ಘಮ-ಘಮಿಸಲಿದೆ ಮಟ್ಟುಗುಳ್ಳ ಕೊದ್ದೆಲ್‌!


Team Udayavani, Jan 16, 2018, 4:31 PM IST

19-46.jpg

ಕಾಪು / ಕಟಪಾಡಿ: ಸಂತ ಶ್ರೇಷ್ಠ  ಶ್ರೀ ವಾದಿರಾಜ ಅನುಗ್ರಹೀತ, ಪರ್ಯಾಯ ಕಾಲದ ಸುಗ್ರಾಸ ಭೋಜನಕ್ಕೆ ಸವಿರುಚಿ ನೀಡುವ ಮಟ್ಟುಗುಳ್ಳವು ಕೋಟೆ ಗ್ರಾಮದ ಮಟ್ಟು ಪ್ರದೇಶದ ಬೆಳೆಗಾರರ ಪರಿಶ್ರಮದ ಸೇವಾ ಬೆಳೆ ಕಾಣಿಕೆಯಾಗಿದೆ.

ಪ್ರಸ್ತುತ 2018ರ ಪರ್ಯಾಯಕ್ಕೆ 3,800 ಕಿಲೋ ಮಟ್ಟುಗುಳ್ಳ ಹೊರೆ ಕಾಣಿಕೆ ರೂಪದಲ್ಲಿ ನೀಡಲ್ಪಡಲಿದೆ. 2016ರ ಪರ್ಯಾಯದ ಸಂದರ್ಭ ಗುಳ್ಳ ಬೆಳೆ ಅಭಾವ ಇದ್ದು, 2,300 ಕಿಲೋ ಸಂದಾಯ ಆಗಿರುತ್ತದೆ. 2014ರಲ್ಲಿ 3,000ಕಿಲೋ ಸೇವಾ ರೂಪದಲ್ಲಿ ನೀಡಲಾಗಿತ್ತು  ಶ್ರೀ ಮಠಕ್ಕೆ ಈ ಬಾರಿ ಮಟ್ಟುಗುಳ್ಳ ಬೆಳೆಗಾರರ ಸಂಘದ ಮೂಲಕ 85 ಬೆಳೆಗಾರರು ಬೆಳೆದ ಮಟ್ಟುಗುಳ್ಳದ ತಲಾ 25-30 ಕಿಲೋ ಮತ್ತು ಇತರ ಸೇವಾರ್ಥಿಗಳ ಸಹಕಾರದಿಂದ ಒಟ್ಟು 3,800 ಕಿಲೋ ಮಟ್ಟುಗುಳ್ಳ ಸಂದಾಯವಾಗಲಿದೆ ಎಂಬುದು ಸಂಗ್ರಹಿತ ಮಾಹಿತಿ.

106 ಎಕರೆ ಪ್ರದೇಶದ ಗುಳ್ಳ  
ಮಟ್ಟು ಗ್ರಾಮದಿಂದ ಕೈಪುಂಜಾಲುವರೆಗಿನ ಸುಮಾರು 106 ಎಕರೆ ಪ್ರದೇಶದ ಗದ್ದೆಯ ಮಟ್ಟುಗುಳ್ಳ ಈ ಬಾರಿ ಮಟ್ಟು ಬೆಳೆಗಾರರ ಸಂಘಕ್ಕೆ ಬಂದು ಗ್ರೇಡಿಂಗ್‌ ಆಗಿ ಸ್ಟಿಕ್ಕರ್‌ ರಹಿತವಾಗಿ ಹೊರೆಕಾಣಿಕೆಯ ರೂಪದಲ್ಲಿ ಜ.16ರ ಂದು ಅರ್ಪಿಸಲಾಗುತ್ತಿದೆ.

ಟಿ.ವಿ. ರಾವ್‌ ನೇತೃತ್ವದಲ್ಲಿ ಈ ಹೊರೆಕಾಣಿಕೆ ಮೆರವಣಿಗೆ ಸಾಗುತ್ತಿತ್ತು. ಅವರ ನಿಧನದ ನಂತರ ಮಟ್ಟು ಗ್ರಾಮಸ್ಥರು, ಡಾ| ಟಿ.ಎಸ್‌. ರಾವ್‌, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಟ್ಟು, ಗುಳ್ಳ ಬೆಳೆಗಾರರು ಸೇರಿಕೊಂಡು 400-500 ಜನರು ಮಟ್ಟುಗುಳ್ಳ ಬೆಳೆಗಾರರ ಸಂಘದ ನೇತೃತ್ವದಲ್ಲಿ ಈ ಬಾರಿಯ ಮೆರವಣಿಗೆ ನಡೆಯಲಿದೆ ಎಂದು ಸಂಘದ ವ್ಯವಸ್ಥಾಪಕ ಲಕ್ಷ್ಮಣ್‌ ಮಟ್ಟು  ವಿವರ ನೀಡಿದ್ದಾರೆ.

ಜನಜನಿತವಾಗಿರುವ ಮಟ್ಟುಗುಳ್ಳ ವಿಶೇಷವಾಗಿ ಮಟ್ಟು ಪ್ರದೇಶದಲ್ಲಿ ಮಾತ್ರ ಬೆಳೆಸಲಾಗುತ್ತದೆ. ಈ ಪ್ರದೇಶದ ಮರಳು ಮಿಶ್ರಿತ ಕಂದು ಮಣ್ಣು ಗುಳ್ಳ ಬೆಳೆಗೆ  ಪೂರಕವಾಗಿದ್ದು, ಇದೇ ಬೀಜವನ್ನು ಬೇರೆಡೆ ಬಿತ್ತಿದರೂ ಮಟ್ಟುಗುಳ್ಳದ ಸವಿಯನ್ನು ಕಂಡುಕೊಳ್ಳಲು ಸಾಧ್ಯವಾಗದು. ಹಾಗಾಗಿ ವಿಶೇಷತೆ ಪಡೆದುಕೊಂಡಿದೆ. 

ಇದೀಗ ಜಿಐ ಮಾನ್ಯತೆ 
ಇಲ್ಲಿನ ಕೃಷಿಕರು ಭತ್ತದ ಬೆಳೆಯನ್ನು ಬೆಳೆಯುವ ಗದ್ದೆಯಲ್ಲಿ ಪ್ರತೀವರ್ಷ ಗುಳ್ಳ ಕೃಷಿ ಮಾಡುತ್ತಾರೆ. ಅನೇಕರು ಜೂನ್‌, ಜುಲೆ„ ತಿಂಗಳಲ್ಲಿ ಬೆಳೆಯಲಾಗುವ ಕಾರ್ತಿ ಭತ್ತದ ಬೆಳೆಯನ್ನು ಮೊಟಕುಗೊಳಿಸಿ ಗುಳ್ಳಕೃಷಿಗಾಗಿ ಗದ್ದೆ ಹಡಿಲುಬಿಟ್ಟು ಸೆಪ್ಟೆಂಬರ್‌ ತಿಂಗಳಲ್ಲಿ ಗುಳ್ಳದ ಬಿತ್ತನೆ ನಡೆಸುತ್ತಾರೆ. ಮೂರು ತಿಂಗಳ ಕಾಲಾವಕಾಶದಲ್ಲಿ ಸಸಿ ಬಲಿತು ಸಮೃದ್ಧ ಗುಳ್ಳದ ಬೆಳೆಯಾಗುತ್ತದೆ. ಇದೀಗ ಜಿಐ ಮಾನ್ಯತೆಯೊಂದಿಗೆ ಪೇಟೆಂಟ್‌ ಪಡೆದು ಲಾಂಛನ(ಸ್ಟಿಕ್ಕರ್‌)ದೊಂದಿಗೆ ಮುಂಬಯಿ, ಬೆಂಗಳೂರು ಸೇರಿದಂತೆ ದೇಶವಿದೇಶಗಲ್ಲಿ ಮಟ್ಟುಗುಳ್ಳ ಪ್ರಿಯರಿದ್ದು, ಅಲ್ಲಿಗೂ ಕಾಲಕಾಲಕ್ಕೆ ಸರಬರಾಜು ಮಾಡಲಾಗುತ್ತದೆ. 

ವಾಡಿಕೆಯಂತೆ ಪ್ರಥಮ ಬೆಳೆ ಶ್ರೀಕೃಷ್ಣ ಮಠಕ್ಕೆ  ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಸೋದೆ ಮಠದ ಶ್ರೀವಾದಿರಾಜ ಯತಿಗಳು ಅನುಗ್ರಹಿಸಿಕೊಟ್ಟ ಮುಷ್ಟಿ ಬೀಜದಿಂದ ಸಷ್ಟಿಯಾದ ಮಟ್ಟುಗುಳ್ಳ ಎನ್ನುವುದು ಪ್ರತೀತಿ. ಮಟ್ಟುಗುಳ್ಳವನ್ನು ವಾಡಿಕೆಯಂತೆ ಪ್ರಥಮ ಬೆಳೆಯನ್ನು ಶ್ರೀಕೃಷ್ಣಮಠಕ್ಕೆ ಅರ್ಪಿಸಿ ಕೃತಾರ್ಥರಾಗುತ್ತಾರೆ.

ಉಡುಪಿ ಶ್ರೀಕೃಷ್ಣಮಠದಲ್ಲಿ ವರ್ಷಂಪ್ರತಿ ನಡೆಯುವ ಮಕರಸಂಕ್ರಾಂತಿ ಉತ್ಸವಕ್ಕೆ ಮಟ್ಟುಗುಳ್ಳವನ್ನು ಕೃಷಿಕರು ತಪ್ಪದೇ ಸಮರ್ಪಿಸುತ್ತಾರೆ. ಅದೇ ರೀತಿ ಎರಡು ವರ್ಷಕ್ಕೊಮ್ಮ ಜರಗುವ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವದಂದು ಹಸಿರು ಹೊರೆಕಾಣಿಕೆ ರೂಪದಲ್ಲಿ ಹೇರಳವಾಗಿ ಮಟ್ಟುಗುಳ್ಳ ಸಹಿತ ಅಕ್ಕಿಯನ್ನು ಸಮಸ್ತ ಮಟ್ಟು ಗ್ರಾಮಸ್ಥರು ಕೂಡಿಕೊಂಡು ಸುಮಾರು 500 ವರ್ಷಗಳಿಂದಲೂ ಸಮರ್ಪಿಸಿ ಧನ್ಯತೆ ಮೆರೆಯುತ್ತಿದ್ದಾರೆ.

ಮಟ್ಟುಗುಳ್ಳ ಸಮರ್ಪಣೆ
ಉಡುಪಿ ಪರ್ಯಾಯಕ್ಕೆ ಪ್ರತೀ ವರ್ಷ ಗೋಣಿಗಟ್ಟಲೇ ಮಟ್ಟುಗುಳ್ಳವನ್ನು ಸಮರ್ಪಿಸಿಕೊಂಡು ಬರಲಾಗುತ್ತಿದ್ದು, ಅದೇ ರೀತಿಯಲ್ಲಿ ಈ ಬಾರಿಯೂ ಜ. 16ರಂದು ಹೊರೆಕಾಣಿಕೆ ಮೂಲಕ ಗುಳ್ಳವನ್ನು ಸಮರ್ಪಿಸಲು ಸಿದ್ಧತೆ ನಡೆಸುತ್ತಿದ್ದೇವೆ. ಬೆಳೆಗಾರರು ತಮ್ಮ ಶಕöನುಸಾರವಾಗಿ ತಾವು ಬೆಳೆಸಿದ ಗುಳ್ಳವನ್ನು ಮಟ್ಟು ಗ್ರಾಮದಲ್ಲಿರುವ ನಿರ್ಧರಿತ ಪ್ರದೇಶಕ್ಕೆ ತಂದು ಸಮರ್ಪಿಸುತ್ತಿದ್ದು ಅಲ್ಲಿಂದ ಜೊತೆ ಸೇರಿ ಬಿರುದಾವಳಿಯೊಂದಿಗೆ ಉಡುಪಿ ಕೃಷ್ಣ ಮಠಕ್ಕೆ ಕೊಂಡೊಯ್ದು ಸಮರ್ಪಿಸಲಾಗುವುದು ಎಂದು ಮಟ್ಟುಗುಳ್ಳ ಬೆಳೆಗಾರರ ಸಂಘದ ಸಲಹೆಗಾರ ಪರಮೇಶ್ವರ ಅಧಿಕಾರಿ ತಿಳಿಸಿದ್ದಾರೆ.

ರಾಕೇಶ್‌ /  ವಿಜಯ್‌

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.