ಯಕ್ಷಗಾನದ ಮೇಲೆ “ಉತ್ತರಕಾಂಡ’ ಪ್ರಭಾವ ?
Team Udayavani, Mar 19, 2017, 12:15 PM IST
ಉಡುಪಿ: ಸಾಹಿತಿ ಎಸ್.ಎಲ್. ಭೈರಪ್ಪ ಅವರ “ಉತ್ತರ ಕಾಂಡ’ ಕಾದಂಬರಿ ಮುಂದಿನ ದಿನಗಳಲ್ಲಿ ಯಕ್ಷಗಾನ ಅರ್ಥದಾರಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ| ಎಂ.ಎಲ್. ಸಾಮಗ ಅಭಿ ಪ್ರಾಯಪಟ್ಟರು. ಎಸ್.ಎಲ್. ಭೈರಪ್ಪ ಅವರ “ಉತ್ತರಕಾಂಡ’ ಕಾದಂಬರಿ ಕುರಿತು ರಥಬೀದಿ ಗೆಳೆಯರು, ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ ಎಂಜಿಎಂ ಕಾಲೇಜಿನ ಗೋವಿಂದ ಪೈ ಸಂಶೋಧನ ಕೇಂದ್ರದ ಧ್ವನ್ಯಾಲೋಕದಲ್ಲಿ ಶನಿವಾರ ಆಯೋಜಿಸಿದ “ಸಮೀಕ್ಷೆ-ಸಂವಾದ’ದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದು ಕಾವ್ಯವೋ, ಸ್ವರಚಿತ ವಿಮರ್ಶೆಯೋ ಎಂಬಂತೆ ಭೈರಪ್ಪನವರು ವಾಸ್ತವ ನೆಲೆಯಲ್ಲಿ ಚಿಂತನೆ ನಡೆಸಿದ್ದಾರೆ. ಕಾವ್ಯ, ಕಾದಂಬರಿಗಳಲ್ಲಿರುವಂತೆ ಅನೇಕ ಸಂಕೇತಗಳನ್ನು ಇಲ್ಲಿ ಕಾಣಬಹುದು. ಯಕ್ಷಗಾನ ಕಲಾವಿದರು ಕಾಲಕಾಲಕ್ಕೆ ಆಕರ ಗ್ರಂಥಗಳಿಂದ ಪ್ರಭಾವಿತರಾಗುವಂತೆ ಈ ಕಾದಂಬರಿಯೂ ಪರಿಣಾಮ ಬೀರಬಹುದು ಎಂದರು.
ಇಷ್ಟವಾಗದ ಕಾದಂಬರಿ ಕಾಲಕ್ಕನುಸಾರವಾಗಿ ರಾಮಾಯಣಕ್ಕೆ ಹೊಸ ಹೊಸ ವಿಶ್ಲೇಷಣಾ ಗ್ರಂಥಗಳು ಬಂದಿವೆ. ಈಗ ಸ್ತ್ರೀವಾದ ಪ್ರಸ್ತುತವಿರುವುದರಿಂದ ಭೈರಪ್ಪ ನವರು ಸೀತೆಗೆ ಅನ್ಯಾಯವಾಗಿದೆ ಎಂದು ಕಥೆ ಹೆಣೆದಿದ್ದಾರೆ. ಪೋಲಂಕಿ ರಾಮಮೂರ್ತಿಯವರೂ ಬೇರೆ ತೆರನಾಗಿ ಬರೆದರು. ಇದೇ ರೀತಿ ಕವಿ ಮುದ್ದಣನೂ ಮನೋರಮೆ ಮೂಲಕ
ಚಿತ್ರೀಕರಿಸಿದ್ದ. ನನಗೆ ಕಾದಂಬರಿ ಇಷ್ಟವಾಗಲಿಲ್ಲ ಎಂದು ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ| ಮಹೇಶ್ವರಿ ಅಭಿಪ್ರಾಯಪಟ್ಟರು.
ಸೀತೆ ಭೂಮಿ ಪುತ್ರಿಯಾದ ಕಾರಣ ಕೃಷಿ ಕಾಯಕದಲ್ಲಿ ತೊಡಗಿರುವುದು, ರಾಮನಿಗೆ ವಚನಪಾಲನೆ, ಧರ್ಮ ಮಾರ್ಗವೇ ತನಗಿಂತ ಹೆಚ್ಚು ಇಷ್ಟ ಎಂದು ಸೀತೆ ಹೇಳುವುದು, ಶಬರಿ-ಗುಹನಂತಹವರಿಗೆ ಆದರ್ಶವಾದ ರಾಮ ತನಗೆ ಮಾತ್ರ ನ್ಯಾಯ ಕೊಡಲಿಲ್ಲ ಎಂಬ ಮಾತುಗಳನ್ನು ಭೈರಪ್ಪ ಹೆಣೆದಿದ್ದಾರೆ ಎಂದರು. ಇಷ್ಟವಾದ ಕಾದಂಬರಿ “ಕವಲು’ ಕಾದಂಬರಿ ಬಳಿಕ ಭೈರಪ್ಪರ ಕಾದಂಬರಿಯನ್ನು ಓದಲೇ ಬಾರದೆಂದುಕೊಂಡಿದ್ದೆ. ಆದರೆ ಇದನ್ನು ಓದಿದ ಬಳಿಕ ನನಗೆ ಈ ಕಾದಂಬರಿ ಬಹಳ ಇಷ್ಟವಾಗಿದೆ. ಸ್ತ್ರೀ ಅಂತಃಕರಣವನ್ನು ಚೆನ್ನಾಗಿ ನಿರೂಪಿಸಿದ್ದಾರೆ ಎಂದು ತೆಂಕನಿಡಿಯೂರು ಕಾಲೇಜಿನ ಪ್ರಾಧ್ಯಾಪಕಿ ಡಾ| ನಿಕೇತನ ಹೇಳಿದರು. ರಥಬೀದಿ ಗೆಳೆಯರು ಅಧ್ಯಕ್ಷ ಪ್ರೊ| ಮುರಳೀಧರ ಉಪಾಧ್ಯ ಸ್ವಾಗತಿಸಿ ಪ್ರೊ| ಸುಬ್ರಹ್ಮಣ್ಯ ಜೋಷಿ ವಂದಿಸಿದರು. ಜಿ.ಪಿ. ಪ್ರಭಾಕರ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ