ಅವೈಜ್ಞಾನಿಕ ಒಳಚರಂಡಿ ಕಾಮಗಾರಿ: ಕ್ರಮ ಕೈಗೊಳ್ಳಲು ಶಾಸಕರಿಂದ ಸೂಚನೆ
Team Udayavani, Jun 30, 2018, 7:40 AM IST
ಉಡುಪಿ: ನಿಟ್ಟೂರು ವಾರ್ಡಿನ ನಿಟ್ಟೂರು – ಬನ್ನಂಜೆ ಸಂಪರ್ಕಿಸುವ ಮಠದಬೆಟ್ಟು ಗರೋಡಿ ರಸ್ತೆಯ ಅವೈಜ್ಞಾನಿಕ ಒಳಚರಂಡಿ ಕಾಮಗಾರಿಯಿಂದ ಚರಂಡಿ ನೀರು ಹೊರ ಬಂದು ಪರಿಸರದ ನಿವಾಸಿಗಳಿಗೆ ತೊಂದರೆಯುಂಟಾಗಿದ್ದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ. ರಘುಪತಿ ಭಟ್ ನಗರಸಭೆ ಅಧಿಕಾರಿಗಳು, ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಯಿಸಿ ಸ್ಥಳ ಪರಿಶೀಲನೆ ಮಾಡಿ, ತತ್ಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ನಗರಸಭೆ ಸದಸ್ಯ ಹರೀಶ್ರಾಮ್ ಬನ್ನಂಜೆ, ರಶ್ಮಿತಾ ಬಾಲಕೃಷ್ಣ, ನಗರ ಬಿಜೆಪಿ ಉಪಾಧ್ಯಕ್ಷ ಟಿ.ಜಿ. ಹೆಗಡೆ, ಬಾಲಕೃಷ್ಣ ಶೆಟ್ಟಿ, ವಾರ್ಡ್ ಸಮಿತಿ ಅಧ್ಯಕ್ಷ ಸಂತೋಷ್ ಜತ್ತನ್, ಪ್ರಮುಖರಾದ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ದಾವೂದ್ ಅಬೂಬಕರ್ ಮೊದಲಾದವರು ಉಪಸ್ಥಿತರಿದ್ದರು.