ಯಾವ ದುರುದ್ದೇಶವೂ ಇಲ್ಲ: ಗೋಪಾಲ್ ಜಿ.
Team Udayavani, Nov 28, 2017, 10:58 AM IST
ಉಡುಪಿ: ಗೋರಕ್ಷಣೆಗಾಗಿ ನಾವು ಶಿವಾಜಿಯ ಆಶಯದಂತೆ ನಡೆದುಕೊಳ್ಳುತ್ತೇವೆ ಎನ್ನುವ ಚಿಂತನೆ ನಡೆಸಿದ್ದೇವೆ. ಗೋಹತ್ಯೆ ಸಂಪೂರ್ಣ ನಿಲ್ಲಬೇಕು. ಗೋ ರಕ್ಷಕರ ಮೇಲೆಯೇ ಅನೇಕ ಬಾರಿ ಹಲ್ಲೆಯಾಗಿದೆ. ರಕ್ಷಣೆ ಮಾಡುವವರ ಮೇಲೆಯೇ ದಾಳಿಯಾದಾಗ ನಾವೇನು ಮಾಡಬೇಕು? ಹೀಗಾಗಿ ನಾವು ಶಿವಾಜಿ ಮಹಾರಾಜರ ಆಶಯ ಪಾಲನೆ ಮಾಡಬೇಕಾಗುತ್ತದೆ. ಆದರೆ ಅದರಲ್ಲಿ ಬೇರೆ ಯಾವ ದುರುದ್ದೇಶವೂ ಇಲ್ಲ ಎಂದು ವಿಶ್ವ ಹಿಂದೂ ಪರಿಷದ್ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಗೋಪಾಲ್ ಜಿ. ತಿಳಿಸಿದ್ದಾರೆ.
ರವಿವಾರ ಹಿಂದೂ ಸಮಾಜೋತ್ಸವದಲ್ಲಿ ಗೋಪಾಲ್ ಅವರ ಭಾಷಣಕ್ಕೆ ಸಂಬಂಧಿಸಿದಂತೆ ಸೋಮವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಯೊಂದು ಧರ್ಮದವರಿಗೂ ತಮ್ಮ ಧಾರ್ಮಿಕ ವಿಚಾರಗಳನ್ನು ಪ್ರತಿಪಾದಿಸುವ ಸ್ವಾತಂತ್ರ್ಯವಿದೆ. ಅದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಹೊರತು ಬೇರೆ ಉದ್ದೇಶವಲ್ಲ. ಜನಾಕರ್ಷಣೆಗಾಗಿ ನಾವು ಹೇಳಿಕೆ ನೀಡುವುದಿಲ್ಲ ಎಂದರು.
ರಾಜ್ಯದ ಜನತೆಗೆ ಗೋಹತ್ಯೆ ನಿಷೇಧ ಆಗಬೇಕು ಎಂಬ ಆಸೆಯಿದೆ. ಗೋವುಗಳನ್ನು ಮಾರಾಟ ಮಾಡುವುದಾದರೆ ಕೃಷಿಕರಿಗೆ ಮಾರಾಟ ಮಾಡಿ, ಕಸಾಯಿ ಖಾನೆಗೆ ಕೊಡಬೇಡಿ ಎನ್ನುತ್ತಿದ್ದೇವೆ. ನಿಷೇಧಕ್ಕೆ ಸಂಬಂಧಿಸಿದಂತೆ ಸರಕಾರ ಕಾನೂನು ಪಾಲನೆ ಮಾಡುವಲ್ಲಿ ವಿಫಲವಾಗಿದೆ. ಇದರಿಂದಾಗಿ ಗೋಹತ್ಯೆ, ದಾಳಿ ನಡೆಯುತ್ತಿದೆ. ಸರಕಾರವೇ ಕಟ್ಟುನಿಟ್ಟಿನ ಕಾನೂನು ರೂಪಿಸಿದರೆ ಸಮಸ್ಯೆಯಿಲ್ಲ ಎಂದರು.
ಜಾತೀಯತೆ, ಅಸ್ಪೃಶ್ಯತೆಗೆ ಸಂಬಂಧಿಸಿದ ಬದಲಾವಣೆ ಆಗುತ್ತಿದೆ. ಏಕಾಏಕಿ ಬದಲಾವಣೆ ಸಾಧ್ಯವಿಲ್ಲ. ದೇವಸ್ಥಾನಗಳಿಗೆ ಎಲ್ಲರಿಗೂ ಮುಕ್ತ ಅವಕಾಶ ನೀಡುವಂತೆ ಎಲ್ಲರಿಗೂ ತಿಳಿಸಿದ್ದೇವೆ. ಬದಲಾವಣೆ ಖಂಡಿತ ಆಗುತ್ತದೆ. ಜನಸಂಖ್ಯೆ ಶಾಪವಲ್ಲ, ಶಕ್ತಿ. ಯುವಸಮು
ದಾಯ ಹೆಚ್ಚಾದಂತೆ ದೇಶ ಬಲಿಷ್ಠವಾಗುತ್ತದೆ. ಹಿಂದೆ ಜನಸಂಖ್ಯೆ ಜಾಸ್ತಿಯಾಗುವುದು ಶಾಪವಾಗಿತ್ತು. ಈಗ ಶಕ್ತಿಯಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ