ಉಡುಪಿ ಜಿಲ್ಲೆ : ಬಂದ್‌ಗೆ ಮಿಶ್ರ ಪ್ರತಿಕ್ರಿಯೆ; ಜನ ಸಂಚಾರ ವಿರಳ


Team Udayavani, Sep 11, 2018, 12:01 PM IST

udupi-bund-1.jpg

ಉಡುಪಿ: ಸೋಮವಾರ ನಡೆದ ಬಂದ್‌ಗೆ ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧೆಡೆ ಬಂದ್‌ ಪರ ಮತ್ತು ವಿರೋಧದ ಘೋಷಣೆಗಳು ಕೇಳಿಬಂದವು. ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದ ಕಾರಣ ಗೊಂದಲ ಇರಲಿಲ್ಲ. ಸರಕಾರಿ ಮತ್ತು ಬ್ಯಾಂಕ್‌ ಇತ್ಯಾದಿ ಕಚೇರಿಗಳು ಬಿಕೋ ಎನ್ನುತ್ತಿದ್ದವು. ವಿವಿಧೆಡೆ ಕಾಂಗ್ರೆಸ್‌ ಕಾರ್ಯಕರ್ತರು ಬಂದ್‌ ನಡೆಸಲು ಮನವಿ ಮಾಡಿದರು, ಬಿಜೆಪಿಯವರು ಬಲಾತ್ಕಾರದ ಬಂದ್‌ ಆಚರಿಸಬಾರದು ಎಂದು ಆಗ್ರಹಿಸಿದರು.

ಉಡುಪಿ ತಾಲೂಕು
ಉಡುಪಿ ನಗರದಲ್ಲಿ ಬಂದ್‌ಗೆ ಪರ – ವಿರೋಧ ಬಹಿರಂಗವಾಗಿ ವ್ಯಕ್ತವಾಯಿತು. ಬಹುತೇಕ ಅಂಗಡಿ, ಹೊಟೇಲ್‌ಗ‌ಳು ಬಂದ್‌ ಆಗಿದ್ದವು. ಬಸ್‌ ಸಂಚಾರ ವಿರದ ಕಾರಣ ಜನಸಂಚಾರ ವಿರಳವಿತ್ತು. ಆಟೋ ರಿಕ್ಷಾಗಳು ಕೆಲವೆಡೆ ಬಂದ್‌ ಆಚರಿಸಲಿಲ್ಲ. ಬಂದ್‌ ಘರ್ಷಣೆ ವೇಳೆ ಕಾರ್ಯಕರ್ತರು ಗಾಯಗೊಂಡದ್ದು, ಎಸ್‌ಪಿ ಕಚೇರಿ ಎದುರು ಎಸ್‌ಪಿಯವರೇ ಸ್ವತಃ ಲಾಠಿ ಬೀಸಬೇಕಾಗಿ ಬಂದದ್ದು ಸೋಮವಾರದ ಕಪ್ಪುಚುಕ್ಕೆ.

ಕುಂದಾಪುರ, ಬೈಂದೂರು
ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಕುಂದಾಪುರ ನಗರದ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್‌ ಆಗಿದ್ದವು. ಆದರೆ ತಾಲೂಕಿನ ಇತರೆಡೆ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಖಾಸಗಿ ಹಾಗೂ ಸರಕಾರಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ರಿಕ್ಷಾ ಓಡಾಟ ಸೀಮಿತವಾಗಿತ್ತು. ಜನರ ಓಡಾಟ ವಿರಳ ವಾಗಿತ್ತು. ಕಾಂಗ್ರೆಸ್‌ನವರು ಬಂದ್‌ ಮಾಡಿಸುವಾಗ, ಬಿಜೆಪಿಯವರು ಅಂಗಡಿ ಪುನಃ ತೆರೆಸುವಾಗ ಪೊಲೀಸರ ಜತೆ ಮಾತಿನ ಚಕಮಕಿ ನಡೆದುದು ಬಿಟ್ಟರೆ ಎಲ್ಲೂ ಅಹಿತಕರ ಘಟನೆ ನಡೆದಿಲ್ಲ. ಎರಡೂ ಪಕ್ಷದವರು ರೋಡ್‌ಶೋ ನಡೆಸಿದರು. ಸಿಪಿಐಎಂ ಕೂಡ ಪ್ರತಿಭಟನೆ ನಡೆಸಿತು.

ಕಾರ್ಕಳ
ಕಾರ್ಕಳ: ತಾಲೂಕಿನಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದಲ್ಲಿ ಕೆಲವಷ್ಟೇ ಅಂಗಡಿಗಳು ಬಂದ್‌ ಆಗಿದ್ದು ಹೊರತುಪಡಿಸಿದರೆ ಎಂದಿನಂತೆ ಅಂಗಡಿಗಳು ತೆರೆದಿದ್ದವು. ಬೆಳ್ಮಣ್‌ನಲ್ಲಿ ಹೆಚ್ಚಿನ ಅಂಗಡಿಗಳು ಮುಚ್ಚಿದ್ದವು. ಬಜಗೋಳಿ, ಅಜೆಕಾರು ಭಾಗದಲ್ಲಿ ಕೆಲವಷ್ಟೇ ಅಂಗಡಿಗಳನ್ನು ಮುಚ್ಚಲಾಗಿತ್ತು. ಜನಸಂಖ್ಯೆ ವಿರಳವಾಗಿತ್ತು. ಬಸ್‌ ನಿಲ್ದಾಣದಲ್ಲಿ ಬಿಕೋ ಅನ್ನುತ್ತಿತ್ತು. ತಾಲೂಕು ಕಚೇರಿ ಸಮೀಪ ಕಾಂಗ್ರೆಸಿಗರು ಪ್ರತಿಭಟಿಸಿ ಧಿಕ್ಕಾರ ಕೂಗಿದರು.

ಕಾಪು
ಕಾಪು: ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಪೊಲಿಪು ಜಂಕ್ಷನ್‌ನಲ್ಲಿ ವಿನಯ ಕುಮಾರ ಸೊರಕೆ ನೇತೃತ್ವದಲ್ಲಿ  ಕಾರ್ಯ ಕರ್ತರು ರಾ.ಹೆ. ತಡೆದು ಪ್ರತಿಭಟಿಸಿದರು.

ಬ್ರಹ್ಮಾವರ, ಹೆಬ್ರಿ
ಬ್ರಹ್ಮಾವರ: ಬ್ರಹ್ಮಾವರದ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಬಂದ್‌ ಶಾಂತಿಯುತವಾಗಿತ್ತು. ಹೆಬ್ರಿ ಯಲ್ಲಿ ಬಂದ್‌ ಆಂಶಿಕವಾಗಿತ್ತು. ಕೆಲವು ಅಂಗಡಿ, ಹೊಟೇಲ್‌ಗ‌ಳು ಬಂದ್‌ ಆಗಿದ್ದವು.

ಪತ್ರಿಕೆಗೂ ರಿಯಾಯಿತಿ ನೀಡಿಲ್ಲ
ಮಂಗಳೂರು/ಉಡುಪಿ: ಸಾಮಾನ್ಯವಾಗಿ ಬಂದ್‌ ಸಂದರ್ಭ ಪತ್ರಿಕೆಗಳ ಮಾರಾಟಕ್ಕೆ ಅಡ್ಡಿ ಮಾಡುವುದಿಲ್ಲ. ಆದರೆ ಸೋಮವಾರ ಭಾರತ ಬಂದ್‌ ವೇಳೆ ದಕ್ಷಿಣ ಕನ್ನಡ, ಉಡುಪಿಯಲ್ಲಿ ಹಲವೆಡೆ ಪತ್ರಿಕೆ ಅಂಗಡಿಗಳನ್ನು ಕೂಡ ಬಂದ್‌ ಮಾಡಿಸಲಾಯಿತು. ಒಮ್ಮೆ ತೆರೆದ ಅಂಗಡಿಗಳನ್ನು ಮುಚ್ಚಿಸಲಾಯಿತು. ಮತ್ತೆ ಕೆಲವರು ಅಂಗಡಿ ತೆರೆದು ಪತ್ರಿಕೆ ಮಾರಾಟ ಮಾಡಲು ಮುಂದಾ ದರು. ಆದರೆ ಮತ್ತೂಮ್ಮೆ ಬಂದ್‌ ಮಾಡಿಸ ಲಾ ಯಿತು. ಅಂತಿಮವಾಗಿ ಸಂಜೆ ವೇಳೆ ಕೆಲವರು ಪತ್ರಿಕೆ ಮಾರಾಟ ಮಾಡಬೇಕಾಯಿತು.

ಬಂದ್‌ ವೇಳೆ ದೌರ್ಜನ್ಯ: ಮಹಿಳೆ ದೂರು
ಉಡುಪಿ: “ಕಡಿಯಾಳಿಯ ಹೊಟೇಲ್‌ನಲ್ಲಿ ತಿಂಡಿ ತಿನ್ನುತ್ತಿದ್ದಾಗ ಬಲವಂತವಾಗಿ ಬಂದ್‌ ಮಾಡಲು ಬಂದ ಕಾಂಗ್ರೆಸ್‌ ಕಾರ್ಯಕರ್ತರು ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ’ ಎಂದು ಚೈತ್ರಾ ಕುಂದಾಪುರ ಅವರು ಉಡುಪಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ಬೆಳಗ್ಗೆ 9ಕ್ಕೆ ಹೊಟೇಲ್‌ನಲ್ಲಿ ತಿಂಡಿ ತಿನ್ನುತ್ತಿದ್ದಾಗ ಕಾಂಗ್ರೆಸ್‌ ಕಾರ್ಯಕರ್ತರಾದ ರಮೇಶ್‌ ಕಾಂಚನ್‌, ಶೇಖರ್‌ ಜಿ.ಕೋಟ್ಯಾನ್‌, ಜನಾರ್ದನ ಭಂಡಾರ್‌ಕರ್‌, ಜ್ಯೋತಿ ಹೆಬ್ಟಾರ್‌, ಪ್ರಖ್ಯಾತ್‌ ಶೆಟ್ಟಿ, ಯತೀಶ್‌ ಕರ್ಕೇರಾ, ಪ್ರಶಾಂತ್‌ ಪೂಜಾರಿ ಮತ್ತು ಇತರರು ಹೊಟೇಲ್‌ಗೆ ಬಂದರು. ನಾನು ಮೋದಿಗೆ ಜೈಕಾರ ಹಾಕಿದಾಗ ಯತೀಶ್‌ ಕರ್ಕೆರ ನನ್ನ ಕೈ ಹಿಡಿದು ಎಳೆದರು. ಜ್ಯೋತಿ ಹೆಬ್ಟಾರ್‌ ಅಸಭ್ಯವಾಗಿ ಹೇಳಿ ನಿಂದಿಸಿದ್ದಾರೆ. ಇತರರು ತಳ್ಳಿ ಮುಂದಕ್ಕೆ ನೋಡಿ ಕೊಳ್ಳುತ್ತೇವೆ ಎಂದು ಜೀವಬೆದರಿಕೆ ಹಾಕಿದ್ದಾರೆ’ ಎಂದು ದೂರು ನೀಡಿದ್ದಾರೆ.

ಬಲವಂತದ ಬಂದ್‌: ದೂರು
“ಸೋಮವಾರ ಬೆಳಗ್ಗೆ 8.30ಕ್ಕೆ ಅಂಗಡಿ ಬಾಗಿಲು ತೆರೆದು ವ್ಯವಹಾರ ಮಾಡುತ್ತಿದ್ದಾಗ 9.15ರ ವೇಳೆಗೆ ಬಂದ ರಮೇಶ್‌ ಕಾಂಚನ್‌ ಮತ್ತು ಇತರ 25ರಿಂದ 30 ಮಂದಿ ಅಂಗಡಿಯ ಶಟರ್‌ನ್ನು ಬಲಾತ್ಕಾರದಿಂದ ಅರ್ಧಕ್ಕೆ ಮುಚ್ಚಿ ಅಂಗಡಿ ಮುಚ್ಚಬೇಕು ಎಂದು ಹೇಳಿ ವ್ಯಾಪಾರ ಮಾಡದಂತೆ ತಡೆಯೊಡ್ಡಿದರು’ ಎಂದು ಕಲ್ಸಂಕ ಜಂಕ್ಷನ್‌ ಬಳಿ ಇರುವ ಪೈಂಟ್‌ ಹೌಸ್‌ ಅಂಗಡಿ ಮಾಲಕ ಜಯಾನಂದ ಅವರು ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.