ಅಜ್ಜರಕಾಡು ವಾರ್ಡ್‌ನಲ್ಲಿ ತಿಂಗಳಿಂದ ನೀರಿನ ಸಮಸ್ಯೆ

ಹನುಮಾನ್‌ ಕಾಲನಿ, ಕಾನ್ವೆಂಟ್‌ ರೋಡ್‌ ಪರಿಸರ ನಿವಾಸಿಗಳ ಪರದಾಟ

Team Udayavani, Jan 28, 2020, 5:02 AM IST

2701UDBB1

ನೀರಿನ ಸಮಸ್ಯೆ ಇರುವ ಸ್ಥಳಕ್ಕೆ ಎರಡು ದಿನಗಳ ಹಿಂದೆ ನಗರ ಸಭೆಯ ಅಧಿಕಾರಿಗಳು ಭೇಟಿ ನೀಡಿ ನೀರಿನ ಪೈಪು ಹಾದುಹೋದ ಸ್ಥಳಗಳನ್ನು ಪರಿಶೀಲಿಸಿದ್ದರು. ದುರಸ್ತಿಯಾಗುವ ಲಕ್ಷಣ ಕಂಡುಬಂದಿಲ್ಲ. ಪರಿಹಾರ ಸಿಗುವಲ್ಲಿವರೆಗೆ ಟ್ಯಾಂಕರ್‌ ಮೂಲಕ ನೀರು ಒದಗಿಸುವಂತೆ ನಿವಾಸಿಗಳು ಆಗ್ರಹಿಸಿದ್ದಾರೆ.

ಉಡುಪಿ: ಅಜ್ಜರಕಾಡು ವಾರ್ಡ್‌ನಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಇಲ್ಲಿನ ಹನುಮಾನ್‌ ಕಾಲನಿ, ಕಾನ್ವೆಂಟ್‌ ರೋಡ್‌ ಪರಿಸರದ 10ಕ್ಕೂ ಅಧಿಕ ನಿವಾಸಿಗಳು ಹನಿ ನೀರಿಗೂ ಪರದಾಡುತ್ತಿದ್ದಾರೆ.

ನಗರಸಭೆಗೆ ಇಲ್ಲಿನವರು ನೀರಿನ ತೆರಿಗೆ ಪಾವತಿ ಮಾಡುತ್ತಿದ್ದರೂ ಮನೆಗಳಿಗೆ ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಸುದರ್ಶನ ರೆಸಿಡೆನ್ಸಿ ಆಸುಪಾಸಿನ ಮನೆಗಳಿಗೆ ನೀರು ಸರಬರಾಜಾಗದೆ ಪರಿಸ್ಥಿತಿ ಬಿಗಡಾಯಿಸಿದೆ. 8 ಮನೆಗಳ ನಳ್ಳಿಗಳಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಬಂದರೆ ಪುಣ್ಯ ಎಂಬಂತಿದ್ದರೆ ಎರಡು ಮನೆಗಳಿಗೆ ಒಂದು ತೊಟ್ಟೂ ನೀರು ಬರುತ್ತಿಲ್ಲ.

ಕಾರಣ ಏನು?
ಒಂದೇ ಓವರ್‌ ಹೆಡ್‌ ಟ್ಯಾಂಕಿನಿಂದ ಕೊಳವೆ ಪೈಪುಗಳ ಮೂಲಕ ನೀರು ಸರಬರಾಜಾಗುತ್ತಿದೆ. ನೀರು ಹರಿಯುವ ಪೈಪ್‌ಗ್ಳಿಗೆ ಹೆಚ್ಚು ಸಂಪರ್ಕ ಅಳವಡಿ ಸಿದ್ದರಿಂದ ಒತ್ತಡ ಹೆಚ್ಚಾಗಿದೆ. ಹೊಸದಾಗಿ ಪೈಪುಗಳ ಜೋಡಣೆಯಾಗದೆ ಇರುವುದರಿಂದ ಸರಬರಾಜಿನಲ್ಲಿ ನ್ಯೂನ್ಯತೆಗಳಾಗಿವೆ ಎನ್ನುತ್ತಾರೆ ನಗರಸಭೆ ಎಂಜಿನಿಯರ್‌ಗಳು. ಸುದರ್ಶನ್‌ ರೆಸಿಡೆನ್ಸ್‌, ಸೋಲ್‌ ಅಪಾರ್ಟ್‌ಮೆಂಟ್‌ಗಳಿಗೆ ನೀರು ಹರಿಯುತ್ತಿದ್ದರೆ ಅಲ್ಲೇ ಪಕ್ಕದ ಮನೆಗಳಿಗೆ ನೀರಿಲ್ಲ.

ಟ್ಯಾಂಕರ್‌ಗಳಿಗೆ ದುಪ್ಪಟ್ಟು ಹಣ
ಇಲ್ಲಿನ ಕೆಲವು ನಿವಾಸಿಗಳು ನೀರಿಗಾಗಿ ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ. ಒಂದು ಟ್ಯಾಂಕರ್‌ ನೀರಿಗೆ 1,500 ರೂ. ವರೆಗೆ ವ್ಯಯಿಸುತ್ತಾರೆ. ಅದು ಒಂದು ವಾರದ ತನಕ ಬಳಕೆಗೆ ಬರುತ್ತದೆ. ಮತ್ತೆ ಟ್ಯಾಂಕರ್‌ ನೀರು ತರಬೇಕು. ಹೀಗೆ ತಿಂಗಳಿಗೆ 6,000 ರೂ. ನಷ್ಟು ನೀರಿಗಾಗಿಯೇ ವ್ಯಯಿಸುತ್ತಾರೆ.

ನೀರು ಸರಬರಾಜು ಸ್ಥಗಿತಗೊಂಡ ಸಂದರ್ಭ ಬಳಕೆದಾರರು ಸಮಸ್ಯೆಯನ್ನು ನಗರ ಸಭೆ ಗಮನಕ್ಕೆ ತಂದಿದ್ದರು. ಶಾಸಕರ ಬಳಿಯೂ ನಿವೇದಿಸಿಕೊಂಡಿದ್ದರು. ಸರಿಪಡಿಸಿ ಕೊಡುವ ಭರವಸೆಯೂ ಅಧಿಕಾರಿಗಳಿಂದ ಸಿಕ್ಕಿತ್ತು. ಆದರೆ ಯಾವುದೂ ಪ್ರಯೋಜನಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳೀಯರು.

ಸಮಸ್ಯೆ ನಿವಾರಣೆಗೆ ಯತ್ನ
ನೀರಿಗಾಗಿ ಇಲ್ಲಿನ ನಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆ ತಿಳಿದಿದೆ. ಸರಿಪಡಿಸುವ ಪ್ರಯತ್ನ ನಡೆಸುತ್ತಿದ್ದೇವೆ. ನೀರು ಹರಿಯುವ ಪೈಪುಗಳಲ್ಲಿ ನೀರಿನ ಒತ್ತಡ ಹಾಗೂ ಹೆಚ್ಚು ಸಂಪರ್ಕದಿಂದ ಸಮಸ್ಯೆಯಾಗಿದೆ. ದುರಸ್ತಿ ಕಾರ್ಯ ಪ್ರಗತಿಯಲ್ಲಿವೆ. ಒಂದೆರಡು ದಿನಗಳಲ್ಲಿ ಸಮಸ್ಯೆ ನಿವಾರಣೆಗೊಳ್ಳಲಿದೆ.
-ಅಶ್ವಿ‌ನಿ, ಎಂಜಿನಿಯರ್‌ ನಗರ ಸಭೆ

ನೀರು ಬರುತ್ತಲೇ ಇಲ್ಲ!
ನಮ್ಮ ಮನೆಗೆ ಡಿಸೆಂಬರ್‌ ಅಂತ್ಯದಿಂದ ಸರಿಯಾಗಿ ನೀರು ಬರುತಿಲ್ಲ. ಆರಂಭದಲ್ಲಿ ಸ್ವಲ್ಪ ಬರುತಿತ್ತು. ಕಳೆದ 10 ದಿನಗಳಿಂದ ಹನಿ ನೀರು ಕೂಡ ಬರುತ್ತಿಲ್ಲ. ಹಣ ನೀಡಿ ನೀರು ಖರೀದಿಸುತ್ತಿದ್ದೇವೆ. ಅಧಿಕಾರಿಗಳು ಹಾಗೂ ಶಾಸಕರಿಗೂ ದೂರು ನೀಡಿದ್ದೇವೆ.
-ಅನಿತಾ ಫೆರ್ನಾಂಡಿಸ್‌,ಸ್ಥಳೀಯರು

ಅಧಿಕಾರಿಗಳ ಗಮನಕ್ಕೆ
ನೀರಿನ ಸಮಸ್ಯೆ ಎದುರಿಸುತ್ತಿರುವ ನಿವಾಸಿಗಳು ಸಮಸ್ಯೆಯನ್ನು ನ‌ನ್ನ ಗಮನಕ್ಕೆ ತಂದಿದ್ದಾರೆ. ದೂರನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಜನಪ್ರತಿನಿಧಿ ನೆಲೆಯಲ್ಲಿ ಮಾಡಿದ್ದೇನೆ. ಶಾಸಕರ ಗಮನಕ್ಕೂ ತಂದಿದ್ದೇನೆ.
-ರಶ್ಮಿ ಭಟ್‌,ವಾರ್ಡ್‌ ಸದಸ್ಯೆ

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Tiger

Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.