ಉದ್ಯಾವರ: ಭರದಿಂದ ಸಾಗುತ್ತಿದೆ ಜಲಮೂಲಗಳ ನಿರ್ವಹಣೆ ಕಾರ್ಯ
Team Udayavani, May 16, 2019, 6:10 AM IST
ಕಟಪಾಡಿ: ಉದ್ಯಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ಉದ್ಯಾವರ ಗ್ರಾ.ಪಂ. ನೀರಿನ ಮಟ್ಟ ಕಡಿಮೆಗೊಂಡಿರುವ ಬಾವಿಗಳನ್ನು ನಿರ್ವಹಣೆ ಮಾಡುವ ಕೆಲಸ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಗುಡ್ಡೆ ಅಂಗಡಿ ಎಸ್.ಸಿ., ಕಾಲನಿಯ ವಾಟರ್ ಟ್ಯಾಂಕ್ ಬಳಿಯ ತೆರೆದ ಬಾವಿ, ಗುಡ್ಡೆಯಂಗಡಿ ಅಂಗನವಾಡಿ ಬಳಿಯ ತೆರೆದ ಬಾವಿ, ಕಾಲನಿಯ ಕೊನೆಯಲ್ಲಿ ಮಾಧವ ಮನೆ ಬಳಿಯಲ್ಲಿ ಇರುವ ತೆರೆದ ಬಾವಿ ಮತ್ತು ಪಿತ್ರೋಡಿಯ ಮುಡ್ಡಲಗುಡ್ಡೆ ಎಂಬಲ್ಲಿರುವ ಎರಡು ಸರಕಾರಿ ತೆರೆದ ಬಾವಿಗಳ ಹೂಳೆತ್ತುವುದರ ಜತೆಗೆ ನಿರ್ವಹಣೆ ನಡೆಸಲಾಗುತ್ತಿದೆ. ಆ ಮೂಲಕ ಮುಂಬರುವ ಮಳೆಗಾಲಕ್ಕೂ ಮುನ್ನ ತೆರೆದ ಬಾವಿಗಳ ಕುಡಿಯುವ ನೀರಿನ ಶುದ್ಧತೆ ಜತೆಗೆ ಕುಡಿಯುವ ನೀರಿನ ಪ್ರಮಾಣದ ಹೆಚ್ಚಳಕ್ಕೆ ಈ ಕಾಮಗಾರಿ ಸಹಕಾರಿಯಾಗಬಲ್ಲುದು.
ಉದ್ಯಾವರ ಗ್ರಾ. ಪಂ. ವ್ಯಾಪ್ತಿಯಲ್ಲಿ ಇದೀಗ 5 ಬಾವಿಗಳ ನಿರ್ವಹಣೆಗಾಗಿ ಸುಮಾರು 60 ಸಾವಿರಕ್ಕೂ ಮಿಕ್ಕಿ ಅನುದಾನ ಬಳಸಿಕೊಳ್ಳಲಾಗುತ್ತಿದ್ದು, ಗುಡ್ಡೆಯಂಗಡಿಯ ಬಾವಿಯೊಂದರಲ್ಲಿ ಬಂಡೆಯಿಂದ ಅದರೊಳಗಿನ ಲಭ್ಯ ಅಲ್ಪ ಸ್ಥಳದಲ್ಲಿ ಕಾಂಕ್ರೀಟ್ ರಿಂಗ್ ಕಟ್ಟುವ ಮೂಲಕ ನೀರಿನ ಸೆಲೆ ಹೆಚ್ಚಳಕ್ಕೆ ಕಾಮಗಾರಿ ಮುಂದುವರಿಸಲಾಗುತ್ತಿದೆ.
ಗ್ರಾ.ಪಂ. ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಜ್ ಇಸ್ಮಾಯಿಲ್ ಪಳ್ಳಿ, ಪಿ.ಡಿ.ಒ. ರಮಾನಂದ ಪುರಾಣಿಕ್, ಪಂಚಾಯತ್ ಸಿಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಳೆಗಾಲದ ಆರಂಭಕ್ಕೂ ಮುನ್ನ ಇಂತಹ ನೀರಿನ ಸೆಲೆ ಸ್ವತ್ಛಗೊಳಿಸುವ ಮೂಲಕ ಜಲಮೂಲಗಳ ನಿರ್ವಹಣೆಯಿಂದ ಮುಂಬರುವ ಸಾಲಿನಲ್ಲಿ ಹೆಚ್ಚಿನ ಪ್ರಮಾಣದ ಕುಡಿಯುವ ನೀರಿನ ಲಭ್ಯತೆಗೆ ಇಂತಹ ಕಾಮಗಾರಿ ಸಹಕಾರಿಯಾಗಿದೆ.
ಐದು ಬಾವಿಯಲ್ಲಿ ಹೊಳೆತ್ತಲಾಗಿದೆ
ಜಲಮೂಲಗಳನ್ನು ಸಮರ್ಪಕವಾಗಿ ಇರಿಸುವಲ್ಲಿ ಇಂತಹ ಕಾಮಗಾರಿ ಅತ್ಯವಶ್ಯಕ. ಕುಡಿಯುವ ನೀರಿನ ಲಭ್ಯತೆಯ ಹೆಚ್ಚಳಕ್ಕಾಗಿ ಐದು ಬಾವಿಗಳ ಹೂಳೆತ್ತುವ ಕೆಲಸ ಕಾರ್ಯವನ್ನು ನಡೆಸಲಾಗುತ್ತಿದೆ.
-ರಮಾನಂದ ಪುರಾಣಿಕ್, ಪಿ.ಡಿ.ಒ. ಉದ್ಯಾವರ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ