ಕೋಡಿ ಅಳಿವೆ ರಸ್ತೆ ಕಾಮಗಾರಿ ತ್ವರಿತಕ್ಕೆ ಆಗ್ರಹ
ಕಾಮಗಾರಿ ಗುಣಮಟ್ಟ, ವಿಳಂಬಗತಿಯ ಬಗ್ಗೆ ಅಸಮಾಧಾನ
Team Udayavani, Mar 6, 2020, 5:39 AM IST
ಕುಂದಾಪುರ: ಕೋಡಿಯಲ್ಲಿ ನಡೆಯುತ್ತಿರುವ ಡಾಮರು ಕಾಮಗಾರಿ ಕುರಿತು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಮಗಾರಿಯ ಗುಣಮಟ್ಟದ ಕಡೆಗೆ ಒಂದು ಕಡೆಯಾದರೆ ವಿಳಂಬಗತಿಯ ಕುರಿತು ಇನ್ನೊಂದೆಡೆ ಅಸಮಾಧಾನವಿದೆ.
ಡಾಮರು
ಕೋಡಿಯಲ್ಲಿ ಲೈಟ್ಹೌಸ್ ಪಕ್ಕದಿಂದ ಹಾದು ಸೀವಾಕ್ ಸಮೀಪದವರೆಗೂ 1.5 ಕೋ.ರೂ. ವೆಚ್ಚದಲ್ಲಿ ಡಾಮರುಗೊಳ್ಳುತ್ತಿದೆ. ಈ ರಸ್ತೆ ತೀರಾ ಹದಗೆಟ್ಟಿದ್ದು ಸ್ಥಳೀಯರ ಬೇಡಿಕೆ ಮೇರೆಗೆ ಶಾಸಕರ ಸೂಚನೆಯಂತೆ ಪುರಸಭೆ ಈ ಕಾಮಗಾರಿ ನಡೆಸುತ್ತಿದೆ.
ಅಭಿವೃದ್ಧಿ
ಅತಿ ಉದ್ದ ವ್ಯಾಪ್ತಿ ಹೊಂದಿದ ಬೀಚ್ ಎಂಬ ಹೆಗ್ಗಳಿಕೆಗೆ ಕೋಡಿ ಬೀಚ್ ಪಾತ್ರವಾಗಲಿದೆ. ಏಕೆಂದರೆ ಸರಿಸುಮಾರು 3.5 ಕಿ.ಮೀ. ದೂರದಲ್ಲಿ ಬೀಚ್ ವ್ಯಾಪಿಸಿಕೊಂಡಿದೆ.
ಆದ್ದರಿಂದ ಯಾವುದೇ ಪ್ರದೇಶದಲ್ಲೂ ಸಮುದ್ರ ವಿಹಾರ ನಡೆಸಬಹುದಾಗಿದೆ. ಇದರೊಂದಿಗೆ ಇಲ್ಲಿ ಬ್ರೇಕ್ ವಾಟರ್ ಕಾಮಗಾರಿ ನಡೆದಂತೆಯೇ ಇಲ್ಲಿಗೆ ಸಂಜೆ ವೇಳೆಗೆ ಸೂರ್ಯಾಸ್ತ ವೀಕ್ಷಣೆಗೆ ಜನ ಬರಲಾರಂಭಿಸಿದ್ದಾರೆ. ವಾರಾಂತ್ಯವೂ ಇಲ್ಲಿ ಜನಸಂದಣಿ ಹೆಚ್ಚಿದೆ. ಸಂಸಾರ ಸಹಿತರಾಗಿ, ಮಕ್ಕಳು ಸ್ನೇಹಿತರ ಜತೆಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ನಿಧಾನ
ಕಾಮಗಾರಿಯ ವೇಗದ ಕುರಿತು ಇಲ್ಲಿನ ಜನರಲ್ಲಿ ಅಸಮಾಧಾನವಿದೆ. ಒಂದು ತಿಂಗಳಿನಿಂದ ಜಲ್ಲಿ ಹಾಕಿ ಹಾಗೆಯೇ ಬಿಡಲಾಗಿದೆ. ವಾಹನಗಳ ಓಡಾಟಕ್ಕೂ ಕಷ್ಟ , ಜತೆಗೆ ಈ ಪ್ರದೇಶವೆಲ್ಲಾ ಧೂಳುಮಯ. ಆಸುಪಾಸಿನ ಮನೆಯವರಿಗೆ ಕಷ್ಟವಾಗುತ್ತಿದೆ ಎಂದು ಊರವರುತಿಳಿಸಿದ್ದಾರೆ. ಆದ್ದರಿಂದ ತುರ್ತಾಗಿ ಕಾಮಗಾರಿ ಮುಗಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಆಗಿರುವ ಡಾಮರು ಕಾಮಗಾರಿಯ ಗುಣ ಮಟ್ಟದ ಕುರಿತಾಗಿಯೂ ಅಸಮಾಧಾನ ಹೊರಹಾಕುವವರು ಇದ್ದಾರೆ. ಈಗಾಗಲೇ ಅರ್ಧದಷ್ಟು ಕಾಮಗಾರಿ ಪೂರ್ಣವಾಗಿದ್ದು ಇನ್ನುಳಿಕೆ ಪ್ರದೇಶಕ್ಕೆ ಜಲ್ಲಿ ಹಾಕಲಾಗಿದೆ. ಲೈಟ್ಹೌಸ್ ಬದಿ ಕಾಮಗಾರಿ ಪ್ರಗತಿಯಲ್ಲಿದೆ. ಈಗ ವಾಹನಗಳ ಓಡಾಟ ಕಷ್ಟದಲ್ಲಿ ನಡೆಯುತ್ತಿದೆ. ಕಾಮಗಾರಿ ಪೂರ್ಣವಾದ ಬಳಿಕ ಸುವ್ಯವಸ್ಥಿತ ರಸ್ತೆ ಉಪಯೋಗಕ್ಕೆ ದೊರೆಯಲಿದೆ.
ಹೂತುಹೋಗುವ ಆತಂಕ
ಲೈಟ್ಹೌಸ್ ಎದುರು ವಾಹನ ನಿಲ್ಲಿಸಲು ಸ್ಥಳಾವಕಾಶ ಒದಗಿಸಬೇಕೆಂದು ಬೇಡಿಕೆ ಯಿದೆ. ಇಲ್ಲಿ ಈಗಾಗಲೇ ಅನೇಕ ಪ್ರವಾಸಿ ವಾಹನಗಳು ಮಣ್ಣು, ಮರಳಿನಲ್ಲಿ ಹೂತು ಹೋಗುತ್ತಿದೆ. ಆದ್ದ ರಿಂದ ಇದಕ್ಕೊಂದು ಸುಸಜ್ಜಿತ ಪಾರ್ಕಿಂಗ್ಗೆ ಅನುವು ಮಾಡಿ ಕೊಡ ಬೇಕೆಂಬ ಬೇಡಿಕೆ ಇದೆ.
ಸುದಿನ ವರದಿ
ಉದಯವಾಣಿ ಸುದಿನ ಇಲ್ಲಿ ಕಾಮಗಾರಿಗೆ ಬೇಡಿಕೆ ಹಾಗೂ ಅನುದಾನ ಮಂಜೂರಾದ ಕುರಿತು ವರದಿ ಪ್ರಕಟಿಸಿತ್ತು. ಇದೀಗ ಕಾಮಗಾರಿ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ಜನೋಪಯೋಗಕ್ಕೆ ದೊರೆಯಲಿದೆ.
ಕೋಡಿ ಬೀಚ್ಗೆ, ಸೀವಾಕ್ ಕಡೆಗೆ,
ಲೈಟ್ಹೌಸ್ ಕಡೆಗೆ ಬರುವ ರಸ್ತೆ ಹಾಳಾಗಿತ್ತು. ಅಳಿವೆ ಕಾಮಗಾರಿಯಿಂದ ಹಾಳಾಗಿದೆ ಎನ್ನಲಾಗುತ್ತಿದೆ. ಆದರೆ ಎರಡು ಮೂರು ವರ್ಷಗಳಿಂದ ಇದೇ ಸ್ಥಿತಿಯಲ್ಲಿ ಇದ್ದಂತಿದೆ. ಈ ಹಿನ್ನೆಲೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಪುರಸಭೆಗೆ ಸೂಚನೆ ನೀಡಿ ದುರಸ್ತಿಗೆ ಹೇಳಿದ್ದರು. ಅದರಂತೆ ಕುಡಿಯುವ ನೀರಿನ ಕಾಮಗಾರಿಯಲ್ಲಿ ಹಾಳಾದ ರಸ್ತೆ ದುರಸ್ತಿಗೆ ಇರುವ ಅನುದಾನ ಬಳಸಿ ರಸ್ತೆ ಸರಿಪಡಿಸಲು ಪುರಸಭೆ ಆಡಳಿತ ಮುಂದಾಗಿದ್ದು ಕಾಮಗಾರಿ ನಡೆಯುತ್ತಿದೆ.
ಶೀಘ್ರ ಮುಕ್ತಾಯ
ಅನುಮತಿ ದೊರೆಯುವುದು ವಿಳಂಬವಾದ ಕಾರಣ ಕಾಮಗಾರಿ ನಿಧಾನವಾಗಿದೆ. ಈಗ ಕಾಮಗಾರಿಗೆ ಅನುಮತಿ ದೊರೆತಿದ್ದು ಶೀಘ್ರದಲ್ಲಿ ಮುಗಿಸಲಾಗುತ್ತಿದೆ. ಕುಡಿಯುವ ನೀರಿನ ಕಾಮಗಾರಿಯ ಅನುದಾನ ಬಳಸಿಕೊಂಡು ಕಾಮಗಾರಿ ಮಾಡಲಾಗುತ್ತಿದೆ.
-ಗೋಪಾಲಕೃಷ್ಣ ಶೆಟ್ಟಿ,
ಮುಖ್ಯಾಧಿಕಾರಿ, ಪುರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
MUST WATCH
ಹೊಸ ಸೇರ್ಪಡೆ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು