ಉಡುಪಿ ಜಿಲ್ಲೆ: ಮತ್ತೆ 7 ಕೋತಿ ಶವ ಪತ್ತೆ
Team Udayavani, Jan 25, 2019, 12:50 AM IST
ಉಡುಪಿ: ಗುರುವಾರ ಉಡುಪಿ ಜಿಲ್ಲೆಯ ತಲ್ಲೂರು, ಮಂಡಾಡಿ, ಹರ್ಲಾಳಿ, ಕಾವ್ರಾಡಿ, ಬೆಳ್ವೆ, ಶೇಡಿಮನೆ, ಕುಕ್ಕೆಹಳ್ಳಿಯಲ್ಲಿ ತಲಾ ಒಂದು ಸೇರಿದಂತೆ ಒಟ್ಟು 6 ಮಂಗಗಳ ಶವ ಪತ್ತೆಯಾಗಿದೆ.
ಎರಡು ಶವಗಳ ಅಂಗಾಂಗಗಳ ಮಾದರಿಯನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗ ಮತ್ತು ಮಣಿಪಾಲಕ್ಕೆ ಕಳುಹಿಸಿ ಕೊಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 6 ಮಂದಿ ಸಂಶಯಾಸ್ಪದ ಮಂಗನಕಾಯಿಲೆ ತಪಾಸಣೆಗಾಗಿ ದಾಖಲಾಗಿದ್ದು ಇದುವರೆಗೆ ಯಾರಲ್ಲಿಯೂ ಮಂಗನ ಕಾಯಿಲೆ ದೃಢಪಟ್ಟಿಲ್ಲ. ಒಟ್ಟು 28 ಮಂಗಗಳ ಅಂಗಾಂಗ ಮಾದರಿಯನ್ನು ಪರೀಕ್ಷೆಗ ಕಳುಹಿಸಲಾಗಿದ್ದು 21 ಮಾದರಿಗಳ ವರದಿ ಬಂದಿದೆ. 12 ಮಾದರಿಗಳಲ್ಲಿ ಮಂಗನ ಕಾಯಿಲೆ ರೋಗಾಣು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪಾಲ: 119 ಮಂದಿ ದಾಖಲು
ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಆಸುಪಾಸಿನ 119 ಮಂದಿ ಶಂಕಿತ ಮಂಗನ ಕಾಯಿಲೆ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದಾರೆ. 47 ಮಂದಿಗೆ ಮಂಗನ ಕಾಯಿಲೆ ಇರುವುದು ದೃಢವಾಗಿದೆ. 66 ಮಂದಿಗೆ ಕಾಯಿಲೆ ಇಲ್ಲವೆಂದು ವರದಿಯಾಗಿದೆ. 9 ಮಂದಿಯ ವರದಿ ಬರಲು ಬಾಕಿ ಇದೆ. 90 ಮಂದಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ. 30 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರಿಗೆ ಜ್ವರ ಮರುಕಳಿಸಿದ್ದರಿಂದ ಮರಳಿ ದಾಖಲಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಮಾಂಟ್ರಾಡಿ: ಕೋತಿಯ ಶವ ಪತ್ತೆ
ಮೂಡುಬಿದಿರೆ: ನೆಲ್ಲಿಕಾರು ಗ್ರಾ.ಪಂ. ವ್ಯಾಪ್ತಿಯ ಮಾಂಟ್ರಾಡಿ ಮಾರಂಗಲ್ಲು ಪ್ರದೇಶದಲ್ಲಿ ಗುರುವಾರ ಕೋತಿಯ ಶವ ಪತ್ತೆಯಾಗಿದೆ. ಇದು ಮೂಡುಬಿದಿರೆ ಪರಿಸರದಲ್ಲಿ ಎರಡನೇ ಪ್ರಕರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ