ಉಡುಪಿ ಜಿಲ್ಲೆ:ಆತಂಕಕ್ಕೆ ಕಾರಣವಿಲ್ಲವಾದರೂ ಸುರಕ್ಷಾ ಕ್ರಮ ಅವಶ್ಯ


Team Udayavani, Dec 21, 2018, 10:58 AM IST

kris.jpg

ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿನ ಪ್ರಸಾದದಲ್ಲಿ ವಿಷ ಸೇರಿಸಿದ್ದರ ಘಟನೆಯಿಂದ ಎಚ್ಚೆತ್ತ ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಯ ದೇವಸ್ಥಾನಗಳಲ್ಲೂ ಅಡುಗೆ ಕೋಣೆಗೆ ಸಿಸಿ ಟಿವಿ ಅಳವಡಿಸುವುದೂ ಸೇರಿದಂತೆ ಕೆಲವು ನಿಯಮಗಳನ್ನು ಜಾರಿಗೊಳಿಸಿತು. ಈ ಹಿನ್ನೆಲೆಯಲ್ಲಿ ಉದಯವಾಣಿ ವರದಿಗಾರರ ತಂಡ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿನ ದೇವಸ್ಥಾನಗಳ ಸ್ಥಿತಿ ಕುರಿತು ಮಾಹಿತಿ ಕಲೆ ಹಾಕಿತು. ಉಡುಪಿ ಜಿಲ್ಲೆಯ ವಿವರ ಇಲ್ಲಿದೆ. 

ಮಂಗಳೂರಿನಲ್ಲಿರುವಂತೆಯೇ ಉಡುಪಿ ಜಿಲ್ಲೆಯಲ್ಲೂ ಮುಜರಾಯಿ ಇಲಾಖೆ ವ್ಯಾಪ್ತಿಯಡಿ ಒಟ್ಟು 759 ದೇವಸ್ಥಾನಗಳಿವೆ. ಇದಲ್ಲದೇ ವರ್ಗೀಕರಣಗೊಂಡ ದೇವಸ್ಥಾನಗಳೂ ಇವೆ. ಇಲಾಖೆ ದೇವಸ್ಥಾನಗಳಲ್ಲಿ ಗ್ರೂಪ್‌ ಎ ಯಲ್ಲಿ 25, ಬಿಯಲ್ಲಿ 19, ಸಿಯಲ್ಲಿ 759 ದೇವಸ್ಥಾನಗಳಿವೆ. ಆದರೆ ಎಲ್ಲ ದೇವಸ್ಥಾನಗಳಲ್ಲೂ ಭಾರೀ
ಸಂಖ್ಯೆಯಲ್ಲಿ ಅನ್ನ ಸಂತರ್ಪಣೆ ನಡೆಯುವುದು ಕಡಿಮೆ. ಜತೆಗೆ ಎಲ್ಲ ದೇವಸ್ಥಾನಗಳಲ್ಲೂ ನಿತ್ಯ ಅನ್ನ ಸಂತರ್ಪಣೆ ಇಲ್ಲ. ಬಹಳ ಪ್ರಮುಖವಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಿತ್ಯ ಅನ್ನ ಸಂತರ್ಪಣೆಯಿದ್ದು, ಸಾವಿರಾರು ಜನರು ಭೋಜನ ಸ್ವೀಕರಿಸುತ್ತಾರೆ.ಜತೆಗೆ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರೀ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯಗಳಲ್ಲಿ ನಿತ್ಯ ಅನ್ನದಾನ ಇದೆ. ಎಲ್ಲೆಡೆಯೂ ಅಡುಗೆ ಕೋಣೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕೊಲ್ಲೂರಿನಲ್ಲಿ ಅಡುಗೆ ಕೋಣೆ ಹಾಗೂ ಅನ್ನಛತ್ರದಲ್ಲಿ ಸಿಸಿಟಿವಿ ಇನ್ನೂ ಅಳವಡಿಸಿಲ್ಲ. ಈ ವಾರದಲ್ಲಿ ಅಳವಡಿಸಲಾಗುವುದು ಎಂದು ದೇಗುಲದ ಪ್ರಮುಖರು ಹೇಳಿದ್ದಾರೆ.

ಮಾರಣಕಟ್ಟೆಯಲ್ಲಿ ಅಡುಗೆ ಕೋಣೆ, ಊಟದ ಛತ್ರದಲ್ಲಿ ಈ ಹಿಂದೆಯೇ ಸಿಸಿ ಟಿವಿಯನ್ನು ಅಳವಡಿಸಲಾಗಿದೆ. ಸ್ವತ್ಛತೆ ಕುರಿತೂ ವಿಶೇಷ ಕ್ರಮ ವಹಿಸಲಾಗಿದೆ. ಕಮಲಶಿಲೆಯಲ್ಲಿ ಅಡುಗೆ ಕೋಣೆ ಹಾಗೂ ಊಟದ ಛತ್ರದಲ್ಲಿ ಸಿಸಿಟಿವಿ ವ್ಯವಸ್ಥೆ ಇಲ್ಲವಾದರೂ ಸ್ವತ್ಛತೆ ಕುರಿತು ಕಾಳಜಿ ವಹಿಸಲಾಗಿದೆ ಎಂಬುದು ಸಂಬಂಧಪಟ್ಟವರ ಹೇಳಿಕ

ಶ್ರೀ ಕೃಷ್ಣ ಮಠದಲ್ಲಿ ಸದ್ಯಕ್ಕಿಲ್ಲ
ಶ್ರೀಕೃಷ್ಣಮಠದಲ್ಲಿ ನಿತ್ಯ ಅನ್ನಸಂತರ್ಪಣೆ ನಡೆಯುವುದಾದರೂ ಇದು ಮುಜರಾಯಿ ಇಲಾಖೆಗೆ ಸೇರಿಲ್ಲ. ಇಲ್ಲಿ ಸಾಮಾನ್ಯ ದಿನಗಳಲ್ಲಿ ನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಸೇರಿ ಸುಮಾರು ಹತ್ತು ಸಾವಿರ ಮಂದಿ ಊಟ ಮಾಡುತ್ತಾರೆ. ಶಾಲೆಗಳಿಗೆ ರಜೆ ಇರುವಾಗ, ವಿಶೇಷ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿಗೆ ಇರುತ್ತದೆ. ಪ್ರಸ್ತುತ ಭೋಜನ ಶಾಲೆಯಲ್ಲಿ ಸಿಸಿಟಿವಿ ವ್ಯವಸ್ಥೆ ಇದೆ. ಆದರೆ ಅಡುಗೆ ಕೋಣೆಗೆ ಅಳವಡಿಸಬೇಕಿದೆ. ಆನೆಗುಡ್ಡೆ  ದೇವಸ್ಥಾನದಲ್ಲಿ ನಿತ್ಯ ಭೋಜನವಿದೆ. ಇದಲ್ಲದೆ ಅಂಬಲಪಾಡಿ, ಕಾಪು ಮಾರಿಗುಡಿ, ಬನ್ನಂಜೆ ಮಹಾಲಿಂಗೇಶ್ವರ ಮೊದಲಾದ ಸುಮಾರು 20 ದೇವಸ್ಥಾನಗಳಲ್ಲಿ ಸೋಮವಾರ, ಮಂಗಳವಾರ, ಶುಕ್ರವಾರ ಹೀಗೆ ಒಂದೊಂದೆಡೆ ಒಂದೊಂದು ದಿನ ಭೋಜನ ಪ್ರಸಾದದ ವಿತರಣೆ ನಡೆಯುತ್ತಿದೆ. 

ಮಂದಾರ್ತಿ ದೇವಸ್ಥಾನದಲ್ಲಿ ಶುಕ್ರವಾರ, ಮಂಗಳವಾರ ಮಧ್ಯಾಹ್ನ ,ರಾತ್ರಿ ಸೇರಿ 3,000 ಜನರು, 1,000 ವಿದ್ಯಾರ್ಥಿಗಳು, ಉಳಿದ ದಿನ ಭಕ್ತರು, ವಿದ್ಯಾರ್ಥಿಗಳು ಸೇರಿ ಸುಮಾರು 2 ಸಾವಿರ ಮಂದಿ ಭೋಜನ ಮಾಡುತ್ತಾರೆ. ಮಂದಾರ್ತಿ ದೇವಸ್ಥಾನದ ಅಡುಗೆ ಕೋಣೆ, ಸಾಮಾನು ಇಡುವ ಕೋಣೆ, ಭೋಜನಶಾಲೆ
ಸೇರಿ 18, ದೇವಸ್ಥಾನದ ವಠಾರದಲ್ಲಿ 18, ಬೀದಿಯಲ್ಲಿ ನಾಲ್ಕು ಒಟ್ಟು 40 ಸಿಸಿಟಿವಿ ಅಳವಡಿಸಲಾಗಿದೆ.
ಇದಲ್ಲದೇ ಪೆರ್ಡೂರು, ನೀಲಾವರ, ಮಾರಣಕಟ್ಟೆ, ಮುಂಡ್ಕೂರು ದೇವಸ್ಥಾನಗಳಲ್ಲಿ ನಿತ್ಯ ಅನ್ನಸಂತರ್ಪಣೆಯಿದ್ದು, ಸ್ವತ್ಛತೆಗೆ ಗಮನಕೊಡಲಾಗಿದೆ.

ಅಳವಡಿಕೆಗೆ ಕ್ರಮ
ಜಿಲ್ಲೆಯ ಎ ಮತ್ತು ಬಿ ಶ್ರೇಣಿಯ ದೇವಸ್ಥಾನಗಳ ಪಾಕಶಾಲೆ, ಸಾಮಾನು ದಾಸ್ತಾನು ಕೋಣೆಗಳಿಗೆ ಸಿಸಿಟಿವಿ ಅಳವಡಿಸಿದ್ದು, ಉಳಿದವು ಜಾರಿಯಲ್ಲಿದೆ.
ಪ್ರಶಾಂತ ಶೆಟ್ಟಿ,ತಹಶೀಲ್ದಾರ್‌, ಮುಜರಾಯಿ ಇಲಾಖೆ, ಉಡುಪಿ.

ಅಳವಡಿಸಲು ಸಮಸ್ಯೆ ಇಲ್ಲ. ಶ್ರೀಕೃಷ್ಣಮಠದ ಭೋಜನ ಶಾಲೆಯಲ್ಲಿ ಸಿಸಿಟಿವಿ ಈಗಾಗಲೇ ಇದೆ. ಮುಂದೆ ಅಡುಗೆ ಕೋಣೆಗೂ ಅಳವಡಿಸಬೇಕೆಂದರೆ ಅಳವಡಿಸಬಹುದು.
 ಪ್ರಹ್ಲಾದ ಆಚಾರ್ಯ, ಆಡಳಿತಾಧಿಕಾರಿ, ಶ್ರೀಕೃಷ್ಣ ಮಠ ಪರ್ಯಾಯ ಶ್ರೀಪಲಿಮಾರು ಮಠ, ಉಡುಪಿ. 

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.