ಉಡುಪಿ: ಮಳೆಯಬ್ಬರ; ಹಲವು ಮನೆಗಳು ಜಲಾವೃತ
Team Udayavani, Jul 24, 2019, 5:44 AM IST
ಉಡುಪಿ: ನಿರಂತರವಾಗಿ ಸುರಿದ ಮಳೆಯ ಪರಿಣಾಮ ಉಡುಪಿ ನಗರದ ರಾಜಕಾಲುವೆಯೆನಿಸಿದ ಕಲ್ಸಂಕ ತೋಡಿನ ಇಕ್ಕೆಲಗಳ ಪರಿಸರದ ಸುಮಾರು 25ಕ್ಕೂ ಅಧಿಕ ಮನೆಗಳು ಸೋಮವಾರ ತಡರಾತ್ರಿ ಮತ್ತು ಮಂಗಳವಾರ ಮಧ್ಯಾಹ್ನದವರೆಗೆ ಜಲಾವೃತವಾದವು.
ಗುಂಡಿಬೈಲು, ಮಠದಬೆಟ್ಟು, ಮೂಡನಿಡಂಬೂರು, ನಿಟ್ಟೂರು, ಬೈಲಕೆರೆ ಮೊದಲಾದೆಡೆ ಕಲ್ಸಂಕ ತೋಡು ಉಕ್ಕಿ ಹರಿದ ಪರಿಣಾಮ ಮನೆಗಳ ಹೊಸ್ತಿಲವರೆಗೂ ನೀರು ಬಂದು ಆತಂಕ ಸೃಷ್ಟಿಯಾಯಿತು. ಶ್ರೀಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್ ಪ್ರದೇಶದ ಹಿಂಭಾಗದಲ್ಲಿ 10ರಷ್ಟು ಮನೆಯವರು ತೊಂದರೆ ಅನುಭವಿಸಿದರು.
‘ರಾತ್ರಿ ಒಂದೇ ಸಮನೆ ಹರಿದುಬಂದ ನೀರಿನ ಮಟ್ಟ ತಗ್ಗಲೇ ಇಲ್ಲ. ಕಲ್ಸಂಕ ತೋಡಿನ ಹೂಳು ತೆಗೆಯದೇ ಇದ್ದುದು, ಗಿಡಗಂಟಿಗಳನ್ನು ತೆಗೆಯದಿರುವುದು ಮತ್ತು ಇಕ್ಕೆಲಗಳಲ್ಲಿ ತಡೆಗೋಡೆ ಕಟ್ಟದೇ ಇರುವುದರಿಂದ ಈ ಬಾರಿಯೂ ನೆರೆ ಉಂಟಾಗಿದೆ. ಮಳೆಯ ಪ್ರಮಾಣಕ್ಕಿಂತಲೂ ಕಲ್ಸಂಕ ತೋಡನ್ನು ಸ್ವಚ್ಛಗೊಳಿಸದೇ ಇರುವುದರಿಂದ ಹೆಚ್ಚು ಸಮಸ್ಯೆಯಾಯಿತು’ ಎಂದು ಸ್ಥಳೀಯ ನಿವಾಸಿಗಳು ದೂರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ