ಉಡುಪಿ: “ನನ್ನ ಹಾಡು ನನ್ನದು’ ಭಕ್ತಿ ಭಾವ ಗೀತಾಗಾಯನ
Team Udayavani, Sep 2, 2017, 7:30 AM IST
ಉಡುಪಿ: ಉಡುಪಿ ಪರ್ಯಾಯ ಪೇಜಾವರ ಅಧೋಕ್ಷಜ ಮಠದ ಆಶ್ರಯದಲ್ಲಿ ದಿಶಾ ಕಮ್ಯೂನಿಕೇಷನ್ಸ್ ಟ್ರಸ್ಟ್ ಕಟಪಾಡಿ, ಕಲಾನಿಧಿ ಸಾಂಸ್ಕೃತಿಕ ಕಲಾ ಸಂಸ್ಥೆ, ರಾಗವಾಹಿನಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನನ್ನ ಹಾಡು ನನ್ನದು ಭಕ್ತಿ ಭಾವ ಗೀತಾಗಾಯನ ಸ್ಪರ್ಧೆಯ ಫೈನಲ್ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು.
ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಉಡುಪಿ ತುಳುಕೂಟದ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಅಂಬಲಪಾಡಿ ಜರ್ನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನೀ. ಬಿ. ವಿಜಯ ಬಲ್ಲಾಳ್, ಹಿರಿಯ ಸಂಗೀತ ನಿರ್ದೇಶಕ ನಾದವೈಭವಂ ಉಡುಪಿ ವಾಸುದೇವ ಭಟ್, ಚಲನಚಿತ್ರ ಸಂಗೀತ ನಿರ್ದೇಶಕ ಎಸ್.ಪಿ. ಚಂದ್ರಕಾಂತ್ ಬೆಂಗಳೂರು, ಹಿರಿಯ ಗಾಯಕ ಡಾ| ವಿಜಯ್ ಬೆಂಗಳೂರು, ಚಲನಚಿತ್ರ ನಿರ್ದೇಶಕ ಕೃಷ್ಣಪ್ರಸಾದ್ ಬೆಂಗಳೂರು, ಚಿತ್ರ ನಿರ್ಮಾಪಕ ಶರತ್ ಕೋಟ್ಯಾನ್, ಪ್ರ„ಮ್ ಟಿವಿ ನಿರ್ದೇಶಕ ದಿನೇಶ್ ಕಿಣಿ ಅಲೆವೂರು, ರಾಗವಾಹಿನಿ ಅಧ್ಯಕ್ಷ ರೋಹಿತ್ ಕುಮಾರ್ ಮಲ್ಪೆ, ಸುರೇಶ್ ಮಲ್ಪೆ, ವಿಜಯಲಕ್ಷ್ಮೀ, ಪ್ರೀತಿ ಪಿ. ಸುವರ್ಣ ಉಪಸ್ಥಿತರಿದ್ದರು. 20 ಮಂದಿ ಸಂಗೀತ ಕಲಾವಿದರನ್ನು ಸ್ವಾಮೀಜಿಯವರು ಸಮ್ಮಾನಿಸಿದರು. ಕಲಾನಿಧಿ ಭಾಗ್ಯಲಕ್ಷಿ ¾à ಸ್ವಾಗತಿಸಿದರು. ದಿಶಾ ಕಮ್ಯೂನಿಕೇಷನ್ಸ್ ಟ್ರಸ್ಟ್ ಉಪಾಧ್ಯಕ್ಷ ಬಿ. ಪುಂಡಲೀಕ ಮರಾಠೆ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಪ್ರಕಾಶ ಸುವರ್ಣ ಕಟಪಾಡಿ ವಂದಿಸಿದರು.