ತೀರ್ಥಹಳ್ಳಿ- ಮಲ್ಪೆ ರಾಷ್ಟ್ರೀಯ ಹೆದ್ದಾರಿ: ನಡೆಯದ ಭೂಸ್ವಾಧೀನ ಪ್ರಕ್ರಿಯೆ
Team Udayavani, Jun 20, 2019, 5:55 AM IST
ಉಡುಪಿ: ಮಲ್ಪೆ -ತೀರ್ಥಹಳ್ಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ಎ ಹಾದು ಹೋಗುವ ಖಾಸಗಿ ಜಾಗಗಳ ಭೂ ಸ್ವಾಧೀನವಾಗಿಲ್ಲ. ಯೋಜನೆಯ ಡಿಪಿಆರ್ಗೆ ಅನುಮೋದನೆ ದೊರಕಿದ್ದು, ಉಡುಪಿ- ಪರ್ಕಳ ಹೊರತು ಪಡಿಸಿ ಇತರ ಕಡೆಗಳಿಗೆ ಕಾಮಗಾರಿ ನಡೆಸಲು ಹಣ ಬಿಡುಗಡೆಯಾಗಿಲ್ಲ. ಇದರಿಂದ ಕಾಮಗಾರಿ ವಿಳಂಬವಾಗುವ ಆತಂಕವಿದೆ.
ರಾಷ್ಟ್ರೀಯ ಹೆದ್ದಾರಿ ಒಟ್ಟು 24 ಗ್ರಾ.ಪಂ.ಗಳಲ್ಲಿ ರಸ್ತೆ ಹಾದುಹೋಗಲಿದೆ. ಸುಮಾರು 95.76ಹೆಕ್ಟೇರ್ ಪ್ರದೇಶದಲ್ಲಿ ಭೂಸ್ವಾಧೀನವಾಗಬೇಕಿದೆ. ಸಂತ್ರಸ್ತರಿಗೆ ಸುಮಾರು 41.47 ಕೋ.ರೂ. ಪರಿಹಾರ ಹಣ ನೀಡಬೇಕಾಗಿದೆ. ಯೋಜನೆ ಒಟ್ಟು 636 ಕೋ.ರೂ.ಗಳದು.
ಭೂಸ್ವಾಧೀನಕ್ಕೆ ಮುನ್ನ ಕಾಮಗಾರಿ!
ಮಣಿಪಾಲ, ಉಡುಪಿ, ಹೆಬ್ರಿ ಸೇರಿದಂತೆ ಒಟ್ಟು 12 ಕಡೆಗಳಲ್ಲಿ 31.987 ಕಿ.ಮೀ. ರಸ್ತೆ ಚತುಷ್ಪಥವಾಗಲಿದೆ. ಮೊದಲ ಹಂತದಲ್ಲಿ ಮಣಿಪಾಲ- ಕಡಿಯಾಳಿವರೆಗಿನ ಹೆದ್ದಾರಿ ಕಾಮಗಾರಿ ಮತ್ತು ಭೂಸ್ವಾಧೀನಕ್ಕೆ ಒಟ್ಟು 99.86 ಕೋ.ರೂ. ಮಂಜೂರಾಗಿದೆ. ಈ ಮಾರ್ಗದಲ್ಲಿ ಕೇವಲ ಶೇ. 10ರಷ್ಟು ಭಾಗ ಖಾಸಗಿ ಜಾಗ. ಮಣಿಪಾಲದ ಮಾಹೆ ಸೇರಿದಂತೆ ಇತರೆ ಖಾಸಗಿ ಜಾಗಗಳ ಮಾಲೀಕರ ಜತೆ ಶಾಸಕರು ಮಾತುಕತೆ ನಡೆಸಿ ಭೂಸ್ವಾಧೀನದ ಮುನ್ನವೇ ಕಾಮಗಾರಿ ನಡೆಸಲಾಗಿದೆ.
ಪರ್ಕಳದ ರಸ್ತೆ ನಿಧಾನ ಕಾರಣ?
ಪರ್ಕಳದಲ್ಲಿ ರಾ.ಹೆ. ಸಂಪೂರ್ಣವಾಗಿ ಖಾಸಗಿ ಜಾಗದ ಮೂಲಕ ಹಾದು ಹೋಗಲಿದೆ. ಈ ಪ್ರದೇಶದಲ್ಲಿ ಮನೆ ಮತ್ತು ಕೃಷಿ ಭೂಮಿಯಿರುವುದರಿಂದ ಹಳೆಯ ರಸ್ತೆಯನ್ನೇ ಅಗಲ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಇದು ಪರ್ಕಳ ಭಾಗದಲ್ಲಿ ರಸ್ತೆ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.
ಮಲ್ಪೆ-ಆದಿಉಡುಪಿ: 44 ಕೋ.ರೂ.
ಮಲ್ಪೆ-ತೀರ್ಥಹಳ್ಳಿ ರಾ.ಹೆ.ಯ ಎರಡನೇ ಹಂತವಾಗಿ ಆದಿ ಉಡುಪಿ- ಮಲ್ಪೆ ಕಾಮಗಾರಿ ಪ್ರಾರಂಭವಾಗಲಿದೆ. ಭೂಸ್ವಾಧೀನ ಮತ್ತು ಕಾಮಗಾರಿ ಸೇರಿದಂತೆ ಒಟ್ಟು 44 ಕೋ.ರೂ.ಗಳ ಡಿಪಿಆರ್ ಅನುಮೋದನೆಯಾಗಿದೆ. ಆದರೆ ಹಣ ಬಿಡುಗಡೆಯಾಗಿಲ್ಲ. ಹಣ ಬಿಡುಗಡೆಯಾದ ತತ್ಕ್ಷಣ ಎರಡನೇ ಹಂತದ ಪ್ರಕ್ರಿಯೆ ಪ್ರಾರಂಭವಾಗಲಿದೆ.
– ಉಡುಪಿ-ಮಣಿಪಾಲ ಭೂ ಸ್ವಾಧೀನ
– 2ನೇ ಹಂತದಲ್ಲಿ ಆದಿಉಡುಪಿ- ಮಣಿಪಾಲ ಡಿಪಿಆರ್ ಅನುಮೋದನೆ
– ಪರ್ಕಳದಲ್ಲಿ ಖಾಸಗಿ ಜಾಗದಲ್ಲಿ ತಕರಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ