ಉಡುಪಿ ಸಿಟಿ ಬಸ್ ನಿಲ್ದಾಣ: ಕತ್ತಲೆಯಿಂದ ಮುಕ್ತಿಯತ್ತ…
Team Udayavani, Jun 4, 2018, 6:35 AM IST
ಉಡುಪಿ: ಉಡುಪಿ ನಗರಸಭೆಯ ಅಧೀನದಲ್ಲಿ ನಿರ್ವಹಣೆ ಯಲ್ಲಿರುವ ಉಡುಪಿ ಸಿಟಿ ಬಸ್ ನಿಲ್ದಾಣ ದಲ್ಲಿದ್ದ ಹೈಮಾಸ್ಟ್ ದೀಪವು ಕೆಟ್ಟು ಹೋಗಿ ಸುಮಾರು ಒಂದು ತಿಂಗಳ ಬಳಿಕ ರಿಪೇರಿ ಕಾರ್ಯ ನಡೆದಿದ್ದು ಕತ್ತಲೆಯಿಂದ ಮುಕ್ತಿ ಸಿಕ್ಕುವ ಹಂತದಲ್ಲಿದೆ.
ಸಿಟಿ ಬಸ್ ನಿಲ್ದಾಣದ ಮಧ್ಯಭಾಗದಲ್ಲಿ ಹೈಮಾಸ್ಟ್ ಕಂಬವಿದ್ದು, ಇದರಲ್ಲಿ 6 ಉರಿಯುವ ವಿದ್ಯುತ್ ದೀಪಗಳಿದೆ. ಮೊದಲು ಎಲ್ಲ ದೀಪಗಳು ಉರಿಯುತ್ತ ಲಿದ್ದು, ಕ್ರಮೇಣ ಒಂದೊಂದೇ ದೀಪ ಹಾಳಾಗುತ್ತಾ ಹೋಗಿದೆ. ಕಳೆದೊಂದು ತಿಂಗಳಿನಿಂದ ರಾತ್ರಿಯಾದ ಬಳಿಕ ಸೂಕ್ತ ವಾದ ಬೆಳಕಿನ ವ್ಯವಸ್ಥೆ ಇಲ್ಲಿಲ್ಲದೆ ಬಸ್ಗಾಗಿ ಕಾಯುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದವು.
ನಗರಸಭೆ ಗಮನಕ್ಕೆ ತಂದರೂ, ತಡವಾಗಿ ಎಚ್ಚೆತ್ತುಕೊಂಡಿದ್ದಾರೆ ಎಂದು ಪರಿಸರದ ವ್ಯಾಪಾರಸ್ಥರೊಬ್ಬರು ತಿಳಿಸಿದ್ದಾರೆ.
ದಾರಿದೀಪ, ಚರಂಡಿ ನಿರ್ವಹಣೆಯಲ್ಲಿ ನಗರಸಭೆ ಆಡಳಿತವು ಸಂಪೂರ್ಣ ವಿಫಲವಾಗಿದೆ. ನಗರದಲ್ಲಿ ಈ ಬಾರಿಯ ಮಳೆಗಾಲದ ಆರಂಭದಲ್ಲಾದ ಅವಘಡ ಕಣ್ಣ ಮುಂದಿದೆ. ಇನ್ನು ಮಳೆಗಾಲಕ್ಕೆ ದಾರಿದೀಪ ಕೈಕೊಡುವುದು ಸಾಮಾನ್ಯ ವಾಗಿದೆ. ಅದನ್ನು ಕೂಡಲೇ ಸರಿಪಡಿಸುವುದು ನಗರಸಭೆಯ ಕರ್ತವ್ಯ. ಇಲ್ಲದಿದ್ದರೆ ಕಳ್ಳರು ಕೈಚಳಕ ತೋರಿಸುತ್ತಾರೆ, ನಡೆದಾಡು ವವರಿಗೂ ಪರದಾಟ ತಪ್ಪಿದ್ದಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್