ಉಡುಪಿ: ಬೈಕ್ನಿಂದ ಬಿದ್ದು ಮಹಿಳೆ ಸಾವು
Team Udayavani, Dec 18, 2022, 12:43 AM IST
ಉಡುಪಿ: ಬೈಕ್ನಿಂದ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ರಾಕೇಶ್ ಭಟ್ ಅವರು ತನ್ನ ತಾಯಿ ವನಿತಾ (50) ಅವರನ್ನು ಬುಲೆಟ್ನಲ್ಲಿ ಕುಳ್ಳಿರಿಸಿಕೊಂಡು ಶ್ರೀ ಕೃಷ್ಣ ಮಠಕ್ಕೆ ಕಾರ್ಯಕ್ರಮಕ್ಕೆಂದು ತೆರಳುತ್ತಿದ್ದರು. ವಿದ್ಯೋದಯ ಶಾಲೆಯ ಬಳಿ ಸಾರ್ವಜನಿಕ ರಸ್ತೆಯಲ್ಲಿ ಬುಲೆಟ್ ನಿಯಂತ್ರಣ ತಪ್ಪಿ ಬಿದ್ದು, ವನಿತಾ ಅವರ ತಲೆಗೆ ರಕ್ತಗಾಯವಾಗಿತ್ತು.
ಕೂಡಲೇ ಅಲ್ಲಿ ಸೇರಿದ್ದ ಸಾರ್ವಜನಿಕರು ಹಾಗೂ ರಾಕೇಶ್ ಭಟ್ ಅವರು ಚಿಕಿತ್ಸೆಗಾಗಿ ಗಾಂಧಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ವನಿತಾ ಅವರು ಸಾವನ್ನಪ್ಪಿದ್ದಾರೆ. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ: ಹುಳು ಕಚ್ಚಿ ವ್ಯಕ್ತಿ ಸಾವು
ಉಡುಪಿ: ಹುಳು ಕಚ್ಚಿ ಬೆಂಗಳೂರಿನ ವಿ. ರಾಮ್ಮೋಹನ ಶೆಟ್ಟಿ (69)ಅವರು ಸಾವನ್ನಪ್ಪಿದ್ದಾರೆ. ಅವರಿಗೆ ಸುಮಾರು 12 ವರ್ಷದಿಂದ ಕಿಡ್ನಿ ಸಮಸ್ಯೆಯ ಕಾಯಿಲೆ ಇದ್ದು, ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಡಿ. 11ರಂದು ಅವರ ತಂದೆ- ತಾಯಿಯೊಂದಿಗೆ ಅಜ್ಜಿ ಮನೆಯಾದ ಮಣಿಪಾಲದ ಅಪಾರ್ಟ್ಮೆಂಟ್ಗೆ ಬಂದಿದ್ದರು. ಮಧ್ಯರಾತ್ರಿ ವೇಳೆ ಅವರ ಎಡಕಾಲಿಗೆ ಯಾವುದೋ ಹುಳು ಕಚ್ಚಿದ ಪರಿಣಾಮ ಅವರಿಗೆ ಜ್ವರ ಬಂದಿದ್ದು, ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರ್ವ: ಗದ್ದೆಯಲ್ಲಿ ಬಿದ್ದು ಸಾವು
ಶಿರ್ವ: ಮುಂಬಯಿಯಲ್ಲಿ ವಾಸವಿದ್ದು, ಸುಮಾರು 15 ದಿನಗಳ ಹಿಂದೆ ಪತ್ನಿಯೊಂದಿಗೆ ಮಟ್ಟಾರು ಮುಲ್ಲಮಾರು ಮನೆಗೆ ಬಂದಿದ್ದ ರಾಮ ಪೂಜಾರಿ (65) ಅವರು ಡಿ. 17ರ ಬೆಳಗ್ಗೆ ಹಲ್ಲುಜ್ಜುತ್ತಾ ಗದ್ದೆಯ ಕಡೆ ಹೋದವರು ಗದ್ದೆಯಲ್ಲಿ ಅಂಗಾತ ಬಿದ್ದು ಮೃತಪಟ್ಟಿದ್ದಾರೆ. ರಾಮ ಪೂಜಾರಿ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದು, ಸಹೋದರ ಕೃಷ್ಣ ಪೂಜಾರಿ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಪರೀತ ಮದ್ಯಪಾನ: ವ್ಯಕ್ತಿ ಸಾವು
ಉಡುಪಿ: ರೈಲ್ವೇ ಟ್ರ್ಯಾಕ್ ಬಳಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಮಾರ್ಪಳ್ಳಿಯ ವೆಂಕಟೇಶ ಪೂಜಾರಿ (55) ಮೃತಪಟ್ಟವರು. ವಿಪರೀತ ಕುಡಿತದ ಚಟ ಹೊಂದಿದ್ದ ಅವರು ಮದ್ಯಪಾನ ಮಾಡಿ ಕೆಲವೊಮ್ಮೆ 3-4 ದಿನ ಮನೆಗೆ ಬರುತ್ತಿರಲಿಲ್ಲ.
ಡಿ. 12ರಂದು ಮನೆಯಿಂದ ಹೋದವರು ವಾಪಸು ಮನೆಗೆ ಬಂದಿರಲಿಲ್ಲ. ಡಿ. 16ರಂದು ಪರಿಚಯದವರೊಬ್ಬರು ಮನೆಗೆ ಕರೆ ಮಾಡಿ ಮಾರ್ಪಳ್ಳಿಯ ರೈಲ್ವೇ ಟ್ರ್ಯಾಕ್ ಬಳಿ ವೆಂಕಟೇಶ ಪೂಜಾರಿಯವರ ಮೃತದೇಹ ಇರುವುದಾಗಿ ತಿಳಿಸಿದ್ದರು. ಕುಡಿತದ ಚಟ ಅಥವಾ ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ