ಟ್ರಾಪಿಕಲ್ ಪಾರಾಸೈಟಾಲಜಿ ಸಮ್ಮೇಳನ
Team Udayavani, Sep 10, 2019, 5:35 AM IST
ಉಡುಪಿ: ಮಣಿಪಾಲ ಕೆಎಂಸಿ ಮೈಕ್ರೋಬಯಾಲಜಿ ವಿಭಾಗ ಆಯೋಜಿಸಿದ ಎರಡು ದಿನಗಳ 13ನೆಯ ಇಂಡಿಯನ್ ಅಕಾಡೆಮಿ ಆಫ್ ಟ್ರಾಪಿಕಲ್ ಪಾರಾಸೈಟಾಲಜಿಯ ವಾರ್ಷಿಕ ಸಮ್ಮೇಳನವು ರವಿವಾರ ಸಮಾಪನಗೊಂಡಿತು.
ಸಂಶೋಧಕರು, ಫಿಸಿಶಿಯನ್, ಸಮುದಾಯ ಆರೋಗ್ಯ ಸಿಬಂದಿ, ಪಾರಾಸೈಟಾಲಜಿಸ್ಟ್ (ಪರೋಪಜೀವಿ ರೋಗ ಶಾಸ್ತ್ರಜ್ಞರು) ರೋಗ ಶಮನದ ಬಗ್ಗೆ ಹಳೆಯ ಕ್ರಮಗಳನ್ನು ಹೇಗೆ ಸುಧಾರಿಸಬಹುದು ಮತ್ತು ಹೊಸ ತಂತ್ರಗಳನ್ನು ಹೇಗೆ ಅಳವಡಿಸಬಹುದು ಎಂಬ ಬಗ್ಗೆ ಚರ್ಚಿಸಿದರು.
ದೊಡ್ಡವರು ಮತ್ತು ಮಕ್ಕಳ ಕರುಳುರೋಗ, ಕ್ಲಿನಿಕಲ್ ಆಯಾಮ ಮತ್ತು ರೋಗಪತ್ತೆ ವಿಧಾನದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಂಘಟನ ಸಮಿತಿ ಅಧ್ಯಕ್ಷ ಡಾ| ಕಿರಣ್ ಚಾವ್ಲಾ ಮತ್ತು ಕಾರ್ಯದರ್ಶಿ ಡಾ| ವಿನಯ ಖನ್ನಾ ಮಾತನಾಡಿದರು. ವಿವಿಧ ದೇಶಗಳ 100 ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಮಾಹೆ ವಿ.ವಿ. ಕುಲಪತಿ ಡಾ| ಎಚ್. ವಿನೋದ ಭಟ್ ಮುಖ್ಯ ಅತಿಥಿ ಯಾಗಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪುದುಚೇರಿ ಬಾಲಾಜಿ ವಿದ್ಯಾಪೀಠದ ಕುಲಪತಿ ಮತ್ತು ಅಕಾಡೆಮಿ ಅಧ್ಯಕ್ಷ ಡಾ| ಸುಭಾಸ್ ಚಂದ್ರ ಪಾರಿಜ ಮಾತನಾಡಿದರು.
ಚೆನ್ನೈಯ ಡಾ| ಎಂಜಿಆರ್ ಶೈಕ್ಷಣಿಕ ಮತ್ತು ಸಂಶೋಧನ ಸಂಸ್ಥೆ ಕುಲಪತಿ ಡಾ| ಗೀತಾಲಕ್ಷ್ಮೀ, ಮಾಹೆ ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ, ಕೆಎಂಸಿ ಸಹ ಡೀನ್ ಡಾ| ಚಿರಂಜಯ ಮುಖೋಪಾಧ್ಯಾಯ, ಮಣಿಪಾಲ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ, ಅಕಾಡೆಮಿ ಕಾರ್ಯದರ್ಶಿ ಡಾ| ಉಜ್ಜಲ್ ಘೋಶಲ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ