ಉಡುಪಿ; ಹೃದಯಾಕೃತಿ ಹೆಡೆಯ ನಾಗರಹಾವು ಪತ್ತೆ
Team Udayavani, Jan 4, 2017, 10:57 PM IST
ಉಡುಪಿ: ಪರ್ಕಳದ ರಾಜೇಶ್ ಕೋಟ್ಯಾನ್ ಅವರ ಮನೆಯಲ್ಲಿ ವಿಶಿಷ್ಟ ಹೆಡೆಯ ಅಪರೂಪದ ನಾಗರಹಾವು ಪತ್ತೆಯಾಗಿದೆ. ಜ. 2ರಂದು ಮನೆಯೊಳಗೆ ಇಲಿ ಹಿಡಿಯಲು ಬಂದ ಹೆಣ್ಣು ಹಾವಿದು. ಮಾಡಿನಲ್ಲಿ ಇಲಿ ಸಿಗದೆ ಸೌದೆ ಶೇಖರಣೆ ಕೋಣೆಯೊಳಗೆ ಹೊಕ್ಕು ಅಲ್ಲಿನ ಇಲಿಗಳನ್ನು ಹಿಡಿದು ತಿನ್ನುವ ಧಾವಂತದಲ್ಲಿದ್ದ ಹಾವು ಮನೆಮಂದಿಯ ದೃಷ್ಟಿಗೆ ಬಿದ್ದುದರಿಂದ ತತ್ಕ್ಷಣ ಉರಗತಜ್ಞ ಗುರುರಾಜ ಸನಿಲ್ರಿಗೆ ಕರೆ ಹೋಯಿತು. ಗುರುರಾಜರು ಕಟ್ಟಿಗೆ ರಾಶಿಯನ್ನು ಹೊರಗೆ ಹಾಕುತ್ತಿದ್ದಾಗ ಹಾವು ಹೊರಹೋಗಲು ಪ್ರಯತ್ನಿಸಿತು. ಅದನ್ನು ಹಿಡಿದಾಗ ಗುರುರಾಜರಿಗೆ ಅಚ್ಚರಿ ಕಾದಿತ್ತು.
ಪ್ರಕೃತಿ ವಿಸ್ಮಯ: ಸುಮಾರು 30 ವರ್ಷಗಳಿಂದ ಹಾವುಗಳ ಒಡನಾಟದಲ್ಲಿರುವ ಗುರುರಾಜರು ಹಿಡಿದ ಹಾವುಗಳ ಸಂಖ್ಯೆ ಸುಮಾರು 20,000. ಅವುಗಳಲ್ಲಿ ಸುಮಾರು 15,000 ನಾಗರಹಾವುಗಳೇ. ಅಷ್ಟು ನಾಗರಹಾವುಗಳಲ್ಲಿ ಈ ರೀತಿಯ ಹೃದಯಾಕೃತಿ ಹೆಡೆ ಗುರುತಿದ್ದ ಹಾವು ಕಾಣಲು ಸಿಕ್ಕಿದ್ದು ಇದೇ ಮೊದಲು. ಸಾಮಾನ್ಯ ನಾಗರಹಾವಿನ ಹೆಡೆಗಿಂತಲೂ ಭಿನ್ನವಾಗಿ ಇದರ ಹೆಡೆ ಇದೆ. ಇದು ಸಾಮಾನ್ಯ ನಾಗರಹಾವೇ. ಆದರೆ ಇದೊಂದು ಪ್ರಕೃತಿ ವಿಸ್ಮಯ.
ಪ್ರದೇಶ, ಹವಾಮಾನ, ಶತ್ರು ಪ್ರಾಣಿಗಳಿಂದ ಆತ್ಮರಕ್ಷಣೆ ಮಾಡಿಕೊಳ್ಳಲು, ಆಹಾರದ ಜೀವಿಗಳನ್ನು ತಿನ್ನಲು ಬಣ್ಣ, ವಿನ್ಯಾಸವನ್ನು ಪ್ರಾಣಿಗಳು ರೂಪಿಸಿಕೊಳ್ಳುತ್ತವೆ ಎಂದು ಅವರು ತಿಳಿಸಿದ್ದಾರೆ. ಇವುಗಳಿಂದ ಇತರ ಪ್ರಾಣಿಗಳಿಂದ ರಕ್ಷಣೆ ಪಡೆದುಕೊಳ್ಳಬಹುದು, ಮನುಷ್ಯರ ಕೈಗೆ ಸಿಕ್ಕಿ ಅಪಾಯಕ್ಕೂ ಸಿಲುಕಬಹುದು ಎನ್ನುತ್ತಾರೆ ಗುರುರಾಜ್ ಸನಿಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ