ಉಪ್ಪುಂದ: ಶಿಥಿಲ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ


Team Udayavani, Jan 18, 2019, 12:30 AM IST

1701uppe1.jpg

ಉಪ್ಪುಂದ: ಉಪ್ಪುಂದ ಗ್ರಾಮ ಪಂಚಾಯತ್‌ನ ತುಮಿನಹಿತ್ಲು ಸಮೀಪ ಶಿಥಿಲ ಗೊಂಡ ಹಳೆಯ ಕಟ್ಟಡದಲ್ಲೇ ಅಂಗನವಾಡಿ ಕೇಂದ್ರ ಕಾರ್ಯನಿರ್ವ ಹಿಸುತ್ತಿದ್ದು, ಮಕ್ಕಳು ಅಪಾಯದಲ್ಲೇ ಇರುವಂತಾಗಿದೆ.
  
9ನೇ ವಾರ್ಡ್‌ನ ಸುತ್ತಮುತ್ತಲಿನ ಪ್ರದೇಶದ ಸುಮಾರು 45 ಪುಟಾಣಿ ಮಕ್ಕಳು ಕಳೆದ 2ವರ್ಷಗಳಿಂದ ಶಿಥಿಲಗೊಂಡಿರುವ ಹಳೆಯ ಕಟ್ಟಡದಲ್ಲಿಯೇ ಶಿಕ್ಷಣ ಪಡೆಯುತ್ತಿದ್ದಾರೆ.

ಬಿರುಕುಬಿಟ್ಟ ಗೋಡೆ 
ಗೋಡೆಗಳಲ್ಲಿ ಬಿರುಕುಬಿಟ್ಟಿದ್ದು, ಅಲ್ಲಲ್ಲಿ ಗಾರೆ ಕಳಚಿ ಬಿದ್ದಿದೆ. ಮೇಲ್ಭಾಗ ತಗಡಿನ ಮೇಲೆ ಪ್ಲಾಸ್ಟಿಕ್‌ ಹೊದಿಕೆ ಇದ್ದು ಹಾರಿ ಹೋಗ ದಂತೆ ಶಿಲೆ ಕಲ್ಲುಗಳನ್ನು ಇಡಲಾಗಿದ್ದು, ತೀರ ಅಪಾಯಕಾರಿಯಾಗಿದೆ.  

ಹಳೆಯ ಕಟ್ಟಡದಿಂದ ಶಿಫ್ಟ್  
ಮೊದಲು ನದಿಕಂಠ ಬಳಿಯ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿತ್ತು. ಕಟ್ಟಡವು ಅಪಾಯದ ಸ್ಥಿತಿಗೆ ತಲುಪಿದ ಪರಿಣಾಮ ಕಟ್ಟಡದ ಮಾಲಕ ಫಿಲಿಪ್‌ ಲೋಬೋ ಅವರು ಮಕ್ಕಳನ್ನು ಸ್ಥಳಾಂತರಿಸಲು ಸೂಚಿಸಿದರು. ಬೇರೆ ಸ್ಥಳಾವಕಾಶ ಸಿಗದೇ ಈ ಹಳೆಯ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಅಂಗನವಾಡಿ ತೆರೆಯಲಾಗಿತ್ತು. ಕಟ್ಟಡದ ಸುತ್ತಲೂ ನೀರು ನಿಲ್ಲುವ ಜಾಗವಿದ್ದು, ಮಕ್ಕಳು ಹೋಗದಂತೆ ಕೆಂಪು ಕಲ್ಲು ಇಡಲಾಗಿದೆ. ಮಕ್ಕಳು ಹೊರಹೋಗದಂತೆ ಕಾಯಬೇಕಾದ ಪರಿಸ್ಥಿತಿ ಇದೆ.  

ಅಂಗನವಾಡಿಯಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆಯೂ ಇಲ್ಲ. ಕಟ್ಟಡದ ಹಿಂಭಾಗದಲ್ಲಿ ಒಂದು ಶೌಚಾಲಯ ಇದ್ದರೂ ಬೀಳುವ ಹಂತದಲ್ಲಿದೆ. 
 
ವಿದ್ಯುತ್‌ ಇಲ್ಲ
ಮಳೆಗಾಲದಲ್ಲಿ ಮಳೆ ನೀರು ಸೋರುತ್ತಿದ್ದರೆ, ಎಪ್ರಿಲ್‌, ಮೇ ತಿಂಗಳು ಬಂದರೆ ಮಕ್ಕಳು ಸೆಕೆಯಲ್ಲಿ ಬೇಯುವಂತಾಗಿದೆ. ಸಿಮೆಂಟ್‌ ಶೀಟ್‌ ಹಾಕಿರುವುದರಿಂದ ಇಲ್ಲಿ ಕೂರುವುದೇ ಅಸಾಧ್ಯವಾಗಿದೆ. ಜತೆಗೆ ವಿದ್ಯುತ್‌ ಇಲ್ಲದ್ದರಿಂದ ಫ್ಯಾನ್‌ ವ್ಯವಸ್ಥೆಯೂ ಇಲ್ಲ.  ಉಪ್ಪುಂದ ಗ್ರಾ.ಪಂ. ವತಿಯಿಂದ ಒಂದು ನಳ್ಳಿ ಹಾಗೂ ನೆಲ ಹಾಸು ಹಾಕಿಸಿಕೊಟ್ಟಿರುವುದು ಎರಡು ವರ್ಷಗಳಲ್ಲಿ ಆದ ಪ್ರಗತಿ ಬಿಟ್ಟರೆ ಬೇರೆ ಏನೂಆಗಿಲ್ಲ.

ಅಂಗನವಾಡಿ ಕಟ್ಟಡ ನಿರ್ಮಿಸಲು ಸ್ಥಳೀಯರಾದ ತುಮಿನಹಿತ್ಲು ಮರ್ಲಿ ಅವರ ಮಕ್ಕಳು 10 ಸೆಂಟ್ಸ್‌ ಜಾಗವನ್ನು ದಾನವಾಗಿ ನೀಡಲು ಮುಂದೆ ಬಂದಿದ್ದಾರೆ. ಆದರೆ ದಾನಪತ್ರಕ್ಕೆ ದಾಖಲೆ ಬದಲಾವಣೆ ಮಾಡಬೇಕಿದ್ದು, ಇದಕ್ಕಾಗಿ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ. ಆರ್‌ಟಿಸಿ ಬದ ಲಾವಣೆಗೆ ಇಲಾಖೆಯಲ್ಲಿ ವಿಳಂಬಧೋರಣೆ ಅನುಸರಿಸ ಲಾಗುತ್ತಿದೆ ಎನ್ನಲಾಗಿದೆ.  
2 ವರ್ಷಗಳಿಂದ ಮಕ್ಕಳು ಅಪಾಯದಲ್ಲೇ ಶಿಕ್ಷಣ ಪಡೆಯುತ್ತಿದ್ದರೂ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು, ಜನಪ್ರತಿನಿಧಿಗಳು ತುರ್ತು ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರಿಗೆ ತೀವ್ರ ಅಸಮಾಧಾನ ಮೂಡಿಸಿದೆ. 

ಅನುದಾನ ಸಿಕ್ಕಿಲ್ಲ
ಅಂಗನವಾಡಿಗೆ ದಾನವಾಗಿ ನೀಡಿದ ಜಾಗದ ಆರ್‌ಟಿಸಿ ಬದಲಾವಣೆ ಆಗಿಲ್ಲ. ಇದಕ್ಕಾಗಿ ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದಿದೆ. ಈ ಸಮಸ್ಯೆ ಬಗೆಹರಿದ ಅನಂತರವೇ ಕಟ್ಟಡ ನಿರ್ಮಿಸಲು ಅನುದಾನ ದೊರೆಯಲು ಸಾಧ್ಯ ಎನ್ನುತ್ತಾರೆ ಇಲಾಖೆಯವರು.
– ಚಂದ್ರಮತಿ, ಅಂಗನವಾಡಿ ಶಿಕ್ಷಕಿ

ಬೇರೆ ಸರಕಾರಿ ಕಟ್ಟಡವಿಲ್ಲ
ಗ್ರಾ.ಪಂ.ವ್ಯಾಪ್ತಿಯಲ್ಲಿ ಇತರೆ ಯಾವುದೇ ಸರಕಾರಿ ಕಟ್ಟಡ ಇಲ್ಲದಿರುವುದರಿಂದ ಅದೇ ಕಟ್ಟಡದಲ್ಲಿ ಮಕ್ಕಳ ಶಿಕ್ಷಣ ಮುಂದುವರಿಸುವುದು ಅನಿವಾರ್ಯ. ಜಾಗ ಕೊಡುವವರು ದಾನ ಪತ್ರವನ್ನು ಪಂಚಾಯತ್‌ಗೆ ಹಸ್ತಾಂತರಿಸಬೇಕು. ಆರ್‌ಟಿಸಿ ಬದಲಾವಣೆಗಾಗಿ ಕಂದಾಯ ಇಲಾಖೆಗೆ ಅರ್ಜಿ ನೀಡಲಾಗಿದ್ದು  4 ತಿಂಗಳಲ್ಲಿ ಪೂರ್ಣಗೊಳ್ಳಬಹುದು. ಬಳಿಕ ಸರಕಾರಕ್ಕೆ ಹೊಸ ಕಟ್ಟಡ ರಚನೆಯ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ಸಾಧ್ಯ.
 - ಹರೀಶ ಮೋಗವಿರ ,
ಪಿಡಿಒ, ಗ್ರಾ.ಪಂ.ಉಪ್ಪುಂದ

– ಕೃಷ್ಣ ಬಿಜೂರು

ಟಾಪ್ ನ್ಯೂಸ್

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.