ಇಂದು ತುಳಸೀ ಪೂಜೆ; ನೆಲ್ಲಿ, ಕಬ್ಬಿನ ಕುಡಿ, ಹೂ ಮಾರಾಟ
Team Udayavani, Nov 9, 2019, 12:05 AM IST
ಉಡುಪಿ: ಶ್ರೀಕೃಷ್ಣಮಠವೂ ಸೇರಿದಂತೆ ನಾಡಿನಾದ್ಯಂತ ತುಳಸೀಪೂಜೆ, ಕ್ಷಿರಾಬ್ದಿ ಪೂಜೆ ಶನಿವಾರ ನಡೆಯಲಿದೆ.
ಶನಿವಾರ ಉತ್ಥಾನದ್ವಾದಶಿಯಾದ ಕಾರಣ ಬೆಳಗ್ಗೆ ಬೇಗ ಪೂಜೆಗಳು ನಡೆ ಯುತ್ತವೆ. ಕೆಲವೆಡೆ ಶುಕ್ರವಾರ ಸಂಜೆ ತುಳಸೀ ಪೂಜೆ ನಡೆಯಿತು.
ಶ್ರೀಕೃಷ್ಣಮಠದಲ್ಲಿ ಶನಿವಾರ ಸಂಜೆ ಲಕ್ಷದೀಪೋತ್ಸವ ಜರಗಲಿದೆ. ಇದೇ ದಿನ ಮಧ್ವಸರೋವರದ ಮಧ್ಯದ ಮಂಟಪದಲ್ಲಿ ಕ್ಷೀರಾಬ್ದಿ ಪೂಜೆ, ತುಳಸೀ ವಿವಾಹ ಸಂಪ್ರದಾಯ ನಡೆದ ಬಳಿಕ ಉತ್ಸವ ಮೂರ್ತಿಗಳನ್ನು ಹೊರತರಲಾಗುತ್ತಿದೆ. ಶ್ರೀಕೃಷ್ಣಮಠ ಮತ್ತು ನಾಡಿನಲ್ಲಿ ಉತ್ಸವಗಳ ಋತು ಆರಂಭವಾಗುವುದು ಇದೇ ದಿನ. ಮೊದಲ ಮೂರು ದಿನ ವಾಡಿಕೆಯ ಲಕ್ಷದೀಪೋತ್ಸವವಾದರೆ, ಮತ್ತೆರಡು ದಿನ ಸೇವಾದಾರರಿಂದ ನಡೆಯುತ್ತದೆ.
ಜನರು ಕಡಿಮೆ ಸಂಖ್ಯೆಯಲ್ಲಿ ಬರುತ್ತಿ ದ್ದಾರೆ. ನಮಗಿದು ಲಾಭದಾಯಕ ವಾಗುತ್ತಿಲ್ಲ ಎಂದು ಹೂವು ಮಾರಾಟ ಮಾಡುವವರು ಹೇಳಿದ್ದಾರೆ.
ವಿವಿಧ ವಸ್ತುಗಳ ಮಾರಾಟ
ರಥಬೀದಿಯ ಸುತ್ತಲೂ ದೂರದ ಊರುಗಳಿಂದ ಬಂದ ಮಾರಾಟಗಾರರು ಕಂಡು ಬಂದರು. ನೆಲ್ಲಿಕುಡಿ, ಕಬ್ಬಿನ ಕುಡಿ, ವಿವಿಧ ಹೂವುಗಳು ಮಾರಾಟವಾದವು. ನೆಲ್ಲಿಕುಡಿ, ಕಬ್ಬಿನ ಕುಡಿಗೆ ತಲಾ 30 ರೂ. ಇತ್ತು. ಸೇವಂತಿಗೆ, ಕಾಕಡ, ಕೆಂಪು ಸೇವಂತಿಗೆ ಹೂವುಗಳು ಮಾರಿಗೆ 50ರಿಂದ 60 ರೂ.ಗೆ ಮಾರಾಟಗೊಂಡವು. ದೀಪ ಉರಿಸಲೋಸುಗ ಬಿಡಿ ನೆಲ್ಲಿಕಾಯಿಗಳೂ ಮಾರಾಟವಾದವು. ಎರಡು ದಿನಗಳ ಹಿಂದೆ ಹೂವಿನ ದರ ಮಾರಿಗೆ 100 ರೂ. ಇತ್ತು. ಹಾಸನ, ಸಕಲೇಶಪುರ, ಚಿಕ್ಕಮಗಳೂರು ಮೊದಲಾದೆಡೆಗಳಿಂದ ಸುಮಾರು ಮೂರು ಲಾರಿಗಳಲ್ಲಿ ಹೂವುಗಳು ಬಂದಿವೆ. ಇವುಗಳಲ್ಲಿ ಕೆಲವು ಮಾರಾಟಗಾರರು ಸ್ವತಃ ಬೆಳೆಗಾರರೂ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
Veerappa Moily; ದೇಶಕ್ಕೆ ಕ್ರಿಕೆಟ್ ಕಾಮೆಂಟ್ರಿಯನ್ ಬೇಕಿಲ್ಲ
Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ