ಬೇಡಿಕೆಯಿದ್ದರೂ ಪೂರೈಕೆಯಾಗದ ಎಳನೀರು


Team Udayavani, Apr 5, 2019, 6:30 AM IST

elaneeru

ಕುಂದಾಪುರ: ಬೇಸಗೆಯ ಧಗೆ ಹೆಚ್ಚುತ್ತಿರುವುದರಿಂದ ಬಹುತೇಕ ಮಂದಿ ಈಗ ಎಳನೀರಿಗೆ (ಬೊಂಡ) ಮೊರೆ ಹೋಗುತ್ತಿದ್ದು, ಎಲ್ಲೆಡೆ ವ್ಯಾಪಾರದ ಭರಾಟೆ ಭರ್ಜರಿಯಾಗಿಯೇ ನಡೆಯುತ್ತಿದೆ. ಆದರೆ ಗ್ರಾಮೀಣ ಪ್ರದೇಶ ಸಹಿತ ನಗರ ಭಾಗಗಳಲ್ಲಿ ಬೇಡಿಕೆಯಿದ್ದರೂ, ಅಗತ್ಯ ವಿರುವಷ್ಟು ಎಳನೀರು ಪೂರೈಕೆ ಯಾಗುತ್ತಿಲ್ಲ.

ಒಂದೆಡೆ ರಾಜಕೀಯ ಪಕ್ಷಗಳ ಚುನಾವಣ ಪ್ರಚಾರ, ಸಭೆ, ಸಮಾ ವೇಶ, ರ್ಯಾಲಿಗಳಲ್ಲಿಯೂ ಎಳನೀರಿಗೆ ಭಾರೀ ಬೇಡಿಕೆಯಿದೆ. ಮತ್ತೂಂದೆಡೆ ಬಿಸಿಲಿನ ಝಳದಿಂದ ಬಸವಳಿದ ಜನ ತಂಪಾಗಿಸಲು ಇದರ ಮೊರೆ ಹೋಗುತ್ತಿದ್ದಾರೆ.

ನಗರ ಭಾಗದಲ್ಲಿ ದಿನಕ್ಕೆ ಒಬ್ಬ ವ್ಯಾಪಾರಿಗೆ ಸುಮಾರು 150 – 200 ಎಳನೀರು ಮಾರಾಟವಾದರೆ, ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 50 – 60ರಷ್ಟು ಎಳನೀರು ಮಾರಾಟ ವಾಗುತ್ತಿದೆ. ಕೆಲವೆಡೆ ಈ ಪ್ರಮಾಣ ಹೆಚ್ಚು –
ಕಡಿಮೆಯಿರುತ್ತದೆ.

ಪೂರೈಕೆಯೇ ಕಡಿಮೆ
ಎಳನೀರಿಗೆ ಈಗ ಉತ್ತಮ ಬೇಡಿಕೆ ಯಿದೆ. ಆದರೆ ಕುಂದಾಪುರದ ಬೇರೆ ಬೇರೆ ಕಡೆಗಳಿಗೆ ಶಿವಮೊಗ್ಗ, ಶಿಕಾರಿಪುರ, ಹಾಸನ, ಚಿಕ್ಕಮಗಳೂರಿನ ಬೀರೂರು ಕಡೆಯಿಂದ ಎಳನೀರು ಪೂರೈಕೆ ಮಾಡಲಾಗುತ್ತದೆ. ಅವರು ವಾರಕ್ಕೊಮ್ಮೆ ಅಥವಾ ಮೂರು ದಿನಗಳಿಗೊಮ್ಮೆ ಬಂದು ಎಳನೀರು ಪೂರೈಸಿ ಹೋಗುತ್ತಾರೆ.

ಆದರೆ ಒಂದೇ ದಿನದಲ್ಲಿ ಮುಗಿಯುವುದು ಕೂಡ ಇದೆ. ಕೆಲವೊಮ್ಮೆ ಕಡಿಮೆ ಖಾಲಿಯಾದರೂ ಹೆಚ್ಚಿನ ದಿನಗಳಲ್ಲಿ ಎಳನೀರಿಗೆ ಬೇಡಿಕೆ ಇದ್ದೇ ಇದೆ. ಆದರೆ ನಮಗೆ ಅಗತ್ಯದಷ್ಟು ಎಳನೀರಿನ ಪೂರೈಕೆಯೇ ಆಗುತ್ತಿಲ್ಲ ಎನ್ನುವುದು ಎಳನೀರು ವ್ಯಾಪಾರಿಯೊಬ್ಬರ ಅಭಿಪ್ರಾಯ.

ಕಾರಣವೇನು?
ಎಲ್ಲ ಕಡೆಗಳಿಂದ ಬೊಂಡಕ್ಕೆ ಬೇಡಿಕೆ ಯಿದ್ದರೂ ಈಗ ಬೇಡಿಕೆಯಷ್ಟು ಸಿಗದಿರು ವುದಕ್ಕೆ ಕಾರಣ ಅನೇಕ. ಮುಖ್ಯವಾಗಿ ಈಗ ನೀರಿನ ಸಮಸ್ಯೆಯಿಂದಾಗಿ ಇಳುವರಿ ಪ್ರಮಾಣ ಕಡಿಮೆ ಯಾಗುತ್ತಿದೆ. ತೆಂಗಿನ ಮರಕ್ಕೆ ಬೇರೆ – ಬೇರೆ ರೋಗಗಳಿಂದಾಗಿ ಅನೇಕ ಕಡೆಗಳಲ್ಲಿ ಮರಗಳು ಸತ್ತು ಹೋಗುತ್ತಿವೆೆ. ಇದಲ್ಲದೆ ಮಂಗಗಳ ಹಾವಳಿಯಿಂದಾಗಿ ಸಿಗುತ್ತಿರುವ ಅಲ್ಪ ಇಳುವರಿಯೂ ಬೆಳೆಗಾರರ ಕೈಗೆ ಸಿಗ ದಂತ್ತಾಗುತ್ತಿದೆ.

ಪೂರೈಕೆ ಸಾಕಾಗುವುದಿಲ್ಲ
ಆಜ್ರಿಯಲ್ಲಿ ದಿನಕ್ಕೆ ಸುಮಾರು 50 – 60 ಎಳನೀರು ಮಾರಾಟವಾಗುತ್ತದೆ. ಕೆಲವೊಮ್ಮೆ ಇದು ಹೆಚ್ಚು ಕಡಿಮೆಯೂ ಆಗಬಹುದು. ಆದರೆ ಹೆಚ್ಚಿನ ದಿನಗಳಲ್ಲಿ ಉತ್ತಮ ಮಾರಾಟವಾಗುತ್ತದೆ. ಆದರೆ ಸರಿಯಾಗಿ ಪೂರೈಕೆಯಾಗ‌ುತ್ತಿಲ್ಲ. 15 ದಿನಗಳಿಗೊಮ್ಮೆ ಶಿವಮೊಗ್ಗದಿಂದ ಬರುತ್ತಾರೆ. ಅವರು ಪೂರೈಸುವ ಎಳನೀರು ಇಲ್ಲಿಗೆ ಸಾಕಾಗುವುದಿಲ್ಲ.
-ಚಂದ್ರಶೇಖರ ಶೆಟ್ಟಿ ಆಜ್ರಿ, ಎಳನೀರು ವ್ಯಾಪಾರಸ್ಥರು

ಮರ ಏರುವವರೇ ಸಿಗುತ್ತಿಲ್ಲ
ಊರಲ್ಲಿ ಈಗ ಎಳನೀರು ಪ್ರಮಾಣ ಕಡಿಮೆಯಿದ್ದರೂ ಮರಗಳಲ್ಲಿ ಇರುವ ಎಳನೀರು ಕೀಳಲು ಜನ ಸಿಗುತ್ತಿಲ್ಲ. ಸಿಕ್ಕಿದರೂ ಅವರಿಗೆ ಒಂದು ಮರಕ್ಕೆ ಏರಲು 50 ರೂ. ನೀಡಬೇಕು. ಅದರಲ್ಲಿ ಒಳ್ಳೆಯ ಎಳನೀರು ಸಿಕ್ಕಿದರೆ ಸರಿ, ಇಲ್ಲದಿದ್ದರೆ ಅಷ್ಟು ಹಣ ತೆತ್ತು, ಮರ ಹತ್ತಿಸುವುದು ದುಬಾರಿ. ಹೊರಗಿನ ಎಳನೀರಿಗಿಂತ ಊರಿನ ಎಳನೀರಿಗೆ ಉತ್ತಮ ಬೇಡಿಕೆಯಿದ್ದರೂ ಅದನ್ನು ಕೀಳಲು ಜನ ಸಿಗುತ್ತಿಲ್ಲ.
-ಧರ್ಮರಾಯ ಶೆಣೈ ಆರ್ಗೋಡು, ಕಮಲಶಿಲೆ, ಕೃಷಿಕರು

ಟಾಪ್ ನ್ಯೂಸ್

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.