ಕುಡಿಯುವ ನೀರು ಒದಗಿಸಲು ಶತಾಯಗತಾಯ ಪ್ರಯತ್ನ


Team Udayavani, May 16, 2019, 6:10 AM IST

kudiyuva-neerigagi

ಉಡುಪಿ: ನಗರದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಶತಾಯಗತಾಯ ಪ್ರಯತ್ನ ನಡೆಯುತ್ತಿವೆ. ಒಂದೆಡೆ ಶಾಸಕರು ಖುದ್ದು ಬಜೆ ಡ್ಯಾಂನಲ್ಲಿ ಹಾಜರಾಗಿ ಶ್ರಮದಾನ ಮಾಡಿದ್ದರೆ ಮತ್ತೂಂದೆಡೆ ಸಂಘ-ಸಂಸ್ಥೆಗಳೂ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿವೆ. ನಗರ ಸಭೆಯ ಸದಸ್ಯರು ಕೂಡ ಸ್ವತಃ ವೆಚ್ಚ ಭರಿಸಿ ನೀರು ಪೂರೈಕೆ ಮಾಡುತ್ತಿದ್ದಾರೆ.
ದಿನಕ್ಕೆ 30 ಸಾವಿರ ಲೀ. ನೀರು ಪೂರೈಕೆ ಗುಂಡಿಬೈಲು ವಾರ್ಡ್‌ನಲ್ಲಿ ಕಳೆದ
10 ದಿನಗಳಿಂದಲೂ ವಾರ್ಡ್‌ ಸದಸ್ಯರು ದಿನವೊಂದಕ್ಕೆ 30 ಸಾವಿರ
ಲೀಟರ್‌ ನೀರು ಪೂರೈಕೆ ಮಾಡುತ್ತಿ ದ್ದಾರೆ. ಸುಮಾರು 700ರಷ್ಟು ಮನೆ
ಗಳಿದ್ದು, 600 ಮನೆಗಳಿಗೆ ನೀರು ಪೂರೈಕೆಯಾಗಿದೆ. ಬೆಳಗ್ಗೆ 11 ಗಂಟೆ ಯಿಂದ ರಾತ್ರಿ 11 ಗಂಟೆಯವರೆಗೂ ನೀರು ಸರಬರಾಜು ಮಾಡಲಾಗುತ್ತಿದೆ. ನಳ್ಳಿ ನೀರು ಮಂಗಳವಾರ ರಾತ್ರಿ ಬರಲು ಆರಂಭವಾಗಿದೆ. ಉಳಿದಂತೆ ನಗರಸಭೆಯಿಂದ 1 ಬಾರಿ ಟ್ಯಾಂಕರ್‌ ನೀರು ಪೂರೈಕೆಯಾಗಿದೆ.

ರಾತ್ರಿ 2ಗಂಟೆಯವರೆಗೂ ನೀರು ಪೂರೈಕೆ
ಸುಮಾರು 400ರಿಂದ 500ರಷ್ಟು ಮನೆಗಳಿರುವ ಕುಂಜಿಬೆಟ್ಟು ವಾರ್ಡ್‌ನಲ್ಲೂ ವಾರ್ಡ್‌ ಸದಸ್ಯರು ನೀರು ಪೂರೈಸುತ್ತಿದ್ದಾರೆ. ದಿನಕ್ಕೆ 4 ಟ್ಯಾಂಕರ್‌ನಲ್ಲಿ 24 ಸಾವಿರ ಲೀ. ನೀರು ಪೂರೈಕೆ ಯಾಗುತ್ತಿದೆ. ಇಲ್ಲಿ ಬೆಳಗ್ಗೆ 9 ಗಂಟೆಗೆ ಆರಂಭವಾದರೆ ರಾತ್ರಿ 12ರಿಂದ 2 ಗಂಟೆವರೆಗೆ ನೀರು ಒದಗಿಸಲಾಗುತ್ತಿದೆ. ನಗರಸಭೆಯ ನಳ್ಳಿ ನೀರು ಶನಿವಾರ ಹಾಗೂ ರವಿವಾರ ಬಂದಿದೆ.

ನಾಗರಿಕ ಸಮಿತಿಯಿಂದ ಪೂರೈಕೆ
ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್‌ ಮತ್ತು ಪಂಚರತ್ನ ಸೇವಾ ಟ್ರಸ್ಟ್‌ ಮುಖಾಂತರ ಸಾರ್ವಜನಿಕರಿಗೆ ಕುಡಿಯುವ ನೀರು ವಿತರಿಸುವ ಕಾರ್ಯಕ್ರಮ ಮಂಗಳವಾರ ಆರಂಭಗೊಂಡಿದ್ದು, ಬುಧವಾರವೂ ಮುಂದುವರಿಯಿತು. ಅಜ್ಜರಕಾಡು, ಕೊಡಂಕೂರು, ಮಂಚಿಕೋಡಿ ಭಾಗಗಳಿಗೆ ಬುಧವಾರ ನೀರು ಸರಬರಾಜು ಮಾಡಲಾಯಿತು. 5 ಸಾವಿರ ಲೀಟರ್‌ನ 1 ಟ್ಯಾಂಕ್‌ನಲ್ಲಿ 300ರಿಂದ 500ರಷ್ಟು ಮನೆಗಳಿಗೆ ನೀರು ವಿತರಿಸಲಾಯಿತು. ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡು ರಾತ್ರಿ 7 ಗಂಟೆಯವರೆಗೂ ನೀರು ಸರಬರಾಜು ಮಾಡಲಾಯಿತು.

ಪ್ರಥಮ ಕರೆ ಬಂದವರಿಗೆ ಆದ್ಯತೆ
ದಿನನಿತ್ಯ ಹಲವು ಕರೆಗಳು ನಮಗೆ ಬರುತ್ತಿವೆ. ಸಮಸ್ಯೆ ಇರುವ ಎಲ್ಲ ವಾರ್ಡ್‌
ಗಳಿಗೂ ನೀರು ಪೂರೈಸುವ ಇಚ್ಛೆ ಇದೆ. ಮೊದಲು ಕರೆ ಮಾಡಿದ ವಾರ್ಡ್‌ ಗಳಿಗೆ ತೆರಳಿ ನೀರು ವಿತರಿಸುವ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು.

ಸಮಸ್ಯೆಗೆ ಸ್ಪಂದಿಸಲು ಸದಸ್ಯರ ವಿಸಿಟಿಂಗ್‌ ಕಾರ್ಡ್‌
ಸಗ್ರಿ ವಾರ್ಡ್‌ನಲ್ಲಿ ಫ್ಲ್ಯಾಟ್‌ಗಳನ್ನು ಹೊರತುಪಡಿಸಿ ಸುಮಾರು 1,500 ಮನೆಗಳಿವೆ. ದಿನಕ್ಕೆ 20 ಸಾವಿರ ಲೀ.ನಷ್ಟು ನೀರು ಇಲ್ಲಿನ ವಾರ್ಡ್‌ ಸದಸ್ಯರು ಪೂರೈಸುತ್ತಾರೆ. ನೀರಿನ ಅಭಾವ ಇದ್ದ ಸಂದರ್ಭದಲ್ಲಿ ದಿನವೊಂದಕ್ಕೆ 30ರಿಂದ 35 ಸಾವಿರ ಲೀ.ನಷ್ಟು ನೀರು ಪೂರೈಸಲಾಗಿದೆ. ಚುನಾವಾಣೆ ಆರಂಭವಾಗುವ 10 ದಿನ ಮೊದಲೇ ಇಲ್ಲಿ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುತ್ತಿತ್ತು. ದಿನವೊಂದಕ್ಕೆ 10 ಟ್ರಿಪ್‌ ಮಾಡಲಾಗುತ್ತದೆ. ಒಂದು ಮನೆಗೆ ಸುಮಾರು 300ರಿಂದ 700 ಲೀ.ನಷ್ಟು ನೀರು ವಿತರಿಸಲಾಗುತ್ತಿದೆ.

ನೀರಿನ ಸಮಸ್ಯೆ ಇದ್ದವರಿಗೆ ಕರೆ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ವಾರ್ಡ್‌ ಸದಸ್ಯರ ಮಾಹಿತಿಯುಳ್ಳ ವಿಸಿಟಿಂಗ್‌ ಕಾರ್ಡ್‌ ಮಾಡಿ ಇಲ್ಲಿನ ನಿವಾಸಿಗಳಿಗೆ ನೀಡಲಾಗಿದೆ. ಕರೆಮಾಡಿ ತಿಳಿಸಿದ ತತ್‌ಕ್ಷಣ ವಾರ್ಡ್‌ಸದಸ್ಯರು ಸ್ಪಂದಿಸುತ್ತಾರೆ. ವಾರ್ಡ್‌ಗೆ ನೀರು ಪೂರೈಸಲು ಮಂಜುನಾಥ ಕಲ್ಕೂರ ಅವರು ತಮ್ಮ ಮನೆಯ ಬಾವಿಯಿಂದ ಉಚಿತವಾಗಿ ನೀರು ನೀಡುತ್ತಿದ್ದಾರೆ. ಇದರಿಂದ ದಿನವೊಂದಕ್ಕೆ 40 ಸಾವಿರ ಲೀ.ನಷ್ಟು ನೀರು ಕೃಷ್ಣಮಠ ಸಹಿತ ವಿವಿಧ ವಾರ್ಡ್‌ಗಳಿಗೆ ಪೂರೈಕೆಯಾಗುತ್ತಿದೆ.

ಮುಖ್ಯಾಂಶಗಳು
– ನೀರಿನ ಸಮಸ್ಯೆಯಿದ್ದಲ್ಲಿ ವಾರ್ಡ್‌ ಸದಸ್ಯರನ್ನು ಸಂಪರ್ಕಿಸಿ
– ವಾರ್ಡ್‌ ಸದಸ್ಯರಿಂದ ನೀರಿನ ವ್ಯವಸ್ಥೆ
– ಸದಸ್ಯರ ನಿರ್ಣಯದಿಂದ ನಗರಸಭೆಗೂ ಅನುಕೂಲ
– ನಗರಸಭೆಯಿಂದಲೂ ಕೆಲ ಪ್ರದೇಶಗಳಿಗೆ ನೀರು ಪೂರೈಕೆ

ಸಾಮೂಹಿಕ ವರುಣ ಮಂತ್ರ ಜಪ
ಉಡುಪಿಯೂ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ನೀರಿನ ತೀವ್ರ ಕೊರತೆಯುಂಟಾಗಿದ್ದು ಅತಿ ಶೀಘ್ರ ಮಳೆಯ ಆಗಮನವಾಗಿ ಎÇÉೆಲ್ಲೂ ಸುಭಿಕ್ಷೆ ನೆಲೆಸುವಂತಾಗಲಿ ಎಂಬ ಆಶಯದೊಂದಿಗೆ ‘ವರುಣ ದೀಪ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಸಾಲಿಗ್ರಾಮದ ಡಿವೈನ್‌ ಪಾರ್ಕ್‌ ನ ಉಡುಪಿ ಶಾಖೆ ಉಡುಪಿಯ ಅಜ್ಜರಕಾಡಿನಲ್ಲಿ ಹಮ್ಮಿಕೊಂಡಿದೆ.

ಬುಧವಾರ ಈ ಕಾರ್ಯಕ್ರಮ ಆರಂಭಗೊಂಡಿದ್ದು, ಮೇ 25ರ ವರೆಗೆ 11 ದಿನಗಳ ಕಾಲ ಮುಂಜಾನೆ 6 ರಿಂದ 6.15 ಹಾಗೂ ಸಂಜೆ 6ರಿಂದ 6.15ರ ವರೆಗೆ ಅಜ್ಜರಕಾಡಿನ ಹುತಾತ್ಮ ಸೈನಿಕರ ಯುದ್ಧ ಸ್ಮಾರಕದ ಎದುರು ಸಾಮೂಹಿಕ ವರುಣ ಮಂತ್ರ ಜಪ ನಡೆಯಲಿದೆ.

– ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.