ಉಪ್ಪೂರು: ನಿವೇಶನ ರಹಿತರ ಪ್ರತಿಭಟನೆ
Team Udayavani, Mar 22, 2018, 8:40 AM IST
ಬ್ರಹ್ಮಾವರ: ಇಲ್ಲಿನ ಗ್ರಾ.ಪಂ. ನಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚದೇ ಬೇರೆಯವರಿಗೆ ಹಂಚುವ ಹುನ್ನಾರ ವಿರೋಧಿಸಿ, ನಿವೇಶನ ರಹಿತರ ಪ್ರತಿಭಟನೆ ಜರಗಿತು.
ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 700 ರಷ್ಟು ನಿವೇಶನ ರಹಿತ ಕುಟುಂಬಗಳಿದ್ದು, ನಿವೇಶನಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಗ್ರಾಮದ ಸ.ನಂ. 293/1 ಮತ್ತು 232ರಲ್ಲಿ ಅನ್ಯ ಗ್ರಾಮದ 250 ಜನರಿಗೆ ಎ ಶ್ರೇಣಿಯ ಪಟ್ಟಿಯಲ್ಲಿ ನಿವೇಶನ ಹಂಚುವ ಹುನ್ನಾರ ನಡೆದಿದೆ. ಇದು ರಾಜಕೀಯ ತುಷ್ಟೀಕರಣ ಎಂದು ಪ್ರತಿಭಟನಕಾರರು ಆರೋಪಿಸಿದರು. ಉಪ್ಪೂರು ಗ್ರಾಮದ ನಿವೇಶನ ರಹಿತರನ್ನು ಕಡೆಗಣಿಸಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಗ್ರಾಮಕರಣಿಕರ ಗಮನಕ್ಕೆ ತಂದರೂ ಪ್ರಕ್ರಿಯೆ ಮುಂದುವರಿಯುತ್ತಿದೆ. ಉಪ್ಪೂರು ಗ್ರಾಮದ ಎಲ್ಲ ನಿವೇಶನ ರಹಿತ ರನ್ನು ಎ ಶ್ರೇಣಿಯಲ್ಲಿ ಸೇರಿಸಿ ನಿವೇಶನ ಹಂಚಿ, ಅನಂತರ ಅನ್ಯ ಗ್ರಾಮದವರಿಗೆ ಹಂಚಿಕೆ ಮಾಡಬೇಕು. ಈಗ ನಡೆದಿರುವ ಪ್ರಕ್ರಿಯೆ ಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು.
ಗ್ರಾಮ ಕರಣಿಕರು, ಪಿಡಿಒ ಮೂಲಕ ಮನವಿ ಸಲ್ಲಿಸಿದರು. ರಾಜು ಪೂಜಾರಿ ಜಾತಬೆಟ್ಟು, ರಾಘವೇಂದ್ರ ಉಪ್ಪೂರು, ಪ್ರವೀಣ್ ಕುಮಾರ್, ಪದ್ಮನಾಭ್, ಅವಿನಾಶ್ ಶೆಟ್ಟಿ, ಅಜಿತ್ ಶೆಟ್ಟಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ