ಉಡುಪಿ: ಏಕಕಂಠದಲ್ಲಿ ಶತಕಂಠಗಾಯನ !
Team Udayavani, Feb 24, 2017, 10:47 AM IST
ಉಡುಪಿ: ರೋಟರಿ ಜಿಲ್ಲೆ 3182 ವಲಯ 4ರ ನೇತೃತ್ವದಲ್ಲಿ ರೋಟರಿ ಪ್ರತಿಷ್ಠಾನ ಶತಮಾನೋತ್ಸವದ ಅಂಗವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ಮಹಿಳೆಯರು, ಮಕ್ಕಳು ಸೇರಿದಂತೆ ನೂರಕ್ಕೂ ಹೆಚ್ಚು ಕಲಾವಿದರು ಶತಕಂಠ ಗಾಯನದಲ್ಲಿ ಪಾಲ್ಗೊಂಡು ಸುಶ್ರಾವ್ಯವಾಗಿ ಹಾಡಿದರು.
ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ನಿರ್ದೇಶನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರೂ ಸ್ವಯಂ ಹಾಡಿದರು. “ಗಜವದನ ಬೇಡುವೆ…’, “ಬೇಗ ಬಾರೋ ನೀಲಮೇಘವರ್ಣ…’, “ಹರಿಕುಣಿದ ನಮ್ಮ ಹರಿ ಕುಣಿದ…’,”ಸಕಲಗ್ರಹ ಬಲ ನೀನೇ ಸರಸಿ ಜಾಕ್ಷ…’, “ಎಂದರೋ ಮಹಾನು ಭಾವಲು…’, “ಮುರಹರನಗದರ ಮುಕುಂದಮಾಧವ…’, “ಜೋಜೋ ಶ್ರೀಕೃಷ್ಣ…’ ಈ ಹಾಡುಗಳು ಏಕಕಂಠದಲ್ಲಿ ಮೂಡಿಬಂದವು.
ಅನಂತರ ಜರಗಿದ ಜಾಗತಿಕ ತಿಳಿವಳಿಕೆ ದಿನ, ವಿಶ್ವಶಾಂತಿ ಸಂದೇಶ, ರೋಟರಿ ಸಾರ್ವತ್ರಿಕ ಘನತೆ ಅನಾವರಣ ಕಾರ್ಯಕ್ರಮದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಬಾರಕೂರು ಸೈಂಟ್ ಪೀಟರ್ ಚರ್ಚ್ ಧರ್ಮಗುರು ರೆ| ಫಾ| ವಲೇರಿಯನ್ ಮೆಂಡೋನ್ಸ, ಹಂಗಾರಕಟ್ಟೆ ಎಚ್. ಇಬ್ರಾಹಿಂ ಸಾಹೇಬ್, ರೋಟರಿ ಜಿಲ್ಲಾ ಸಭಾಪತಿ ಡಾ| ಪಿ. ನಾರಾಯಣ, ರೋಟರಿ ಪ್ರಮುಖರಾದ ಸದಾನಂದ ಚಾತ್ರ, ಡಾ| ಭರತೇಶ್, ಅಭಿನಂದನ ಶೆಟ್ಟಿ, ಮಂಜುನಾಥ ಉಪಾಧ್ಯ, ಡಾ| ಭವಾನಿ ಶಂಕರ ಕೆ.ಆರ್., ಸುಬ್ರಹ್ಮಣ್ಯ ಬಾಸ್ರಿ, ಡಾ| ಜಿ.ಎಸ್.ಜೆ. ಭಟ್, ಸುರೇಶ ಬೀಡು, ಜಗದೀಶ ಕಾಮತ್, ಕರುಣಾಕರ ಶೆಟ್ಟಿ, ರಾಮಚಂದ್ರ ಉಪಾಧ್ಯ ಮೊದಲಾದವರು ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
Veerappa Moily; ದೇಶಕ್ಕೆ ಕ್ರಿಕೆಟ್ ಕಾಮೆಂಟ್ರಿಯನ್ ಬೇಕಿಲ್ಲ
Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
MUST WATCH
ಹೊಸ ಸೇರ್ಪಡೆ
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ