ಉಡುಪಿ ಜಿಲ್ಲೆಯ ವಿವಿಧೆಡೆ ಭಾರೀ ಗಾಳಿ-ಮಳೆ; ಹಾನಿ
Team Udayavani, May 23, 2018, 12:38 PM IST
ಉಡುಪಿ: ಉಡುಪಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಸೋಮವಾರ ರಾತ್ರಿ, ಮಂಗಳವಾರ ಮುಂಜಾನೆ ಉತ್ತಮ ಮಳೆಯಾಗಿದೆ. ಅಲ್ಲಲ್ಲಿ ಸಿಡಿಲು ಬಡಿದು ವ್ಯಕ್ತಿ, ಮನೆಗಳಿಗೆ ತೀವ್ರತರ ಹಾನಿಯಾಗಿದೆ.
ಹೆರ್ಗ ಹೊಳೆಬಾಗಿಲು ಕಲ್ಲಗುಡ್ಡೆಯ ಸುಗಂಧಿ ಶೇರಿಗಾರ್ತಿ (35) ಅವರ ಮನೆಗೆ ಮೇ 22ರ ಮುಂಜಾನೆ 3.30ರ ಸುಮಾರಿಗೆ ಸಿಡಿಲು ಬಡಿದಿದೆ. ಸುಗಂಧಿ ಅವರ ಕುತ್ತಿಗೆ ಹಾಗೂ ಬೆನ್ನ ಹಿಂದೆ ತೀವ್ರ ತರದ ಸುಟ್ಟ ಗಾಯವಾಗಿದ್ದು, ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಕ್ಕದಲ್ಲಿ ಮಲಗಿದ್ದ ತಂಗಿ ಸುಕನ್ಯಾ ಶೇರಿಗಾರ್ತಿ, ಕೃಷ್ಣ ಶೇರಿಗಾರ್ ಅವರಿಗೂ ಸಿಡಿಲಿನ ಆಘಾತವಾಗಿದೆ. ಸುಗಂಧಿಯವರು ಧರಿಸಿದ್ದ ಚಿನ್ನದ ಸರ, ಹೊದ್ದುಕೊಂಡಿದ್ದ ಬಟ್ಟೆ ಸುಟ್ಟು ಹೋಗಿದೆ. ಚಾವಡಿ ಗೋಡೆಯ ಕನ್ನಡಿ, ಪಡಸಾಲೆಯ ನೆಲ ಒಡೆದು ಹೋಗಿದೆ. ಗೋಡೆಯಲ್ಲಿ ಬಿರುಕು ಉಂಟಾಗಿದೆ. ವಯ ರಿಂಗ್ಗೆ ಹಾನಿಯಾಗಿದೆ.
ಕೊಡಂಗಳ: ಬಾಲಕನಿಗೆ ಗಾಯ
ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಬೆಳ್ಳೆ ಕೊಡಂಗಳದ ಸದಾನಂದ ನಾಯಕ್
ಅವರ ಮನೆಗೆ ಮಂಗಳವಾರ ಮುಂಜಾನೆ ಸಿಡಿಲು ಬಡಿದಿದೆ. ಅವರ ಮಗ ಸಂದೇಶ್ (13) ಗಾಯಗೊಂಡಿದ್ದು, ಅವರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಪು: ಗರೋಡಿ ಗೋಪುರಕ್ಕೆ ಹಾನಿ
ಸೋಮವಾರ ರಾತ್ರಿ ಸಿಡಿಲು ಬಡಿದು ಕಾಪುವಿನ ಪೊಯ್ಯ ಪೊಡಿಕಲ್ಲ ಗರೋಡಿಯ ಸ್ವಾಗತ ಗೋಪುರಕ್ಕೆ ಹಾನಿಯಾಗಿದೆ. ಹಿರೇಬೆಟ್ಟಿನ ಸುಗಂಧಿ ಅವರ ಮನೆಯ ಮೇಲೆ ಮರ ಬಿದ್ದು ಸುಮಾರು 50,000 ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ