ಮಟ್ಟು : ಕಟಾವಿಗೆ ಸಿದ್ಧಗೊಂಡ ಮಟ್ಟುಗುಳ್ಳ ಗದ್ದೆಗಳು ಜಲಾವೃತ
Team Udayavani, Oct 13, 2021, 9:17 PM IST
ಕಟಪಾಡಿ: ಮಂಗಳವಾರದಂದು ಸುರಿದ ಭಾರೀ ಮಳೆ, ಬೀಸಿದ ಗಾಳಿಯ ಪರಿಣಾಮ ಮಟ್ಟುಗುಳ್ಳದ ಬೆಳೆಯುಳ್ಳ ಗದ್ದೆಗೆ ನೀರು ನುಗ್ಗಿದ್ದು ಬೆಳೆಹಾನಿ ಸಂಭವಿಸಿದೆ.
ಇದೀಗ ಫಸಲು ಕೊಯಿಲಿಗೆ ಸಿದ್ಧಗೊಂಡಿದ್ದು, ನಿರಂತರ ಫಸಲು ನೀಡುವ ಗಿಡಗಳನ್ನು ಹೊಂದಿರುವ ಗದ್ದೆಯು ಸಂಪೂರ್ಣ ಜಲಾವ್ರತವಾಗಿ ನೀರಿನಲ್ಲಿ ಮುಳುಗುವಂತಾಗಿದೆ. ಕೆಲವೆಡೆ ನಾಟಿಗೆ ಸಿದ್ಧಪಡಿಸಿದ ಗದ್ದೆಗಳಲ್ಲೂ ನೀರು ತುಂಬಿದ್ದು ಅಪಾರ ಪ್ರಮಾಣದ ನಷ್ಟವಾಗಿದೆ. ಕೆಲವೆಡೆ ನಾಟಿ ನಡೆಸಿದ ಗದ್ದೆಗಳು ಜಲಾವ್ರತಗೊಂಡಿದೆ.
ಸುಮಾರು ನೂರು ಎಕರೆಗೂ ಮಿಕ್ಕಿದ ಪ್ರದೇಶದಲ್ಲಿ ಕಳೆದ ಮೂರು ತಿಂಗಳ ನಿರಂತರ ಶ್ರಮದ ಫಲವಾಗಿ ಮಟ್ಟುಗುಳ್ಳ ಪ್ರಿಯರಿಗೆ ನವರಾತ್ರಿಯ ಸಡಗರಕ್ಕೆ ಮಟ್ಟುಗುಳ್ಳದ ರುಚಿಯನ್ನು ಸವಿಯುವಂತೆ ಮಾಡಿದ ಮಟ್ಟುಗುಳ್ಳ ಬೆಳೆಗಾರರು ಇದೀಗ ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ.
ಇದನ್ನೂ ಓದಿ:ಅ.20ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ: ಸಚಿವ ಬಿ. ಶ್ರೀರಾಮುಲು
ಫಸಲು ಹಾನಿ
ಮತ್ತೆ ಗಿಡ ನಾಟಿ ಮಾಡಿ ಬೆಳೆ ತೆಗೆಯಬೇಕಾದ ಅನಿವಾರ್ಯತೆ ಇದೆ. ಕಟಾವಿಗೆ ನಿಂತ ಮಟ್ಟುಗುಳ್ಳದ ಫಸಲು ನಾಶಗೊಂಡಿದ್ದು ಅಪಾರ ನಷ್ಟ ಸಂಭವಿಸಿದೆ.
-ಸುನಿಲ್ ಡಿ. ಬಂಗೇರ, ಅಧ್ಯಕ್ಷರು, ಮಟ್ಟುಗುಳ್ಳ ಬೆಳೆಗಾರರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ