ಉಡುಪಿ: ಬಿಜೆಪಿಯ ಕೈ ಹಿಡಿದದ್ದು ಹೊಸ ಮತದಾರರು?


Team Udayavani, May 17, 2018, 11:55 AM IST

hosa-matadara.jpg

ಉಡುಪಿ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ “ಸ್ವೀಪ್‌’ ಮಾಡಿದ ಕೀರ್ತಿ ಬಿಜೆಪಿಗೆ. ಮೋದಿ ಅಲೆ ಮತ್ತು “ಹಿಂದುತ್ವ’ ಫ್ಯಾಕ್ಟರ್‌ ಅಂಶಗಳು ಬಿಜೆಪಿಯನ್ನು ಕೈ ಹಿಡಿದಿರ ಬಹುದು. ಆದರೆ ಹೊಸ ಮತದಾರರು ಮೋದಿ ಅಲೆಗೆ ತಲೆದೂಗಿದರೇ?

ಇಂಥದೊಂದು ವ್ಯಾಖ್ಯಾನ ಕೇಳಿ ಬಂದಿರು ವುದು ಉಡುಪಿ ಜಿಲ್ಲೆಯ ಕ್ಷೇತ್ರಗಳಲ್ಲಿ. ಪ್ರಧಾನಿ ಮೋದಿ ಉಡುಪಿಗೆ ಬಂದ ಬಳಿಕ ಆಲೆಯ ತೀವ್ರತೆ ಹೆಚ್ಚಿತ್ತು. 2013ಕ್ಕಿಂತ ಈ ಬಾರಿ ಸರಾಸರಿ ಒಂದು ಕ್ಷೇತ್ರಕ್ಕೆ 20 ಸಾವಿರದಂತೆ ಐದೂ ಕ್ಷೇತ್ರಗಳಲ್ಲಿ 1 ಲಕ್ಷ ಹೊಸ ಮತದಾರರಿದ್ದರು. ಇವರಲ್ಲಿ ಬಹುತೇಕರು ಮೋದಿಯನ್ನು ಮೆಚ್ಚಿ ಕೊಂಡಂತಿದೆ. ಮೋದಿಯವರಿಗೂ ಈ ಅಂಶ  ಬಹುಶಃ ಗೊತ್ತಿತ್ತು. ಯಾಕೆಂದರೆ, ಅವರೂ ತಮ್ಮ ಭಾಷಣದಲ್ಲಿ ಕಾಮನ್‌ ವೆಲ್ತ್‌ ಬೆಳ್ಳಿ ಪದಕ ವಿಜೇತ ಗುರುರಾಜ್‌ ಅವರ ಬಗ್ಗೆ ಎರಡೆರಡು ಬಾರಿ ಪ್ರಸ್ತಾಪಿಸಿ ಅಭಿನಂದಿಸಿದ್ದರು. ಇಲ್ಲಿನ (ಕರಾವಳಿಯ) ಯುವಜನರೆಲ್ಲಾ ಬಹಳ ವಿದ್ಯಾವಂತರು, ಬುದ್ಧಿವಂತರು, ಪರಿಶ್ರಮಿಗಳು ಎಂದು ಹೊಗಳಿದ್ದರು.

ಸ್ವಾವಲಂಬನೆಯ ಆಸಕ್ತಿ ಉಳ್ಳ ನಿಮ್ಮಂಥವರಿಗೇ ಸಹಾಯ ಮಾಡಲು ಮುದ್ರಾ ಯೋಜನೆ ತಂದಿದ್ದಾಗಿಯೂ ಹೇಳಿದ್ದರು. ಸ್ಥಳೀಯ ಯುವಜನರು ಹೊರಗೆಲ್ಲೋ ಹೋಗಿ ದುಡಿಯುವುದಕ್ಕಿಂತ ಇಲ್ಲಿಯೇ ಉದ್ಯೋಗ ಸೃಷ್ಟಿ ಯಾಗಬೇಕು ಎಂದಿದ್ದರು. ಇವೆಲ್ಲವೂ ಯುವಜನರ ಮೇಲೆ ಪ್ರಭಾವ ಬೀರಲು ಮಾಡಿದ ಪ್ರಯತ್ನ. ಇವೆಲ್ಲವೂ ಫ‌ಲ ಕೊಟ್ಟಂತಿದೆ.

ಮತ್ತಷ್ಟು ಅಂಶ
ಪ್ರಮೋದ್‌ ಮಧ್ವರಾಜ್‌ ಬಿಜೆಪಿಗೆ ಸೇರ್ಪಡೆ ಗೊಳ್ಳುತ್ತಾರೆಂಬ ಗುಮಾನಿ ಕಾಂಗ್ರೆಸ್‌ ಪಕ್ಷ ದೊಳಗಿನ ತಲ್ಲಣಕ್ಕೆ ಕಾರಣವಾಯಿತು. ಇದೂ ಸಹ ಬಿಜೆಪಿಗೆ ಅನುಕೂಲ ಕಲ್ಪಿಸಿತು. ಹಾಗೆಯೇ ಕಾಪುವಿನಲ್ಲಿ ಪಕ್ಷದೊಳಗಿದ್ದ ಕೆಲವು ಅಸಮಾ ಧಾನಗಳು ವಿನಯಕುಮಾರ ಸೊರಕೆಗೆ ಮುಳುವಾಯಿತು ಎನ್ನಲಾಗುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಕೆಲವು ನಾಯಕರ ಬಗೆಗೆ ಪಕ್ಷ ದೊಳಗೆ ಅಸಮಾಧಾನವಿತ್ತು ಎನ್ನಲಾಗುತ್ತಿದೆ. 

ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೋಪಾಲ ಪೂಜಾರಿಯವರು ಗೆದ್ದೇ ಗೆಲ್ಲು ತ್ತೇವೆಂಬ ಹುಮ್ಮಸ್ಸು ಹೊಂದಿದ್ದರೂ ಅಲ್ಲಿ ಬಿಜೆಪಿ ಗೆಲ್ಲಲು ಮೋದಿ ಅಲೆ ಹಾಗೂ ಸುಕುಮಾರ ಶೆಟ್ಟಿಯವರ ಮೇಲಿದ್ದ ಅನುಕಂಪ ಎಂಬ ಅಭಿಪ್ರಾಯವಿದೆ. ಹೊನ್ನಾವರದಲ್ಲಿ ಪರೇಶ ಮೇಸ್ತರ ಸಾವು, ಈ ಕುರಿತು ಗಂಗೊಳ್ಳಿ ಮೊದ ಲಾದೆಡೆ ನಡೆದ ಪ್ರತಿಭಟನೆಯಲ್ಲಿ ಸ್ಥಳೀಯ ಖಾರ್ವಿ ಸಮುದಾಯದವರ ಪಾಲ್ಗೊಳ್ಳುವಿಕೆ ಇಲ್ಲಿ ಪರಿಣಾಮ ಬೀರಿರುವಂತಿದೆ. 

ಇನ್ನು ಕುಂದಾಪುರ ಮತ್ತು ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಷ್ಟೊಂದು ಗೆಲ್ಲುವ ವಿಶ್ವಾಸ ಹೊಂದಿರಲಿಲ್ಲ. ಇದಕ್ಕೆ ಪೂರಕವಾಗಿ ಕುಂದಾ ಪುರದ ಕಾಂಗ್ರೆಸ್‌ ರಾಕೇಶ್‌ ಮಲ್ಲಿಯವರು ಹೊರಗಿನವರು ಎಂಬ ಅಪವಾದಕ್ಕೆ ಗುರಿ ಯಾದರು. ಕಾರ್ಕಳದಲ್ಲಿ ಅಭ್ಯರ್ಥಿ ಆಯ್ಕೆ ಯಲ್ಲಿ ಉಂಟಾದ ಗೊಂದಲ ಬಿಜೆಪಿಗೆ ವರದಾನ ವಾಯಿತು ಎಂಬ ವ್ಯಾಖ್ಯಾನ ಪ್ರಚಲಿತದಲ್ಲಿದೆ.

ಟಾಪ್ ನ್ಯೂಸ್

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.