ಉಡುಪಿ ಗ್ರಾ. ಬಂಟರ ಸಂಘದ ಸಭಾಭವನಕ್ಕೆ ಶಂಕುಸ್ಥಾಪನೆ
Team Udayavani, Dec 8, 2017, 1:38 PM IST
ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘದ ಮಹತ್ವಾಕಾಂಕ್ಷೆಯ ಸಭಾ ಭವನ ನಿರ್ಮಾಣ ಯೋಜನೆಗೆ
ಡಿ. 10ರ ಬೆಳಗ್ಗೆ 9.45ಕ್ಕೆ ಕುಂತಳನಗರ ದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಶಾಸಕ ವಿನಯಕುಮಾರ ಸೊರಕೆ ಶಂಕುಸ್ಥಾಪನೆ ನೆರವೇರಿಸುವರು.
ಉಡುಪಿ, ಕಾಪು ಮತ್ತು ಕಾರ್ಕಳ ವಿಧಾನಸಭಾ ಕ್ಷೇತ್ರದ ಪರಿಮಿತಿಯ ಕೊರಂಗ್ರಪಾಡಿ-ಮಾರ್ಪಳ್ಳಿ, ಅಲೆ
ವೂರು-ಕೆಮ್ತೂರು, ಚಿಟ್ಪಾಡಿ- ಕುಕ್ಕಿಕಟ್ಟೆ-ಮಂಚಿ, ಕಲ್ಮಂಜೆ- ಕರ್ವಾಲು-ಮರ್ಣೆ, ಮಣಿ ಪುರ- ದೆಂದೂರು- ಕುಂತಳನಗರ, ಕಟ್ಟಿಂಗೇರಿ- ಪಡು ಬೆಳ್ಳೆ-ಮೂಡುಬೆಳ್ಳೆ, ಎಡೆರು-ನಿಂಜೂರು- ಪಳ್ಳಿಯ ಪ್ರದೇಶಗಳು ಸಂಘದ ವ್ಯಾಪ್ತಿಯಲ್ಲಿವೆ.
ಸಂಘವು 1999ರಲ್ಲಿ ಸ್ಥಾಪನೆ ಗೊಂಡಿದ್ದು 1,000ಕ್ಕೂ ಅಧಿಕ ಸದಸ್ಯರಿದ್ದಾರೆ ಎಂದು ಸಂಘದ ಅಧ್ಯಕ್ಷ ಸಖಾರಾಮ ಶೆಟ್ಟಿ ಮತ್ತು ಕಟ್ಟಡ ಸಮಿತಿ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಶಂಕುಸ್ಥಾಪನೆ ಸಮಾರಂಭದಲ್ಲಿ ಅತಿಥಿಗಳಾಗಿ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಉದ್ಯಮಿ ಕೆ. ಪ್ರಕಾಶ್ ಶೆಟ್ಟಿ, ಮೂಡಬಿದಿರೆಯ ಡಾ|ಮೋಹನ ಆಳ್ವ, ಪುರುಷೋತ್ತಮ ಶೆಟ್ಟಿ, ಕೃಷ್ಣ ಶೆಟ್ಟಿ ಮುಂಬಯಿ, ಮನೋಹರ ಎಸ್. ಶೆಟ್ಟಿ ಹಾಗೂ ಉಡುಪಿ, ಕಾಪು, ಪರ್ಕಳ, ಕಟಪಾಡಿ, ಹೆಬ್ರಿ, ಪಡುಬಿದ್ರಿ, ಶಿರ್ವ, ಬೆಳ್ಮಣ್ ಮತ್ತು ಸುತ್ತಮುತ್ತಲಿನ ಬಂಟ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ರಾಜಕೀಯ ಮುಖಂಡ ರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಉದಯ ಕುಮಾರ್
ಶೆಟ್ಟಿ ಕಿದಿಯೂರು, ಮಟ್ಟಾರು ರತ್ನಾಕರ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸುರೇಶ್ ಶೆಟ್ಟಿ ಗುರ್ಮೆ, ದುಬಾೖಯ
ಪ್ರಸಾದ್ ಶೆಟ್ಟಿ, ಬೆಳಪು ಡಾ| ಪ್ರಶಾಂತ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಕೆ. ವಾಸುದೇವ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಕೃಷ್ಣ ಶೆಟ್ಟಿ, ಬೆಳ್ಳಿಪ್ಪಾಡಿ ಹರಿಪ್ರಸಾದ್ ರೈ, ನಾಗೇಶ್ ಹೆಗ್ಡೆ, ನವೀನ್ಚಂದ್ರ ಶೆಟ್ಟಿ, ಪ್ರಸಾದ್ ಕುಮಾರ್ ಶೆಟ್ಟಿ, ರಕ್ಷಿತ್
ಶೆಟ್ಟಿ, ಕಿಶೋರ್ ಆಳ್ವ, ವಿಜಯ ಹೆಗ್ಡೆ, ಸುರೇಶ್ ಶೆಟ್ಟಿ, ಜಯರಾಜ್ ಹೆಗ್ಡೆ, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಡಾ|
ಪ್ರಶಾಂತ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಡಿ. ಶ್ರೀಧರ ಶೇಣವ, ಉಮೇಶ್ ಶೆಟ್ಟಿ ಕಳತ್ತೂರು, ನಾಗರಾಜ ಶೆಟ್ಟಿ, ದಿನೇಶ್
ಶೆಟ್ಟಿ, ಬೆಳಪು ಡಾ| ದೇವಿಪ್ರಸಾದ್ ಶೆಟ್ಟಿ, ಕೃಷ್ಣ ಶೆಟ್ಟಿ ಮಣಿಪುರ, ಅಶೋಕ ಶೆಟ್ಟಿ, ಸುಂದರ ಶೆಟ್ಟಿ ಕೆಮೂ¤ರು, ಸುಹಾಸ್ ಹೆಗ್ಡೆ, ರಾಜೇಂದ್ರ ಶೆಟ್ಟಿ, ರಂಜನ್ ಹೆಗ್ಡೆ, ಗಂಗಾಧರ ಶೆಟ್ಟಿ, ಮನೋಹರ್ ಶೆಟ್ಟಿ, ಉದ್ಯಮಿ ಸಂತೋಷ್ ಶೆಟ್ಟಿ, ಸುಧಾಕರ ಶೆಟ್ಟಿ ಮೈರ್ಮಾಡಿ, ಸುರೇಂದ್ರ ಎಂ. ಹೆಗ್ಡೆ, ವಿ.ಜಿ. ಶೆಟ್ಟಿ, ತಲ್ಲೂರು ಶಿವರಾಮ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಧೀರಜ್ ಶೆಟ್ಟಿ ನಿಂಜೂರು, ಕುದಿ ವಸಂತ ಶೆಟ್ಟಿ, ಪ್ರಕಾಶ್ ಶೆಟ್ಟಿ ಭಾಗವಹಿಸಲಿದ್ದಾರೆ.
ವೇದವ್ಯಾಸ ಉಪಾಧ್ಯ ಕಲ್ಮಂಜೆ, ಕುಂತಳನಗರ ಸೈಂಟ್ ಅಂತೋನಿ ಚರ್ಚ್ನ ವಂ| ಡೆನಿಸ್ ಡೇಸಾ, ಕಟಪಾಡಿ ಶ್ರೀ ವಿಶ್ವನಾಥ ದೇವಸ್ಥಾನದ ಉಪಾಧ್ಯಕ್ಷ ರಾಘು ಪೂಜಾರಿ ಕಲ್ಮಂಜೆ ಭಾಗವಹಿಸಲಿದ್ದಾರೆಂದು ಪ್ರಕಟನೆ ಮೂಲಕ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ