ಉಡುಪಿ: ಪ್ರದೇಶವಾರು ನೀರು ಪೂರೈಕೆ ಆರಂಭ
Team Udayavani, May 9, 2019, 6:00 AM IST
ಉಡುಪಿ: ನಿರಂತರ ಐದು ದಿನ ನೀರು ಪೂರೈಕೆ ಇಲ್ಲದೆ ಕಂಗೆಟ್ಟಿದ್ದ ಉಡುಪಿ ನಗರಸಭೆಯ ಒಂದೊಂದು ಪ್ರದೇಶಗಳಿಗೆ ಬುಧವಾರದಿಂದ ನೀರು ಪೂರೈಸಲಾಗುತ್ತಿದೆ.
ಬಜೆ ಡ್ಯಾಂನ ನೀರು ಪೂರ್ತಿ ಖಾಲಿಯಾಗಿರುವುದರಿಂದ ಹಳ್ಳಗಳಲ್ಲಿ ರುವ ನೀರನ್ನು ಮೇಲೆತ್ತಿ ಮುಖ್ಯ ಪಂಪ್ ಇರುವಲ್ಲಿಗೆ ಪೂರೈಸಲಾಗುತ್ತಿದೆ. ಅಲ್ಲಿಂದ ಶುದ್ಧೀಕರಿಸಿ ಓವರ್ಹೆಡ್ ಟ್ಯಾಂಕ್ಗಳಿಗೆ ತುಂಬಲಾಗುತ್ತಿದೆ.
ಬುಧವಾರ ಬೆಳಗ್ಗೆ ಮಲ್ಪೆಯ ವಿವಿಧ ಪ್ರದೇಶಗಳಿಗೆ ನೀರು ಒದಗಿಸಲಾಗಿದೆ. ಗುರುವಾರ ಬೆಳಗ್ಗೆ ಅಥವಾ ಅಪರಾಹ್ನ ಉಡುಪಿ, ಮಣಿಪಾಲ, ನಿಟ್ಟೂರು, ಸಂತೆಕಟ್ಟೆ, ಹನುಮಂತ ನಗರ, ರಾಜೀವ್ ನಗರ ಸುತ್ತಮುತ್ತಲಿನ ಪರಿಸರಕ್ಕೆ ನೀರು ಪೂರೈಸಲಾಗುತ್ತದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.
ಮಂಗಳವಾರದಿಂದ ಮೂರು ಬೃಹತ್ ಪಂಪ್ಗ್ಳ ಮೂಲಕ ನೀರೆತ್ತಲಾಗುತ್ತಿದೆ. ಈ ನಡುವೆ ಒಂದು ಪಂಪ್ ಹಾಳಾಗಿದ್ದು, ಅದನ್ನು ದುರಸ್ತಿ ಮಾಡಲಾಗುತ್ತಿದೆ. ಗುರುವಾರ ಇನ್ನಷ್ಟು ಪ್ರದೇಶಗಳಿಗೆ ನೀರು ಒದಗಿಸಲಾಗುತ್ತದೆ. ನಗರ ಸಭೆಯ ಎಲ್ಲ ಅಧಿಕಾರಿಗಳು ಬಜೆ ಪರಿಸರದಲ್ಲಿಯೇ ಮೊಕ್ಕಾಂ ಹೂಡಿ ದ್ದೇವೆ ಎಂದು ಪೌರಾಯುಕ್ತ ಗಣೇಶ್ ಕೆ. ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್