ಉಡುಪಿಯಲ್ಲಿ ಇನ್ನೂ 3 ದಿನ ಹಣತೆ ಬೆಳಕಿನ ವೈಭವ
Team Udayavani, Nov 11, 2019, 4:58 AM IST
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಮೊದಲ ಎರಡು ದಿನಗಳ ಲಕ್ಷ ದೀಪೋತ್ಸವ ಶನಿವಾರ, ರವಿವಾರ ಸಂಪನ್ನಗೊಂಡಿತು. ಲಕ್ಷದೀಪಗಳ ಬೆಳಕಿನಲ್ಲಿ ತೆಪ್ಪೋತ್ಸವ ಮತ್ತು ರಥೋತ್ಸವಗಳನ್ನು ಕಾಣುವ ಭಾಗ್ಯ ನ. 13ರ ವರೆಗೆ ಭಕ್ತರಿಗೆ ಸಿಗಲಿದೆ. ಮೊದಲ ಮೂರು ದಿನ ವಾಡಿಕೆಯ ದೀಪೋತ್ಸವವಾದರೆ ಕೊನೆಯ ಎರಡು ದಿನ ಸೇವಾರ್ಥಿಗಳ ದೀಪೋತ್ಸವ ನಡೆಯಲಿದೆ.
ಸಾರ್ವಜನಿಕರಿಗೆ ದೇವರ ದರ್ಶನ ಮಾಡಿಸಲು ರಥೋತ್ಸವದ ಕಲ್ಪನೆ ಬಂತೆಂಬ ವಾದವಿದೆ. ಅದೇ ರೀತಿ ಮೊದಲ ದಿನ ಹೋಗಿ ನೋಡಲು ಆಗದವರಿಗಾಗಿಯೋ ಎಂಬಂತೆ ಮೂರು ದಿನಗಳ ಉತ್ಸವದ ವಾಡಿಕೆ ಬಂದಿರಬಹುದು. ಈಗ ಸೇವಾರ್ಥಿಗಳ ಕಾರಣದಿಂದ ಮತ್ತೂ ವಿಸ್ತರಣೆಯಾಗುತ್ತಿದೆ.
ತೆಪ್ಪೋತ್ಸವ ಮುಗಿದು ರಥಬೀದಿಗೆ ಉತ್ಸವ ಬರುವಾಗ ರಥಬೀದಿಯಲ್ಲಿ ನೆಟ್ಟ ದಳಿಗಳಲ್ಲಿ ಇರಿಸಿದ ಮಣ್ಣಿನ ಹಣತೆಗಳಿಗೆ ದೀಪಗಳನ್ನು ಹಚ್ಚಲು ಭಕ್ತರು ಆರಂಭಿಸುತ್ತಾರೆ. ಕೆಲವು ಬಾರಿ ನಿಗದಿತ ಸಮಯಕ್ಕೆ ಮುನ್ನವೇ ಹಚ್ಚುವ ಕಾರಣ ಉತ್ಸವ ಪೂರ್ಣಗೊಳ್ಳುವ ಮೊದಲೇ ನಂದಿ ಹೋಗುವ ಸಾಧ್ಯತೆಯೂ ಇರುತ್ತದೆ.
ಶನಿವಾರ ವಿಶೇಷ ಆಕರ್ಷಣೆಯಾಗಿ ತೆಪ್ಪೋತ್ಸವ ನಡೆಯುವಾಗ ಮಧ್ವಸರೋವರದ ಸುತ್ತಲೂ ಸುಶ್ರಾವ್ಯ ಭಜನೆಗಳನ್ನು ಭಜನ ಮಂಡಳಿಗಳ ಸದಸ್ಯರು ನಡೆಸಿಕೊಟ್ಟರೆ, ರಥಬೀದಿಯಲ್ಲಿ ರಥೋತ್ಸವ ಸಾಗು ವಾಗ ಜಿಲ್ಲೆಯ ಭಜನ ಮಂಡಳಿಗಳ ಸದಸ್ಯರು ಕುಣಿತದ ಭಜನ ಸೇವೆಯನ್ನು ನಡೆಸಿಕೊಟ್ಟರು. ಈ ಬಾರಿ ತೆಪ್ಪೋತ್ಸವ ನಡೆಯುವಾಗ ವೇದ ಪಾರಾಯಣ ಆಯೋಜಿಸಲಾಗಿದೆ.
ತೆಪ್ಪದಲ್ಲಿ ದೇವರ ವಿಗ್ರಹವಿರಿಸಿಕೊಂಡು ಮೂರು ಸುತ್ತು ಬರುತ್ತಾರೆ. ಶನಿವಾರ ಋಗ್ವೇದವನ್ನು ಪಾರಾಯಣ ಮಾಡಿದರೆ ರವಿವಾರ ಯಜುರ್ವೇದವನ್ನು ಪಾರಾಯಣ ಮಾಡಿದರು. ಸೋಮವಾರ ಸಾಮವೇದ, ಮಂಗಳವಾರ ಅಥರ್ವವೇದವನ್ನು, ಅನಂತರ ಮತ್ತೆ ಋಗ್ವೇದ ಪಾರಾಯಣ ಮಾಡಿಸುವ ವ್ಯವಸ್ಥೆಯನ್ನು ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ಕಲ್ಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
Veerappa Moily; ದೇಶಕ್ಕೆ ಕ್ರಿಕೆಟ್ ಕಾಮೆಂಟ್ರಿಯನ್ ಬೇಕಿಲ್ಲ
Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
MUST WATCH
ಹೊಸ ಸೇರ್ಪಡೆ
Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ
Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
Police Raid: 346 ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು