“ಉಡುಪಿ ಹೆಲ್ಪ್ ಡಾಟ್ ಕಾಮ್’ ಆ್ಯಪ್
ಮಳೆಗಾಲದ ಅವಘಡಗಳ ವೇಳೆ ನೆರವಿನ ಹಸ್ತ
Team Udayavani, May 27, 2019, 11:26 AM IST
ಉಡುಪಿ: ಮಳೆಗಾಲದ ಸಂದರ್ಭ ಸಂಭವಿಸುವ ಅವಘಡಗಳ ತುರ್ತು ಸ್ಪಂದನೆಗಾಗಿ “ಉಡುಪಿ ಹೆಲ್ಪ್ ಡಾಟ್ ಕಾಮ್’ (Udupihelp.com) ಆ್ಯಪ್ ಮೂಲಕ ಸಹಾಯ ಮಾಡಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.
ನಗರಸಭೆಯ 35 ವಾರ್ಡ್ಗಳಿಗೆ ಮಳೆಗಾಲದಲ್ಲಿ ತುರ್ತು ಸ್ಪಂದನೆಗೆ ಅನುಕೂಲವಾಗುವಂತೆ ಆ್ಯಪ್ ಸಿದ್ಧ ಪಡಿಸಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆ್ಯಪ್ ಪರಿಶೀಲನೆ ನಡೆಸಲಾಗಿದೆ. ಮುಂದಿನ 15 ದಿನದಲ್ಲಿ ನಗರಸಭೆಯ ಜನರು ಗೂಗಲ್ ಪ್ಲೇ ಸ್ಟೋರಿನಿಂದ Udupihelp.com ಆ್ಯಪ್ ಡೌನ್ಲೋಡ್ ಮಾಡಬಹುದಾಗಿದೆ.
ಕಾರ್ಯ ವೈಖರಿ
ಮರ ಬಿದ್ದು ಮನೆ ಹಾನಿ, ವಿದ್ಯುತ್ ಕಂಬ ಹಾನಿ ಸೇರಿದಂತೆ ವಿವಿಧ ದೂರಗಳನ್ನು ಈ ಆ್ಯಪ್ ಮುಖಾಂತರ ದಾಖಲು ಮಾಡ ಬೇಕು. ತಮ್ಮ ಮೊಬೈಲ್ ಜಿಪಿಆರ್ಎಸ್ ಮೂಲಕ ಸ್ಥಳದ ಲೈವ್ ಲೊಕೇಶನ್ ಹಾಗೂ ಫೋಟೋವನ್ನು ಆ್ಯಪ್ನಲ್ಲಿ ಅಪ್ಲೋಡ್ ಮಾಡಿ ವಿವರ ನೀಡಬೇಕು.
6 ಗಂಟೆಯಲ್ಲಿ ಪರಿಹಾರ
ದೂರು ದಾಖಲಿಸಿದ ಆರು ಗಂಟೆಯ ಒಳಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದನೆ ನೀಡಲಿದ್ದಾರೆ. ಅಧಿಕಾರಿ ಗಳು ಕೆಲಸವಾದ ತತ್ಕ್ಷಣ ಸ್ಥಳದ ಫೋಟೋ ಆ್ಯಪ್ನಲ್ಲಿ ಆಪ್ಲೋಡ್ ಮಾಡುವುದು ಕಡ್ಡಾಯವಾಗಿದೆ. ಇದರಿಂದಾಗಿ ಸಂಬಂಧಪಟ್ಟ ಅಧಿಕಾರಿ ಗಳು ಇನ್ನಷ್ಟು ಜವಾಬ್ದಾರಿಯುತವಾಗಿ ಕೆಲಸ ಮಾಡಲಿದ್ದಾರೆ.
ಪ್ರಾಯೋಗಿಕ ಪರೀಕ್ಷೆ
ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ Udupihelp.com ಆ್ಯಪ್ ಬಳಸಿಕೊಂಡು ದೂರು ಇತ್ಯರ್ಥ ಮಾಡುವ ಪ್ರಯತ್ನ ಕೈಗೊಂಡಿದೆ. ನಗರಸಭೆ ವ್ಯಾಪ್ತಿಯಲ್ಲಿ ಯಶಸ್ವಿಯಾದರೆ ಆ್ಯಪ್ನ್ನು ಮುಂದಿನ ದಿನದಲ್ಲಿ ಜಿಲ್ಲೆಗೆ ವಿಸ್ತರಿಸುವ ಗುರಿಯಿದೆ.
ಹಳೆ ಪದ್ಧತಿಯಿಂದ ಮುಕ್ತಿ
ನಗರಸಭೆ ವ್ಯಾಪಿಯ ಜನರು ಮಳೆಗಾಲದ ಹಾನಿ ದೂರುಗಳನ್ನು ದಾಖಲಿಸಲು ತಾಲೂಕು ಕಚೇರಿಯನ್ನು ಅವಲಂಬಿಸಬೇಕಾಗಿತ್ತು. ಕಚೇರಿಯ ದೂರವಾಣಿ ಸಂಖ್ಯೆ ದುರಸ್ತಿಯಾಗದೆ ದೂರು ದಾಖಲು ಮಾಡಲು ವಾರಗಟ್ಟಲೆ ಜನರು ಕಾದಿರುವುದೂ ಇದೆ.
ಎನ್ಡಿಆರ್ಎಫ್ ತಂಡ
ಪ್ರತಿವರ್ಷ ಮಳೆಗಾಲದಲ್ಲಿ ತುರ್ತು ಸೇವೆಗಾಗಿ ಎನ್ಡಿಆರ್ಎಫ್ ತಂಡ ಗುಂಟೂರಿನಿಂದ ಉಡುಪಿಗೆ ಧಾವಿಸಬೇಕಾಗಿತ್ತು. ಆದರೆ ಈ ಬಾರಿ ಉಡುಪಿ ಹಾಗೂ ದ.ಕ. ಜಿಲ್ಲೆಗೆ ಅನುಕೂಲವಾಗುವಂತೆ ಎನ್ಡಿಆರ್ಎಫ್ ತಂಡ ಸುರತ್ಕಲ್ಗೆ ಆಗಮಿಸಲಿದ್ದು ಈಗಾಗಲೇ ಮಂಗಳೂರಿಗೆ ಆಗಮಿಸಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಜಿಲ್ಲೆಗೆ ವಿಸ್ತರಿಸುವ ಗುರಿ
ಉಡುಪಿ ಹೆಲ್ಫ್ ಡಾಟ್ ಕಾಂ (Udupihelp.com) ಆ್ಯಪ್ ಮೂಲಕ ಪ್ರಾಯೋಗಿಕವಾಗಿ ನಗರಸಭೆ ವ್ಯಾಪ್ತಿಯಲ್ಲಿ ಆಳವಡಿಸಲಾಗುತ್ತದೆ. ಮುಂದಿನ ದಿನದಲ್ಲಿ ಜಿಲ್ಲೆಗೆ ವಿಸ್ತರಿಸುವ ಗುರಿಯಿದೆ.
ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿ.
ದೂರು ದಾಖಲಾದ ತತ್ಕ್ಷಣ ಸ್ಪಂದನೆ
ಮಳೆಗಾಲದ ದೂರುಗಳಿಗೆ ತುರ್ತು ಸ್ಪಂದನೆ ನೀಡಲು ಜಿಲ್ಲಾಡಳಿತದಿಂದ ಆ್ಯಪ್ ಜಾರಿಗೆ ತರುತ್ತಿರುವುದು ಶ್ಲಾಘನೀಯ. ದೂರು ದಾಖಲಾದ ತತ್ಕ್ಷಣ ಸ್ಪಂದಿಸುವಂತೆ ನೋಡಿಕೊಳ್ಳಬೇಕಾಗಿದೆ.
ರಾಘವೇಂದ್ರ ಭಟ್, ಕಡಿಯಾಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ