ನೀರು ತುಂಬಿದ್ದ ಹೊಂಡಕ್ಕೆ ಟಿಪ್ಪರ್ ಉರುಳಿ ಇಬ್ಬರ ದುರ್ಮರಣ
Team Udayavani, Aug 8, 2020, 1:29 AM IST
ಕಾರ್ಕಳ: ಇಲ್ಲಿನ ಪಳ್ಳಿ ಬಳಿಯ ನಿಂಜೂರು ಎಂಬಲ್ಲಿ ಟಿಪ್ಪರ್ ಲಾರಿಯೊಂದು ನೀರಿನ ಹೊಂಡಕ್ಕೆ ಮಗುಚಿ ಬಿದ್ದಿದೆ.
ಈ ದುರ್ಘಟನೆ ಶುಕ್ರವಾರ ರಾತ್ರಿ ನಡೆದಿದ್ದು ಘಟನೆಯಲ್ಲಿ ಟಿಪ್ಪರ್ ಚಾಲಕ ಅರುಣ್ ಕುಮಾರ್ ಸಹಿತ ಎರಡು ಮಂದಿ ಮೃತಪಟ್ಟಿದ್ದಾರೆ.
ನಿಟ್ಟೂರು ಬಳಿ ಟಿಪ್ಪರ್ ತೆರಳುತಿದ್ದಾಗ ಆಯ ತಪ್ಪಿ ರಸ್ತೆ ಬದಿ ಪಕ್ಕದ ನೀರಿನ ಹೊಂಡಕ್ಕೆ ಮಗುಚಿ ಬಿದ್ದಿದೆ.
ಟಿಪ್ಪರ್ ತಲೆ ಕೆಳಗಾಗಿ ಉರುಳಿ ಬಿದ್ದು ಅದರಡಿಯಲ್ಲಿ ನೀರಿನ ಹೊಂಡದಲ್ಲಿ ಸಿಲುಕಿಕೊಂಡ ಇಬ್ಬರು ಗಂಭೀರ ಗಾಯಗಳೊಂದಿಗೆ ಮೃತರಾಗಿದ್ದಾರೆ.
ಅಪಘಾತ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.