ಕರಾವಳಿ ಬೈಪಾಸ್ನಲ್ಲಿ ಕೆಟ್ಟು ನಿಂತ ಟ್ರಕ್: ಟ್ರಾಫಿಕ್ ಜಾಮ್
Team Udayavani, Nov 8, 2018, 11:12 AM IST
ಉಡುಪಿ: ಕರಾವಳಿ ಬೈಪಾಸ್ನ ಅಂಡರ್ಪಾಸ್ನಲ್ಲಿ ಬುಧವಾರ ಟ್ರಕ್ವೊಂದು ಕೆಟ್ಟು ನಿಂತ ಪರಿಣಾಮ ಸುಮಾರು ಒಂದು ಗಂಟೆ ಕಾಲ ಟ್ರಾಫಿಕ್ ಜಾಮ್ ಸಂಭವಿಸಿತು.
ಬುಧವಾರ ಸಂಜೆ 5.45ರ ಸುಮಾರಿಗೆ ಮಣಿಪಾಲ ಕಡೆಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಟ್ರಕ್ ಕರಾವಳಿ ಬೈಪಾಸ್ ಅಂಡರ್ಪಾಸ್ನಡಿ ತಿರುವು ಪಡೆಯುತ್ತಿರುವ ಸಂದರ್ಭ ಟ್ರಕ್ ಕೆಟ್ಟು ನಿಂತಿತು. ಇದು ಸಂಚಾರ ದಟ್ಟಣೆಯ ಸಮಯವಾದ್ದರಿಂದ ಮಲ್ಪೆ ಮತ್ತು ಕುಂದಾಪುರ ಕಡೆಗೆ ತೆರಳುವವರು ಮಲ್ಪೆ ಕಡೆಯಿಂದ ಬರುವವರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡರು.
ಪರದಾಡಿದ ಕೆಎಸ್ಆರ್ಟಿಸಿ
ಸ್ಥಳಕ್ಕೆ ಬಂದ ಪೊಲೀಸರು ಟ್ರಕ್ ನಡುವೆ ಇದ್ದ ಅಲ್ಪ ಸ್ಥಳದಲ್ಲೇ ಮೊದಲು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಆದರೆ ಕುಂದಾಪುರ ಕಡೆಗೆ ತೆರಳುವ ಕೆಎಸ್ಆರ್ಟಿಸಿ ಬಸ್ಸೊಂದು ಅಲ್ಲಿ ಸಿಲುಕಿಕೊಂಡಿತು. ಬಳಿಕ ಪೊಲೀಸರು ಸಂಚಾರ ಬದಲಾವಣೆ ಮಾಡಿ ಬಸ್ಗೆ ತೆರಳಲು ಅನುಕೂಲ ಮಾಡಿಕೊಟ್ಟರು.
ಬದಲಿ ವ್ಯವಸ್ಥೆ
ಬಳಿಕ ಉಡುಪಿ ಕಡೆಯಿಂದ ಮಲ್ಪೆ ಮತ್ತು ಕುಂದಾಪುರಕ್ಕೆ ತೆರಳುವವರು ಕರಾವಳಿ ಬೈಪಾಸ್ ಬಳಿ ಎಡಕ್ಕೆ ತಿರುಗಿ ಅಂಬಲಪಾಡಿ ಜಂಕ್ಷನ್ ಮೂಲಕ ಕುಂದಾಪುರ ಮತ್ತು ಮಲ್ಪೆಗೆ ತೆರಳಲು ಅವಕಾಶ ಮಾಡಿಕೊಡಲಾಯಿತು. ಮಲ್ಪೆ ಕಡೆಯಿಂದ ಉಡುಪಿಯತ್ತ ತೆರಳುವವರು ಅಂಡರ್ ಪಾಸ್ನ ಮತ್ತೂಂದು ಭಾಗದಿಂದ ತೆರಳಲು ಅನುಕೂಲ ಮಾಡಿಕೊಡಲಾಯಿತು.
ಕ್ರೇನ್ ಮೂಲಕ ತೆರವು
ಹಾಳಾದ ಟ್ರಕ್ಕನ್ನು ಪೊಲೀಸರು ಕ್ರೇನ್ ತರಿಸಿ ಸುಮಾರು ಅರ್ಧ ಗಂಟೆ ಕಾರ್ಯಾಚರಣೆ ಮಾಡಿ ತೆರವುಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್