“ಚಿಗುರು ಚಿತ್ರ-2018′: ವಿಜೇತರಿಗೆ ಬಹುಮಾನ ವಿತರಣೆ
Team Udayavani, Dec 2, 2018, 6:00 AM IST
ಉಡುಪಿ: ಮಕ್ಕಳ ದಿನಾಚರಣೆ ಪ್ರಯುಕ್ತ “ಉದಯವಾಣಿ’ ದೈನಿಕ ಏರ್ಪಡಿಸಿದ ಫೋಟೋ ಸ್ಪರ್ಧೆ “ಚಿಗುರು ಚಿತ್ರ – 2018’ರಲ್ಲಿ ವಿಜೇತ ಮಕ್ಕಳಿಗೆ ಮಣಿಪಾಲದ ಮಧುವನ ಸೆರಾಯ್ ಹೊಟೇಲ್ ಸಭಾಂಗಣದಲ್ಲಿ ಶನಿವಾರ ಬಹುಮಾನ ವಿತರಣೆ ನಡೆಯಿತು.
ಬಹುಮಾನ ವಿತರಿಸಿದ ಮಣಿಪಾಲ್ ಮೀಡಿಯ ನೆಟ್ವರ್ಕ್ ಲಿ., ಸಿಇಒ ವಿನೋದ ಕುಮಾರ್ ಅವರು ಮಾತನಾಡಿ, ಉದಯವಾಣಿ ಬಹಳ ವರ್ಷಗಳಿಂದ ಈ ಸ್ಪರ್ಧೆ ನಡೆಸುತ್ತಿದೆ. ಇದೊಂದು ಸಂಭ್ರಮದ ಕ್ಷಣ. ಹುಟ್ಟಿದ ದಿನ, ಮಾತನಾಡಲು ಶುರು ಮಾಡಿದ ದಿನ, ನಿಂತುಕೊಳ್ಳಲು ಶುರು ಮಾಡಿದ ದಿನ ಹೀಗೆ ಬೇರೆ ಬೇರೆ ದಿನಾಂಕಗಳನ್ನು ದಾಖಲಿಸುತ್ತೇವೆ. “ಉದಯವಾಣಿ’ ಕೂಡ ನಿಮ್ಮ ಮಕ್ಕಳ ಚಿತ್ರವನ್ನು ಪ್ರಕಟಿಸುವ ಮೂಲಕ ದಾಖಲಿಸುತ್ತದೆ. ಭವಿಷ್ಯದಲ್ಲಿ ದೇಶ- ವಿದೇಶ ಮಟ್ಟದ ಪತ್ರಿಕೆಗಳಲ್ಲಿ ನಿಮ್ಮ ಮಗುವಿನ ಚಿತ್ರ ಮುದ್ರಣವಾಗಬಹುದು. ಆಗ ಮೊದಲು ಚಿತ್ರ ಪ್ರಕಟಿಸಿದ್ದು “ಉದಯವಾಣಿ’ ಆಗಿರುವುದನ್ನು ನೀವು ನೆನಪಿಸಿಕೊಳ್ಳುತ್ತೀರಿ. ಒಂದು ವೇಳೆ ಮಕ್ಕಳು ನೆನಪಿಸಿಕೊಳ್ಳದೆ ಇದ್ದರೂ ಪೋಷಕರು ನೆನಪಿಸಿಕೊಡಬೇಕು ಎಂದು ಹೇಳಿದರು. ಎಂಎಂಎನ್ಎಲ್ ನ್ಯಾಶನಲ್ ಸೇಲ್ಸ್ ಹೆಡ್ (ಮೆಗಜಿನ್ಸ್ ಆ್ಯಂಡ್ ಸ್ಪೆಶಲ್ ಇನೀಶಿಯೇಟಿವ್ಸ್) ಆನಂದ್ ಎ. ಸ್ವಾಗತಿಸಿ, ಮಂಗಳೂರು ಮಾರುಕಟ್ಟೆ ವಿಭಾಗ ಮುಖ್ಯಸ್ಥ ರಾಮಚಂದ್ರ ಮಿಜಾರು ವಂದಿಸಿದರು.
ಇದೇ ಸಂದರ್ಭ ಉದಯವಾಣಿ ಆನ್ಲೈನ್ ವಿಭಾಗದವರು ಆಯೋಜಿಸಿದ ಸ್ಪರ್ಧೆ ಯಲ್ಲಿ ವಿಜೇತರಾದವರಿಗೂ ಬಹುಮಾನ ವಿತರಿಸಲಾಯಿತು.
ಚಿಗುರು ಚಿತ್ರ ವಿಜೇತರ ಸಂಭ್ರಮ
ಚಿಗುರು ಚಿತ್ರ 2018ರ ಬಹುಮಾನಿತ ಮುದ್ದು ಮಕ್ಕಳು ತಮ್ಮ ಹೆತ್ತವರೊಂದಿಗೆ ಸಮಾರಂಭದಲ್ಲಿ ಹಾಜರಿದ್ದು ಇತರ ಮಕ್ಕಳ ಜತೆ ನಲಿದು ಸಂಭ್ರಮಪಟ್ಟರು. ಪ್ರಥಮ ಸ್ಥಾನ ಪಡೆದ ಕಾರ್ಕಳದ ರಿವಾ ಫಾವ್ಸ್ತಾ, ದ್ವಿತೀಯ ಸ್ಥಾನಿ ಮೂಡುಬಿದಿರೆಯ ಆತ್ರೇಯ ಕೃಷ್ಣ, ತೃತೀಯ ಸ್ಥಾನ ಗೆದ್ದ ಮೂಲ್ಕಿಯ ಅದ್ವಿತಿ, ಮಣಿಪಾಲದ ಪ್ರದ್ಯುಮ್ನ, ಗುರುಪುರದ ಶೈವಿ, ಉಡುಪಿಯ ವಿಹಾನ್Ï, ಕಿನ್ನಿಗೋಳಿಯ ಕೇನ್ ನಝತ್, ಕಾರ್ಕಳದ ಅದ್ವೆ„ತ್ ಸಹಿತ ಸಮಾಧಾನಕರ ಬಹುಮಾನ ಪಡೆದ ಮಕ್ಕಳು ತಮ್ಮ ಹೆತ್ತವರೊಂದಿಗೆ ಸಮಾರಂಭದಲ್ಲಿ ಪಾಲ್ಗೊಂಡು ಸ್ಮರಣೀಯಗೊಳಿಸಿದರು. ಇದರ ಜತೆಗೆ ಉದಯವಾಣಿಯ ಆನ್ಲೈನ್ ವಿಭಾಗವೂ ಏರ್ಪಡಿಸಿದ್ದ ಪಬ್ಲಿಕ್ ಚಾಯ್ಸ ಸ್ಪರ್ಧೆಯಲ್ಲಿ ವಿಜೇತರಾದ ಜಾಯ್ ಬ್ರಿಯಲ್ ಪಿರೇರಾ, ಪರೀಶಾ ಕೋಟ್ಯಾನ್ ಮತ್ತು ದೇವರಾಜನ್ ಅವರಿಗೂ ಬಹುಮಾನ ವಿತರಿಸಲಾಯಿತು.
ತುಂಟಾಟ ಪ್ರದರ್ಶನ
ವಿಜೇತ ಮಕ್ಕಳಿಗೆ ನಗದು ಸಹಿತ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದುದ್ದಕ್ಕೂ ಮಕ್ಕಳು ಇತರ ಮಕ್ಕಳ ಜತೆ ನಾನಾ ರೀತಿಯ ತುಂಟಾಟ ಪ್ರದರ್ಶಿಸುತ್ತ ತಮ್ಮ ಹೆತ್ತವರೊಂದಿಗೆ ಸಂತಸದ ಕ್ಷಣಗಳನ್ನು ಸೃಷ್ಟಿಸಿದರು. ಬಹುಮಾನ ಸ್ವೀಕರಿಸುತ್ತಾ ಫೋಟೋಗೆ ಪೋಸ್ ಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ