸ್‌ಗೆ ಬೇಡಿಕೆ

Team Udayavani, Jan 31, 2020, 5:51 AM IST

3001KDPP2

ಅಂಪಾರು: ಶಂಕರನಾರಾಯಣ ಹಾಗೂ ಅಂಪಾರು ಎರಡು ಪೇಟೆಗಳಿಂದ ಸರಿ ಸುಮಾರು 8 ಕಿ.ಮೀ. ಅಂತರವಿರುವ ಕ್ರೋಢಬೈಲೂರಿಗೆ ಮಧ್ಯಾಹ್ನ 2.15 ಗಂಟೆಯ ಅನಂತರ ಯಾವುದೇ ಬಸ್‌ ಬರುತ್ತಿಲ್ಲ. ಇಲ್ಲಿಗೆ ಸಂಜೆ 3.45 ಹಾಗೂ ಸಂಜೆ 5.30 ಕ್ಕೆ ಎರಡು ಖಾಸಗಿ ಬಸ್‌ ಸಂಚಾರವನ್ನು ವಾರದಿಂದ ಹಿಂದೆ ಸ್ಥಗಿತಗೊಳಿಸಲಾಗಿದೆ.

ಇದರಿಂದ ಕ್ರೋಢ ಬೈಲೂರಿನಿಂದ ಶಾಲಾ -ಕಾಲೇಜುಗಳಿಗೆ, ಹೊರಗಡೆ ಕೆಲಸಕ್ಕೆ ಹೋಗುವವರು ವಾಪಾಸು ಮನೆ ಸೇರಲು 3-4 ಕಿ.ಮೀ. ನಡೆದುಕೊಂಡು ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈಗ ಶಂಕರನಾರಾಯಣ, ಅಂಪಾರು, ಕುಂದಾಪುರಕ್ಕೆ ತೆರಳಬೇಕಾದರೆ 3 ಕಿ.ಮೀ. ದೂರದ ಕೊಂಡಳ್ಳಿಯವರೆಗೆ ನಡೆದುಕೊಂಡು ಬರಬೇಕಾಗಿದೆ.

ಕ್ರೋಢಬೈಲೂರಿಗೆ ಒಟ್ಟು ಬೆಳಗ್ಗಿನಿಂದ ಸಂಜೆಯವರೆಗೆ 4 ಬಸ್‌ಗಳು ಬರುತ್ತಿದ್ದವು. ಬೆಳಗ್ಗೆ 8.30 ಕ್ಕೆ ಸರಕಾರಿ ಬಸ್‌ ಬರುತ್ತದೆ. ಆ ಬಳಿಕ ಕುಂದಾಪುರದಿಂದ ಶಂಕನಾರಾಯಣದಿಂದ ಬೆಳಗ್ಗೆ 11 ಕ್ಕೆ ಕ್ರೋಢಬೈಲೂರಿಗೆ ಬಂದು ಮತ್ತೆ ಶಂಕರನಾರಾಯಣಕ್ಕೆ ಒಂದು ಬಸ್‌ ಸಂಚರಿಸುತ್ತದೆ. ಅನಂತರ 2.15ಕ್ಕೆ ಅಮಾಸೆಬೈಲು – ಕ್ರೋಢಬೈಲೂರು – ಕುಂದಾಪುರಕ್ಕೆ ತೆರಳುವ ಬಸ್‌ ಬರುತ್ತದೆ.

ಆ ಬಳಿಕ ಖಾಸಗಿ ಬಸ್‌ 3.45ಕ್ಕೆ ಕೊಲ್ಲೂರು – ಕಾರ್ಕಳ ವಂಡ್ಸೆ, ನೇರಳಕಟ್ಟೆ, ಅಂಪಾರಿನಿಂದ ಕ್ರೋಢಬೈಲೂರಿಗೆ ಬರುತ್ತಿತ್ತು. ಅನಂತರ 5.30ಕ್ಕೆ ಅಮಾಸೆಬೈಲು – ಹಾಲಾಡಿ – ಶಂಕರನಾರಾಯಣ, ಕ್ರೋಢಬೈಲೂರಿಗೆ ಬಂದರು ಅಂಪಾರು ಆಗಿ ಕುಂದಾಪುರಕ್ಕೆ ಸಂಚರಿಸುತ್ತಿತ್ತು. ಆದರೆ ಈಗ ಇವರೆಡೂ ಬಸ್‌ಗಳು ಇದೇ ಮಾರ್ಗವಾಗಿ ಸಂಚರಿಸಿದರೂ, ಕ್ರೋಢ ಬೈಲೂರಿಗೆ ಮಾತ್ರ ಬರುತ್ತಿಲ್ಲ.

ಯಾಕೆ ಬರುತ್ತಿಲ್ಲ?
ಕ್ರೋಢ ಬೈಲೂರಿಗೆ ಬಸ್‌ ಹೋಗಬೇಕಾದರೆ ಅಂಪಾರು -ಶಂಕರನಾರಾಯಣ ಮಾರ್ಗದ ಕೊಂಡಳ್ಳಿಯಿಂದ 2.8 ಕಿ.ಮೀ. ಒಳಗೆ ಹೋಗಬೇಕು. ಇಲ್ಲಿಗೆ ಹೋಗುವಾಗ ಜನ ಇದ್ದರೂ, ಹಿಂತಿರುಗಿ ಬರುವಾಗ ಅಷ್ಟೇನು ಜನ ಇರುವುದಿಲ್ಲ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಕೊಂಡು ಈಗ ಬಸ್ಸಿನವರು ಕ್ರೋಢಬೈಲೂರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

ಹಿಂದೆ ಶಂಕರನಾರಾಯಣದಿಂದ ಕ್ರೋಢಬೈಲೂರಿಗೆ 10 ರೂ. ಟಿಕೇಟು ನೀಡಲಾಗುತ್ತಿತ್ತು. ಆದರೆ ಕಳೆದೊಂದು ವರ್ಷದಿಂದ ಕ್ರೋಢಬೈಲೂರಿಗೆ ಟಿಕೇಟು ನೀಡದೇ ಶಂಕರನಾರಾಯಣದಿಂದ ಅಂಪಾರಿಗೆ ಟೀಕೆಟು 16 ರೂ. ನೀಡಲಾಗುತ್ತಿದೆ. ಇದಕ್ಕೆ ಕಾರಣ ಬಸ್ಸಿನವರು ಕ್ರೋಢಬೈಲೂರಿಗೆ ಇದ್ದ ಪರವಾನಗೆಯನ್ನು ನವೀಕರಿಸಿಲ್ಲ. ಆದರೆ ನಮಗೆ ಹೆಚ್ಚುವರಿ ಹೊರೆಯಾದರೂ ಪರಾÌಗಿಲ್ಲ. ನಮ್ಮೂರಿಗೆ ಬಸ್‌ ಬರಲಿ ಎನ್ನುವುದು ಈ ಊರಿನ ಜನರ ಬೇಡಿಕೆಯಾಗಿದೆ.

ವಿದ್ಯಾರ್ಥಿಗಳಿಗೆ ಸಂಕಷ್ಟ
ಕ್ರೋಢಬೈಲೂರಿನಿಂದ ಶಂಕರನಾರಾಯಣ, ಕುಂದಾಪುರ ಸಹಿತ ಬೇರೆ ಬೇರೆ ಕಡೆಗಳಿಗೆ ಶಾಲಾ – ಕಾಲೇಜಿಗೆ ಹೋಗಿ ಬರುವ ನೂರಾರು ಮಂದಿ ಮಕ್ಕಳಿದ್ದಾರೆ. ಇದಲ್ಲದೆ ಬೆಳಗ್ಗೆ ಕೆಲಸಕ್ಕೆ ಹೋಗಿ ಸಂಜೆ ವಾಪಾಸು ಬರುವ ಅನೇಕ ಮಂದಿಯಿದ್ದು, ಅವರೆಲ್ಲ ಮತ್ತೆ ಮನೆಗೆ ತೆರಳಲು ಸಮಸ್ಯೆಯಾಗುತ್ತಿದೆ. ಅವರೀಗ ಬಸ್‌ ಸೌಕರ್ಯವಿಲ್ಲದೆ ಯಾರ್ಯಾರದೋ ವಾಹನಗಳನ್ನು ಅಡ್ಡಹಾಕಿ ಅದರಲ್ಲಿ ಸಂಚರಿಸುವಂತಾಗಿದೆ.

ಮಾಹಿತಿ ಪಡೆಯಲಾಗುವುದು
ಪರ್ಮಿಟ್‌ ತೆಗೆದುಕೊಂಡವರು ಹಾಗೇ ಏಕಾಏಕಿ ಬಸ್‌ ಸಂಚಾರವನ್ನು ಸ್ಥಗಿತಗೊಳಿಸುವಂತಿಲ್ಲ. ಆದರೆ ಆ ರೂಟಿನ ಪರ್ಮಿಟ್‌ ಅವಧಿ ಮುಗಿದ್ದದ್ದರೆ, ಅದನ್ನು ಮರು ನವೀಕರಣ ಮಾಡಿದ್ದಾರೆಯೇ ಎನ್ನುವುದರ ಬಗ್ಗೆ ಮಾಹಿತಿ ಪಡೆಯಲಾಗುವುದು. ಊರವರು ನನಗೆ ಆ ಬಸ್ಸಿನ ಸಂಖ್ಯೆ ಅಥವಾ ಇನ್ನಿತರ ದಾಖಲೆಗಳನ್ನು ನೀಡಿ ದೂರು ಸಲ್ಲಿಸಲಿ. ಬಸ್ಸಿನ ಸಂಬಂಧಪಟ್ಟವರಿಗೆ ತಿಳಿಸಿ, ಮತ್ತೆ ಬಸ್‌ ಸಂಚಾರ ಆರಂಭಿಸಲು ಪ್ರಯತ್ನಿಸಲಾಗುವುದು.
– ರಾಮಕೃಷ್ಣ ರೈ,
ಪ್ರಾದೇಶಿಕ ಸಾರಿಗೆ ಆಯುಕ್ತರು, ಉಡುಪಿ

ತುಂಬಾ ಸಮಸ್ಯೆಯಾಗುತ್ತಿದೆ
ಕುಂದಾಪುರದಿಂದ ಸಿದ್ದಾಪುರಕ್ಕೆ ಹೋಗುವ ಬಸ್‌ಗಳಲ್ಲಿ ಕೆಲವಾದರೂ ಅಂಪಾರು ಆಗಿ ಬಂದು ಕ್ರೋಢ ಬೈಲೂರು ಮೂಲಕವಾಗಿ ಶಂಕರನಾರಾಯಣ ಮಾರ್ಗವಾಗಿ ಅಲ್ಲಿಂದ ಸಿದ್ದಾಪುರಕ್ಕೆ ಸಂಚರಿಸಲಿ. ಕನಿಷ್ಠ ಕುಂದಾಪುರ – ಸಿದ್ದಾಪುರಕ್ಕೆ ಸಂಚರಿಸುವ ಸರಕಾರಿ ಬಸ್‌ಗಳನ್ನಾದರೂ ಕ್ರೋಢಬೈಲೂರಿಗೆ ಬರುವಂತೆ ಸಂಬಂಧಪಟ್ಟವರು ಗಮನವಹಿಸಲಿ. ನಮಗೆ ಅಂಪಾರು ಅಥವಾ ಶಂಕರನಾರಾಯಣಕ್ಕೆ ಹೋಗ ಬೇಕಾದರೆ ಬಸ್‌ ಬೇಕೇ ಬೇಕು. ಇಲ್ಲದಿದ್ದರೆ 8-10 ಕಿ.ಮೀ. ರಿಕ್ಷಾ ಅಥವಾ ಇನ್ನಿತರ ವಾಹನಗಳಲ್ಲಿ ಹೆಚ್ಚು ದುಡ್ಡು ತೆತ್ತು ತೆರಳಬೇಕಾಗಿದೆ.
-ದೇವಪ್ಪ ಶೆಟ್ಟಿ,ಸ್ಥಳೀಯರು, ಕ್ರೋಢಬೈಲೂರು

- ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.