ಉಡುಪಿ: ನೀರು ಸರಬರಾಜು ಶೀಘ್ರವೇ ಸಹಜ ಸ್ಥಿತಿಗೆ
Team Udayavani, Jun 19, 2019, 5:45 AM IST
ಉಡುಪಿ: ಸ್ವರ್ಣಾ ನದಿಯ ಅಚ್ಚುಕಟ್ಟು ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ನದಿಯಲ್ಲಿ ನೀರಿನ ಹರಿವು ಆರಂಭ ಗೊಂಡಿದೆ. ಮಂಗಳವಾರ ಪುತ್ತಿಗೆ ಸೇತುವೆಯಿಂದ ಬಜೆ ಅಣೆಕಟ್ಟಿನತ್ತ ನೀರು ಸರಾಗವಾಗಿ ಹರಿದು ಬಂದಿದ್ದು, ನೀರಿನ ಮಟ್ಟ 2.70 ಮೀಟರ್ನಷ್ಟಾಗಿದೆ.
ಸರಬರಾಜು ಶೀಘ್ರ ಸಹಜ ಸ್ಥಿತಿಗೆ
ಬಜೆ ಅಣೆಕಟ್ಟಿನಲ್ಲಿ ನೀರು ಸಂಗ್ರಹ ಹೆಚ್ಚುತ್ತಿರುವುದರಿಂದ ಉಡುಪಿ ನಗರಕ್ಕೆ
ಈ ಹಿಂದಿನಂತೆ 24 ಗಂಟೆ ನಿರಂತರ ನೀರು ಸರಬರಾಜು ಮಾಡುವ ಬಗ್ಗೆ ಶೀಘ್ರವೇ ನಿರ್ಧರಿಸಲಾಗುವುದು ಎಂದು ನಗರ ಸಭೆಯ ಆಯುಕ್ತರು ತಿಳಿಸಿದ್ದಾರೆ. ಪಂಪಿಂಗ್ ಪ್ರಕ್ರಿಯೆ ಸೋಮವಾರಕ್ಕೆ ಕೊನೆಗೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ನೀರಿನ ಸಮಸ್ಯೆ ಪರಿಹಾರವಾಗುವ ಸಾಧ್ಯತೆ ಇದೆ.
ಶಾಸಕರ ಭೇಟಿ
ಮಂಗಳವಾರ ಶಾಸಕ ರಘುಪತಿ ಭಟ್ ಅವರು ಬಜೆ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲಿಸಿದರು. ನೀರು ಸಾಕಷ್ಟು ಪ್ರಮಾಣದಲ್ಲಿ ಹರಿದು ಬರುತ್ತಿರುವುದರಿಂದ ಬುಧವಾರ ಸಂಜೆಯ ವೇಳೆ ಉಡುಪಿಗೆ ನಿರಂತರ ನೀರು ಬಿಡುವ ಬಗ್ಗೆ ಘೋಷಿಸಲಾಗುವುದು ಎಂದವರು ತಿಳಿಸಿ¨ªಾರೆ. ಈ ಬಗೆಗಿನ ಮಾಹತಿಯನ್ನು ಶಾಸಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಒಂದು ತಿಂಗಳಿನಿಂದ ಉಡುಪಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಈ ಬಗ್ಗೆ ತಾಳ್ಮೆ ವಹಿಸಿ ಸಹಕರಿಸಿದ ನಾಗರಿಕರು, ಕಾರ್ಯಕರ್ತರಿಗೆ ಅವರು ಅಭಿನಂದನೆ ಸಲ್ಲಿಸಿದರು.
ಬಜೆ ಭೇಟಿಯ ಸಂದರ್ಭದಲ್ಲಿ ಜಿÇÉಾ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ನಗರಸಭಾ ಸದಸ್ಯ ಗಿರೀಶ್ ಅಂಚನ್, ಮಂಜುನಾಥ್ ಮಣಿಪಾಲ, ಪಕ್ಷದ ಪ್ರಮುಖರಾದ ರವಿ ಅಮೀನ್ ಉಪಸ್ಥಿತರಿದ್ದರು.