ಮಕ್ಕಳಲ್ಲಿ “ಸ್ವ-ಲೀನತೆ’ ಬಗ್ಗೆ ನಿರ್ಲಕ್ಷ್ಯ ಬೇಡ


Team Udayavani, Apr 2, 2018, 6:25 AM IST

010418uce2.jpg

ಉಡುಪಿ: ಆಟಿಸಂ (ಸ್ವ-ಲೀನತೆ) ಎನ್ನುವುದು ಭಾರತ ಸಹಿತ ವಿಶ್ವದಾದ್ಯಂತದ ಒಂದು ಆರೋಗ್ಯ ಸಮಸ್ಯೆ. ಈ ಕಾಯಿಲೆಯನ್ನು ಮಕ್ಕಳಿರುವಾಗ ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಮಾಡಿ ಚಿಕಿತ್ಸೆ ಕೊಡಿಸದೇ ಇದ್ದರೆ ಭವಿಷ್ಯ ಮಂಕಾಗುವ ಅಪಾಯವಿದೆ. 
 
ಹುಟ್ಟಿನಿಂದ ಬರುವ ಕಾಯಿಲೆ ಇದಾಗಿದ್ದು, ಅದನ್ನು ಪತ್ತೆ ಹಚ್ಚಿ ಮಕ್ಕಳಿಗೆ ಚಿಕಿತ್ಸೆ ನೀಡುವ ಅಗತ್ಯವಿದೆ. ಸಾಮಾನ್ಯವಾಗಿ ಮಕ್ಕಳು ಎರಡು-ಮೂರನೇ ವಯಸ್ಸಿನವರು ಆಗಿರುವಾಗ ಇದು ಪತ್ತೆಯಾಗ ಬಹುದು. ಆಟಿಸಂಗೆ ತುತ್ತಾದ ಮಕ್ಕಳ ಜತೆ ಹೊಂದಿಕೊಳ್ಳುವುದು ಅಗತ್ಯವಾಗಿದ್ದು, ಅದಕ್ಕಾಗಿ ಹೆತ್ತವರೂ ಬದಲಾಗಬೇಕು. ಶಾಲೆ, ಮನೆಯಲ್ಲೂ ಮಕ್ಕಳಿಗೆ ಪೂರಕವಾಗಿ ಇರಬೇಕಾಗುತ್ತದೆ. 
 
ಏನಿದು ಕಾಯಿಲೆ?
ಮಕ್ಕಳ ಬೆಳವಣಿಗೆಯಲ್ಲಿನ ತೊಂದರೆ ಆಟಿಸಂ. ಇದಕ್ಕೆ ಮಿದುಳಿನಲ್ಲಿನ ತೊಂದರೆ ಕಾರಣವಾಗಿರಬಹುದು. ಹುಟ್ಟುವ ಸಂದರ್ಭ ತಲೆಗೆ ಆಮ್ಲಜನಕ, ರಕ್ತದ ಪೂರೈಕೆ ಕೊರತೆ ವಂಶವಾಹಿಯಲ್ಲಿ ಸಮಸ್ಯೆ ಆಗುವುದರಿಂದ ಅಥವಾ ಮಿದುಳಿಗೆ ವೈರಸ್‌ ಸೋಂಕಿದರೆ, ಗರ್ಭದಲ್ಲಿದ್ದಾಗ ತಾಯಿಗೆ ರುಬೆಲ್ಲಾದಂತಹ ಸೋಂಕು ಬಂದಾಗ ಆಟಿಸಂ ತಗಲಬಹುದು. 

ಗುರುತಿಸುವಿಕೆ ನಿರೀಕ್ಷಿತವಾಗಿಲ್ಲ
ಭಾರತದಲ್ಲಿ 10 ಸಾವಿರಕ್ಕೆ 23,ಅಂದರೆ ಶೇ. 0.23ರಷ್ಟು ಮಕ್ಕಳು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ವಿಶ್ವ ಮಟ್ಟದಲ್ಲಿ ಇದರ ಅನುಪಾತ ಶೇ. 1.47 ಇದೆ. ಭಾರತದಲ್ಲಿ  ಆಟಿಸಂ ಕಾಯಿಲೆ ಗುರುತಿಸುವಿಕೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಹಾಗಾಗಿ ಭಾರತದಲ್ಲಿ ಅನುಪಾತ ಕಮ್ಮಿ ತೋರಿಸುತ್ತಿದೆ ಎಂದು ಅಂತಾರಾಷ್ಟ್ರೀಯ ವೈದ್ಯಕೀಯ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಕರಾವಳಿಯಲ್ಲಿ ಬೆಂಗಳೂರಿನ ಡೀಲ್‌Ø ಕಮ್ಯುನಿಕೇಶನ್‌ ಸಂಸ್ಥೆಯ ಡಾ| ಪ್ರತಿಭಾ ಕಾರಂತ್‌ ಅವರು ಆಟಿಸಂ ಮಕ್ಕಳ ಬಗ್ಗೆ ಮುತುವರ್ಜಿ ವಹಿಸಿದ್ದಾರೆ. 
 
ಶುರುವಾಗಲಿದೆ ಆಟಿಸಂ ಕೇಂದ್ರ  
ಪಾಂಬೂರಿನ ಮಾನಸ ಶಾಲೆಯಲ್ಲಿ ಡಾ| ಎ.ವಿ. ಬಾಳಿಗಾ ಆಸ್ಪತ್ರೆ ಮತ್ತು ಮಣಿಪಾಲದ ಕೆಎಂಸಿ ಸಹಯೋಗದಲ್ಲಿ ಆಟಿಸಂ ಸೆಂಟರ್‌ ಅನ್ನು ಆರಂಭಿಸಲು ಯೋಜಿಸಲಾಗಿದ್ದು, ಇದೇ ತಿಂಗಳಲ್ಲಿ ಸೆಂಟರ್‌ನ ಉದ್ಘಾಟನೆಯೂ ನಡೆಯಲಿದೆ.

ಮಕ್ಕಳಲ್ಲಿ “ಆಟಿಸಂ’ ಲಕ್ಷಣಗಳು
– ಮಕ್ಕಳಲ್ಲಿ ಮಾತಿನ ಬೆಳವಣಿಗೆ ತಡವಾಗುವುದು.
– ಕಣ್ಣಲ್ಲಿ ಕಣ್ಣಿಟ್ಟು ನೋಡದೇ ಇರುವುದು.
– ಆಟದ ಸಾಮಾನುಗಳ ಜತೆ ಆಟವಾಡದೇ ಇರುವುದು.
– ಅತಿಯಾಗಿ ಚಟುವಟಿಕೆಯಿಂದಿರುವುದು.
– ಬೇರೆ ಮಕ್ಕಳ ಜತೆ ಆಟಕ್ಕೆ ಹೋಗದಿರುವುದು.
– ಮಾಡಿದ್ದನ್ನೇ ಮಾಡುತ್ತಾ ಇರುವುದು.
– ತುಂಬಾ ಗಲಾಟೆ, ವಿಪರೀತ ಸಿಟ್ಟು ಮಾಡಿಕೊಳ್ಳುವುದು.

ಚಿಕಿತ್ಸೆ ಏನು? 
ಆಟಿಸಂ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ.ಥೆರಪಿ ಮಾತ್ರ. ಫಿಸಿಯೋಥೆರಪಿ,ಆಕ್ಯುಪೇಶನಲ್‌ ಥೆರಪಿ,ಸ್ಪೀಚ್‌ ಥೆರಪಿ ಮಾಡಬೇಕು.ಸದ್ಯ ಈ ಚಿಕಿತ್ಸೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಇದೆ.

ಅವಗಣನೆ ಬೇಡ 
ಆಟಿಸಂ ಲಕ್ಷಣ ಪತ್ತೆ ಆದಲ್ಲಿ ಕೂಡಲೇ ಮಕ್ಕಳ ತಜ್ಞರ ಬಳಿ ಕರೆದೊಯ್ದು ಪರೀಕ್ಷಿಸಿ. ನಿರ್ಲಕ್ಷ್ಯ ಮಾಡಬೇಡಿ. ಆಟಿಸಂಗೆ ತುತ್ತಾಗಿ ಸೂಕ್ತ ಆರೈಕೆ, ಥೆರಪಿ ಸಿಗದೇ ಹೋದಲ್ಲಿ ಅಂತಹ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಮಾಜದಲ್ಲಿ ಅವರು ಯಾರೊಂದಿಗೂ ಬೆರೆಯಲು ಇಷ್ಟಪಡದೆ ಒಂಟಿತನಕ್ಕೆ ಮೊರೆ ಹೋಗಬಹುದು. ಆಕ್ರಮಣಶೀಲರಾಗಿ ಬಿಡಬಹುದು.
– ಡಾ| ಪಿ.ವಿ. ಭಂಡಾರಿ,
ಪ್ರಖ್ಯಾತ ಮಾನಸಿಕ ತಜ್ಞ.

– ಚೇತನ್‌ ಪಡುಬಿದ್ರಿ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.