ಯಾಂತ್ರಿಕ ಬದುಕಿನ ತಲ್ಲಣ ರೇಖಾಚಿತ್ರಗಳಲ್ಲಿ ಅನಾವರಣ
ಇಂಪ್ರಶನ್-2019: ಪ್ರದರ್ಶನ
Team Udayavani, Sep 20, 2019, 5:01 AM IST
ಉಡುಪಿ: ಯಂತ್ರಾಧಾರಿತ ಬದುಕು ಮನುಷ್ಯ ಸಂಬಂಧ ದೂರೀಕರಿಸಿ, ಪ್ರಾಕೃತಿಕ ಜೀವನದ ಬದಲು ಯಂತ್ರ ಮಾನವನನ್ನು ಸೃಷ್ಟಿಸುವುದರಿಂದ ಆಗುವ ಅವಾಂತರ, ತಲ್ಲಣಗಳೇನು ಎಂಬುದನ್ನು ಉಡುಪಿಯ ಜಂಗಮ ಮಠದ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯ ವಿದ್ಯಾರ್ಥಿಗಳ ರೇಖಾಚಿತ್ರಗಳು ಅನಾವರಣ ಗೊಳಿಸುತ್ತಿವೆ.
ಬ್ರಹ್ಮಾವರ ಹಿರಿಯ ಸರಕಾರಿ ಚಿತ್ರಕಲಾ ಶಿಕ್ಷಕ ದಿನಮಣಿ ಶಾಸ್ತ್ರಿ ಉದ್ಘಾಟಿಸಿದರು. ವಿದ್ಯಾಲಯದ 18 ಮಂದಿ ಕಲಾವಿದರು ರಚಿಸಿರುವ 32 ಕಪ್ಪು ಬಿಳುಪು ಕಲಾಕೃತಿಗಳ ಪ್ರದರ್ಶನ “ಇಂಪ್ರಷನ್-2019′ ಚಿತ್ರಕಲಾ ಮಂದಿರದ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಗುರುವಾರ ಆರಂಭಗೊಂಡಿತು. ಪ್ರದರ್ಶನ ಸೆ.22ರ ವರೆಗೆ ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ಇದೆ.
ಮರಗಳ ಜಾಗ ಆಕ್ರಮಿಸಿದ ಕಟ್ಟಡಗಳು, ಶಿಲ್ಪಕೃತಿಗಳನ್ನು ಕೆಡವಿ ನಿರ್ಮಾಣಗೊಂಡ ನಗರ, ಅನ್ಯಗ್ರಹ ಜೀವಿಗಳೆನಿಸಿದ ಏಲಿಯನ್ಸ್ಗಳ ಕುರಿತಾದ ಕಾಲ್ಪನಿಕ ಲೋಕ, ಭ್ರೂಣದಲ್ಲಿರುವ ಮಗು ಹೊರ ಜಗತ್ತಿನಿಂದ ಏನು ಕಲಿಯಬಹುದೆಂಬ ಆತಂಕ ಇತ್ಯಾದಿಗಳನ್ನು ವಿದ್ಯಾರ್ಥಿಗಳು ತಮ್ಮ “ಪೆನ್ ಆ್ಯಂಡ್ ಇಂಕ್ ಆರ್ಟ್’ ಮೂಲಕ ಸಾದರಪಡಿಸಿದ್ದಾರೆ.
ವಿದ್ಯಾರ್ಥಿಗಳಾದ ಪ್ರದೀಪ್ ಕುಮಾರ್ ತೇಜರಾಜು ಸಿ.ಎಂ., ವಿದ್ಯಾರ್ಥಿ ಸಹನಾ ಆರ್.ಕೆ., ಭರತ್ ಹಾವಂಜೆ ವಿವಿಧ ಚಿತ್ರಗಳನ್ನು ಪ್ರಸ್ತುತಪಡಿಸಿದರು.ಜಾಹ್ನವಿ ಉಪಾಧ್ಯ, ಅರವಿಂದ ಭಟ್, ಪ್ರಶಾಂತ್ ಶ್ರೀಯಾನ್, ಪವಿತ್ರಾ, ಪಾರ್ವತಿ, ಅರ್ಜುನ್ ಜಿ., ತಿಲಕ್ ನಾಯ್ಕ, ಮನೋಜ್, ವಿನಯ ಆಚಾರ್ಯ, ರಮೇಶ್ ಆಚಾರ್ಯ, ರವಿಕಾಂತ್ ಆಚಾರ್ಯ ಅವರು ಬಿಡಿಸಿರುವ ರೇಖಾಚಿತ್ರಗಳೂ ಪ್ರದರ್ಶನ ದಲ್ಲಿವೆ. ಮೈಸ್ನ ಆಡಳಿತಾಧಿಕಾರಿ ಗಾಯತ್ರಿ ಉಪಾಧ್ಯ, ಕಲಾ ವಿದ್ಯಾಲಯದ ಪ್ರಾಂಶುಪಾಲ ರಾಜೇಂದ್ರ ತ್ರಾಸಿ ಮತ್ತಿತರರು ಉಪಸ್ಥಿತರಿದ್ದರು. ಪ್ರದೀಪ್ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು