ಉಡುಪಿ ಶ್ರೀಕೃಷ್ಣ ಮಠದ ದೇವರ ದರ್ಶನದಲ್ಲಿ ಮಾರ್ಪಾಟು: ಏಕಕಾಲದಲ್ಲಿ ಎರಡು ಪ್ರವೇಶದ ವ್ಯವಸ್ಥೆ


Team Udayavani, Jan 29, 2020, 8:35 PM IST

krishna-temple

ಉಡುಪಿ: ಶ್ರೀಕೃಷ್ಣ ಮಠದಲ್ಲಿ ದೇವರ ದರ್ಶನ ಮಾಡುವ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

ಈಗ ಬಹುತೇಕರು ವಾಹನಗಳಲ್ಲಿ ಬಂದು ರಾಜಾಂಗಣ ಹಿಂಭಾಗದ ಪಾರ್ಕಿಂಗ್‌ ಪ್ರದೇಶದಿಂದ ರಾಜಾಂಗಣ ಬಳಿಯಿಂದ ಶ್ರೀಕೃಷ್ಣಮಠವನ್ನು ಪ್ರವೇಶಿಸುವ ಕಾರಣ ಅವರಿಗೆ ಭೋಜನ ಶಾಲೆಯ ಮೇಲ್ಭಾಗದಿಂದ ದಾರಿಯನ್ನು ಕಲ್ಪಿಸಲಾಗಿದೆ. ಇವರು ಅಲ್ಲಿಂದ ಒಳಗೆ ಹೋಗಿ ಶ್ರೀಕೃಷ್ಣ ಮಠದ ಮೇಲ್ಭಾಗದ ಪೌಳಿಗೆ ಪ್ರವೇಶಿಸುತ್ತಾರೆ. ಅಲ್ಲಿಂದ ಮುಂದೆ ಹೋಗಿ ಶ್ರೀಕೃಷ್ಣ ಮಠದ ಒಳಪೌಳಿಯ ಮೆಟ್ಟಿಲಿನಿಂದ ಚಂದ್ರಶಾಲೆಗೆ ಇಳಿಯುತ್ತಾರೆ.

ಈಗ ಗರ್ಭಗುಡಿಯ ಎದುರು ಭಾಗಕ್ಕೆ ಬಂದಂತಾಗುತ್ತದೆ. ದಾರಿಯಲ್ಲಿ ಅಲ್ಲಲ್ಲಿ ಫ‌ಲಕಗಳನ್ನು, ನೆಲದ ಅಂತರಗಳು ತಿಳಿಯುವಂತೆ ರೇಡಿಯಮ್‌ ಸ್ಟಿಕ್ಕರ್‌ಗಳನ್ನು ಅಳವಡಿಸಲಾಗುತ್ತದೆ. ಒಂದೇ ಬಾರಿಗೆ ಎಲ್ಲರನ್ನೂ ಗರ್ಭಗುಡಿ ಎದುರು ಭಾಗಕ್ಕೆ ಬಿಡದೆ 40 ಜನರ ಒಂದೊಂದು ತಂಡವನ್ನು ದರ್ಶನಕ್ಕೆ ಬಿಡಲಾಗುತ್ತದೆ.

ಇದೇ ವೇಳೆ ಶ್ರೀಕೃಷ್ಣ ಮಠವನ್ನು ರಥಬೀದಿಯಿಂದ ಪ್ರವೇಶಿಸುವ ಮುಖ್ಯದ್ವಾರದ ಪಕ್ಕದಲ್ಲಿರುವ ದಾರಿಯಲ್ಲಿ ಸ್ಥಳೀಯ ಭಕ್ತರು ಪ್ರವೇಶಿಸಬಹುದು. ಇವರು ಇದೇ ದಾರಿಯಲ್ಲಿ ಒಳಪ್ರವೇಶಿಸಿ ದೇವರ ದರ್ಶನ ಮಾಡಬಹುದು.

ಇದುವರೆಗೆ ಯಾತ್ರಾರ್ಥಿಗಳು ಮತ್ತು ಸ್ಥಳೀಯರು ರಥಬೀದಿ ಮುಂಭಾಗದ ಒಂದೇ ಕಡೆಯಿಂದ ಪ್ರವೇಶಿಸುತ್ತಿದ್ದರು. ಭಕ್ತರ ಸಂಖ್ಯೆ ಹೆಚ್ಚಾದಾಗ ಮಧ್ವ ಸರೋವರದ ಬದಿಯಲ್ಲಿ ಸರತಿ ಸಾಲು ಮುಂದುವರಿಯುತ್ತಿತ್ತು. ಮಧ್ಯಾಹ್ನದ ವೇಳೆ ಬಿಸಿಲು ಅಥವಾ ಮಳೆ ಇದ್ದಾಗ ಯಾತ್ರಾರ್ಥಿಗಳಿಗೆ ನಿಂತು ಸುಸ್ತಾಗುತ್ತಿತ್ತು. ಈಗ ಭಕ್ತರು ಪ್ರವೇಶಿಸುವ ರಾಜಾಂಗಣದ ಪ್ರವೇಶದಿಂದ ಭೋಜನ ಶಾಲೆಯ ಮಹಡಿಯಿಂದ ಹೋಗುವ ಕಾರಣ ಬಿಸಿಲು ಅಥವಾ ಮಳೆಯ ಸಮಸ್ಯೆ ಇದಿರಾಗುವುದಿಲ್ಲ. ಶ್ರೀಕೃಷ್ಣ ಮಠದ ಗರ್ಭಗುಡಿಗೆ ನಿರ್ಮಿಸಲಾದ ಸ್ವರ್ಣ ಗೋಪುರದ ದರ್ಶನವೂ ಆಗುತ್ತದೆ. ಚಂದ್ರಶಾಲೆಯ ಮೇಲ್ಭಾಗದಲ್ಲಿಯೂ ಸಾಕಷ್ಟು ಸ್ಥಳಾವಕಾಶ ಇರುವುದರಿಂದ ಒಂದಿಷ್ಟು ಜನರು ಅಲ್ಲಿ ನಿಲ್ಲಲೂ ಅವಕಾಶಗಳಿವೆ. ಒಂದು ವೇಳೆ ನಡೆಯಲಾಗದ ಹಿರಿಯ ನಾಗರಿಕರಿಗೆ ರಥಬೀದಿಯ ಪ್ರವೇಶದ್ವಾರದಲ್ಲಿ ವೀಲ್‌ ಚೆಯರ್‌ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ಶ್ರೀಕೃಷ್ಣ ಮಠದ ಮೂಲಗಳು ತಿಳಿಸಿವೆ.

ಮಧ್ಯಾಹ್ನ ಮತ್ತು ರಾತ್ರಿ ವೇಳೆ ಭೋಜನಕ್ಕಾಗಿ ಹೋಗುವವರಿಗೂ ಇದೇ ದಾರಿಯಾಗಿದೆ. ಇಲ್ಲಿ ಭೋಜನಕ್ಕೆ ಮತ್ತು ದರ್ಶನಕ್ಕೆ ಹೋಗಲು ಪ್ರತ್ಯೇಕ ಎರಡು ವಿಭಾಗಗಳನ್ನು ಮಾಡಲಾಗಿದೆ.

ಹೊಸ ವ್ಯವಸ್ಥೆಯನ್ನು ಬುಧವಾರದಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಅಲ್ಲಲ್ಲಿ “ದೇವರ ದರ್ಶನಕ್ಕೆ ದಾರಿ’ ಎಂಬ ಫ‌ಲಕಗಳನ್ನು, ಅಲ್ಲಲ್ಲಿ ಬೇಕಾದ ಬೆಳಕು ಮತ್ತು ರೇಡಿಯಮ್‌ ಸ್ಟಿಕ್ಕರ್‌ಗಳನ್ನು ಅಳವಡಿಸಲಾಗುತ್ತಿದೆ.

ಕಾರ್ಯಾಲಯದಲ್ಲಿಯೂ ಮಾರ್ಪಾಟು
ಶ್ರೀಕೃಷ್ಣ ಮಠದ ಬಡಗುಮಾಳಿಗೆಯಲ್ಲಿ ಇದುವರೆಗೆ ತಳ ಅಂತಸ್ತಿನಲ್ಲಿ ಕಾರ್ಯಾಲಯವಿತ್ತು. ಇನ್ನು ಮುಂದೆ ಆಗಮಿಸಿದವರ ವಿಚಾರಣೆಗೆ ಮಾತ್ರ ಒಬ್ಬರು ಸಿಬಂದಿ ಇರುತ್ತಾರೆ. ಕೆಳಗೆ ಇದ್ದ ಕಚೇರಿ ವ್ಯವಹಾರಗಳನ್ನು ಮೊದಲ ಮಹಡಿಗೆ ಸ್ಥಳಾಂತರಿಸಲಾಗುತ್ತದೆ. ಕೆಳ ಭಾಗದ ಇನ್ನೊಂದು ಭಾಗದಲ್ಲಿ ಸ್ವಾಮೀಜಿಯವರನ್ನು ಭಕ್ತರು ಭೇಟಿ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ.

ಮತ್ತೂಂದು ಭಾಗದಲ್ಲಿ ಅಡುಗೆಗೆ ಬೇಕಾದ ಸಾಮಗ್ರಿಗಳನ್ನು ಇರಿಸುವ ವ್ಯವಸ್ಥೆ ಈ ಹಿಂದಿನಂತೆ ಮುಂದುವರಿಯುತ್ತದೆ. ಮೇಲ್ಭಾಗದಲ್ಲಿದ್ದ ಸ್ವಾಮೀಜಿಯವರು ಇರುತ್ತಿದ್ದ ಕೋಣೆಯಲ್ಲಿ ಪಾಠಗಳು ನಡೆಯುತ್ತವೆ. ಸ್ವಾಮೀಜಿಯವರನ್ನು ಭಕ್ತರು ಭೇಟಿ ಮಾಡುವ ವ್ಯವÓ§ೆ ಕೆಳಗೆ ಇರುತ್ತದೆ.

ಸ್ಥಳೀಯ ಭಕ್ತರಿಗೆ ಕೆಲವೇ ಹೊತ್ತಿನಲ್ಲಿ ದೇವರ ದರ್ಶನ ಮಾಡುವ ಉದ್ದೇಶ ಮತ್ತು ಯಾತ್ರಾರ್ಥಿಗಳು ಬಿಸಿಲು ಮತ್ತು ಮಳೆಯ ಸಮಸ್ಯೆಯಿಂದ ಬಳಲದೆ ಆರಾಮವಾಗಿ ದೇವರ ದರ್ಶನ ಮಾಡುವ ಉದ್ದೇಶ ನೂತನ ವ್ಯವಸ್ಥೆಯ ಹಿಂದಿದೆ.
– ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,
ಪರ್ಯಾಯ ಶ್ರೀ ಅದಮಾರು ಮಠ, ಶ್ರೀಕೃಷ್ಣ ಮಠ, ಉಡುಪಿ

ಟಾಪ್ ನ್ಯೂಸ್

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

16-adu-jeevitham

Movie Review: ಆಡು ಜೀವಿದಂ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.