ಉಡುಪಿ: ರೈತ ಸಂತೆಗೆ ಬಂದದ್ದು ಒಂದೇ ಅರ್ಜಿ!
Team Udayavani, Aug 8, 2018, 10:47 AM IST
ಉಡುಪಿ: ಕೃಷಿ ಕ್ಷೀಣಿಸುತ್ತ ಬಂದಿರುವುದು ಸರಕಾರದ ಧೋರಣೆಯಿಂದಲೇ. ಇದು ಕೃಷಿಕರ ನಿರುತ್ಸಾಹಕ್ಕೂ ಕಾರಣವಾಗಿದ್ದು, ಇದು ಎಷ್ಟು ಶಿಥಿಲಾವಸ್ಥೆಗೆ ತಲುಪಿದೆ ಎಂದರೆ ಸರಕಾರ ಪ್ರೋತ್ಸಾಹ ಕೊಡುವ ಕ್ರಮಕ್ಕೆ ಮುಂದಾದರೂ ಅದನ್ನು ಕೇಳಿಸಿಕೊಳ್ಳದಷ್ಟು!
ಉಡುಪಿಯಲ್ಲಿ ಜಿಲ್ಲಾಡಳಿತ ಆರಂಭಿಸಲು ಉದ್ದೇಶಿಸಿದ ರೈತ ಸಂತೆ ಇದಕ್ಕೊಂದು ಉತ್ತಮ ಉದಾಹರಣೆ. ರೈತರು ಬೆಳೆಸಿದ ತರಕಾರಿ ಮಾರಾಟಕ್ಕೆ ರೈತ ಸಂತೆ ಆರಂಭಿಸಲಾಗುವುದು. ಇದರಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಇಲ್ಲ. ರೈತರೇ ನೇರ ಮಾರಾಟ ಮಾಡಬಹುದು ಎಂದು ಕೆಲವು ತಿಂಗಳ ಹಿಂದೆ ತೋಟಗಾರಿಕೆ ಇಲಾಖೆ ಪ್ರಕಟನೆ ನೀಡಿತು.
ಆದರೆ ಪ್ರತಿಸ್ಪಂದನೆ ಶೂನ್ಯ. ಮತ್ತೂಮ್ಮೆ ಪ್ರಕಟನೆ ಕೊಟ್ಟರೂ ಹೆಸರು ನೋಂದಣಿಗೆ ಕೊನೆಯ ದಿನ ಜು. 31 ಆಗಿತ್ತು. ಆದರೆ ಬಂದ ಅರ್ಜಿ ಒಂದೇ ಒಂದು!
ಓರ್ವ ರೈತನ ಸ್ಪಂದನೆ
ಯಾವುದೇ ಜಿಲ್ಲೆಯಲ್ಲಿ ತರಕಾರಿ ಬೆಳೆದ ರೈತರು ಮಧ್ಯವರ್ತಿಗಳ ಹಾವಳಿ ಇಲ್ಲದೆ ಗ್ರಾಹಕರಿಗೆ ಮಾರಾಟ ಮಾಡಲು ರೈತ ಸಂತೆಯಲ್ಲಿ ಅವಕಾಶ ಇತ್ತು. ಉಡುಪಿ ಜಿಲ್ಲೆಯ ವಿವಿಧೆಡೆ ತರಕಾರಿ ಬೆಳೆಯುವ ಕೃಷಿಕರು ಇಂದಿಗೂ ಇದ್ದಾರೆ. ಆದರೆ ತೋಟಗಾರಿಕೆ ಇಲಾಖೆಯ ಹೊಸ ಉಪಕ್ರಮಕ್ಕೆ ಒಬ್ಬರು ಮಾತ್ರ ಸ್ಪಂದಿಸಿದ್ದಾರೆ.
ಒಬ್ಬೊಬ್ಬರೇ ತಂದು ತರಕಾರಿ ಮಾರಾಟಕ್ಕೆ ವೆಚ್ಚದ ಹೊರೆ ಬೀಳಬಹುದು. ಈ ಕಾರಣ ಐದಾರು ರೈತರು ಸೇರಿ ತರಬಹುದು ಎಂಬ ಆಲೋಚನೆಯೂ ಅಧಿಕಾರಿಗಳಿಗೆ ಇತ್ತು. ಈ ಬಗ್ಗೆ ಕೃಷಿಕ ಮುಂದಾಳುಗಳ, ಬೆನಗಲ್ ಬೆಳೆಗಾರರ ಸಂಘದವರ ಉಪಸ್ಥಿತಿಯಲ್ಲಿ ಸಭೆ ನಡೆಸಿಯೇ ನಿರ್ಧಾರ ತಳೆದಿದ್ದರೂ ಫಲಿತಾಂಶ ಸಿಕ್ಕಿಲ್ಲ.
ಈಗ ಮತ್ತೆ ಸಭೆ ನಡೆಸಿ ನಿರ್ಣಯ ತಳೆದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಅವರು ಸಮ್ಮತಿಸಿದರೆ ಮತ್ತೂಂದು ಬಾರಿ ಪ್ರಕಟನೆ ಕೊಡುತ್ತೇವೆ. ಈಗ ಮಳೆಗಾಲ, ತರಕಾರಿ ಬೆಳೆ ಕಡಿಮೆ. ರೈತರು, ರೈತ ಸಂಘ ಟನೆಗಳು ಜಾಗೃತರಾಗಿ ಆಸಕ್ತಿ ತೋರಿದರೆ ಸೆಪ್ಟಂಬರ್ನಲ್ಲಿ ಇದು ಆರಂಭವಾಗಬಹುದು ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಭುವನೇಶ್ವರಿ.
ಸದ್ಯಕ್ಕೆ ಸಾವಯವ ಸಂತೆಯೂ ಇಲ್ಲ
ಈ ನಡುವೆ ಉಡುಪಿ ದೊಡ್ಡಣಗುಡ್ಡೆ ತೋಟಗಾರಿಕಾ ಕೇಂದ್ರದಲ್ಲಿ ರವಿವಾರ ನಡೆಯುತ್ತಿದ್ದ ಸಾವಯವ ಸಂತೆಯೂ ಸದ್ಯ ನಿಂತಿದೆ. ಮಳೆಯಿಂದ ಸ್ಥಳೀಯ ಉತ್ಪಾದನೆ ಇಲ್ಲದಿರುವುದು ಕಾರಣ. ದೂರದಿಂದ ಕೃಷ್ಯುತ್ಪನ್ನ ತರುವುದು ವೆಚ್ಚದಾಯಕ. ಸೆಪ್ಟೆಂಬರ್ನಲ್ಲಿ ಉತ್ಪಾದನೆ ಹೆಚ್ಚಳವಾಗುತ್ತದೆ. ಹೀಗಾಗಿ ಆ ಬಳಿಕ ಆರಂಭಿಸುವುದಾಗಿ ಸಾವಯವ ಕೃಷಿಕರ ಒಕ್ಕೂಟದ ನಿರ್ದೇಶಕ ದೇವದಾಸ್ ಹೆಬ್ಟಾರ್ ತಿಳಿಸಿದ್ದಾರೆ.
ಆಗ ವಿಚಾರಿಸಿದವರು ಈಗೆಲ್ಲಿ?
ರವಿವಾರ ಸಾವಯವ ಸಂತೆ ಆರಂಭಿಸಿದಾಗ ಅನೇಕ ತೋಟಗಾರಿಕೆ ಬೆಳೆಗಾರರು ಸಂಪರ್ಕಿಸಿದ್ದರು. ಅದು ಸಾವಯವ ಸಂತೆಯಾದ್ದರಿಂದ ಸಾವಯವ ಅಲ್ಲದ ಬೆಳೆ ತರುವಂತಿಲ್ಲ. ಹೀಗಾಗಿ ಗುರುವಾರ ರೈತ ಸಂತೆ ಆರಂಭಿಸಲು ಚಿಂತನೆ ನಡೆಸಿದೆವು. ಈಗ ಹೆಸರು ನೋಂದಣಿಯಾದದ್ದು ಒಂದು. ಆಗ ವಿಚಾರಿಸಿದವರು ಆಸಕ್ತಿ ತಾಳಿದ್ದರೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿತ್ತು. ಮಧ್ಯವರ್ತಿಗಳಿಲ್ಲದೇ ರೈತರಿಗೆ ಪ್ರಯೋಜನ ದೊರಕುತ್ತಿತ್ತು.
– ಗುರುಪ್ರಸಾದ್, ಸಹಾಯಕ ತೋಟಗಾರಿಕಾ ಅಧಿಕಾರಿ, ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!