ಸಕಾಲ ಸೇವೆ: ಉಡುಪಿ, ದ.ಕ. ರ್ಯಾಂಕಿಂಗ್ ಕುಸಿತ
Team Udayavani, Dec 17, 2019, 6:10 AM IST
ಉಡುಪಿ: ರಾಜ್ಯ ಸರಕಾರ ಬಿಡುಗಡೆ ಮಾಡಿದ ನವೆಂಬರ್ ತಿಂಗಳ ಸಕಾಲ ವಿಭಾಗದ ಜಿಲ್ಲಾವಾರು ರ್ಯಾಂಕಿಂಗ್ ಪಟ್ಟಿಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಭಾರೀ ಹಿನ್ನಡೆ ಅನುಭವಿಸಿವೆ.
ಸಕಾಲ ಸೇವೆಯಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ನಿಗದಿತ ಅವಧಿಯ ಒಳಗೆ ಇತ್ಯರ್ಥ ಮಾಡುವ ಮೂಲಕ ಸೆಪ್ಟಂಬರ್ ಮತ್ತು ನವೆಂಬರ್ ತಿಂಗಳ ಒಟ್ಟಾರೆ ರ್ಯಾಂಕಿಂಗ್ನಲ್ಲಿ ಉಡುಪಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿತ್ತು. ಆದರೆ ನವೆಂಬರ್ನ ಪಟ್ಟಿಯಲ್ಲಿ ಉಡುಪಿ ಅರ್ಜಿ ವಿಲೇವಾರಿಯಲ್ಲಿ ದ್ವಿತೀಯ ಮತ್ತು ಓವರ್ ಆಲ್ ರ್ಯಾಂಕಿಂಗ್ನಲ್ಲಿ 7ನೇ ಸ್ಥಾನ ಪಡೆದಿದ್ದು, ದ.ಕ. ಜಿಲ್ಲೆ 20ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ನೋಟಿಸ್ ಜಾರಿ
ಉಡುಪಿಯಲ್ಲಿ ಆಗಸ್ಟ್ನಲ್ಲಿ ಕೆಲವು ಗ್ರಾ.ಪಂ. ಮತ್ತು ಪ್ರಾ. ಆ. ಕೇಂದ್ರಗಳಲ್ಲಿ ಒಂದು ಅರ್ಜಿಯೂ ಸಕಾಲದಡಿ ಸ್ವೀಕೃತಿಯಾಗದ್ದರಿಂದ ಜಿಲ್ಲಾಡಳಿತ 98 ಗ್ರಾ.ಪಂ.ಗಳು ಮತ್ತು 9 ಪ್ರಾ.ಆ. ಕೇಂದ್ರಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿತ್ತು.
ನಮ್ಮಲ್ಲಿ ಸಕಾಲದಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಪ್ರಮಾಣ ಕಡಿಮೆ ಇದೆ. ಎಲ್ಲ ಗ್ರಾ.ಪಂ.ಗಳಲ್ಲಿ ಅರ್ಜಿಗಳನ್ನು ಸಕಾಲದಲ್ಲಿ ತೆಗೆದುಕೊಳ್ಳುವಂತೆ ಆದೇಶ ನೀಡಲಾಗಿದೆ. ಹೊಸದಾಗಿ ಸಕಾಲ ಸಿಬಂದಿ ನೇಮಕವಾಗಿದ್ದು, ಮುಂದೆ ಅಗ್ರಸ್ಥಾನ ಕಾಯ್ದುಕೊಳ್ಳಲಾಗುವುದು.
-ಜಿ. ಜಗದೀಶ್, ಜಿಲ್ಲಾಧಿಕಾರಿ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ