ಕೋಟೇಶ್ವರದಲ್ಲಿ ವಿ.ನಾಗೇಂದ್ರ ಪ್ರಸಾದ್ ಸಂಗೀತ ಸವಿಸಂಜೆ
Team Udayavani, Feb 28, 2021, 2:24 PM IST
ಕುಂದಾಪುರ : ಕನ್ನಡದ ಖ್ಯಾತ ಚಲನಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅವರ ಸಂಗೀತ ಸವಿಸಂಜೆ ಕಾರ್ಯಕ್ರಮ ಕೋಟೇಶ್ವರದ ಸಹನಾ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆಯಿತು.
ಸಮುದ್ಯತಾ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕೆಜಿಎಫ್ ಖ್ಯಾತಿಯ ಯುವ ಗಾಯಕಿ ಐರಾ ಆಚಾರ್ಯ, ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿ ನಿನಾದ ನಾಯಕ್, ಸರಿಗಮಪ ಕಾರ್ಯಕ್ರಮದಲ್ಲಿ ಖ್ಯಾತಿಯಾದ ಶ್ರೀಹರ್ಷ ಹಾಗೂ ಡಾ.ಅಭಿಷೇಕ್ ರಾವ್ ಅವರ ಸುಮಧುರ ಧ್ವನಿಯಲ್ಲಿ ನರೆದಿದ್ದ ಜನರನ್ನು ರಂಜಿಸಿದರು.
ನಾಗೇಂದ್ರ ಸಾಹಿತ್ಯದಲ್ಲಿ ಮೂಡಿಬಂದ ಹಾಡುಗಳು ಕೇಳುಗರನ್ನು ಸೆಳೆದಿಟ್ಟುಕೊಂಡಿತ್ತು.ನಾಗೇಂದ್ರ ಪ್ರಸಾದ್ ಅವರ ಒಂದೆರೆಡು ಸಾಲಿನ ಇಟ್ರೋ ಹಾಡಿಗೆ ಜನ ಮನಸೋತು, ಚಪ್ಪಾಳೆ ತಟ್ಟಿ ಖುಷಿ ಪಟ್ಟರು. ಕಾರ್ಯಕ್ರಮದಲ್ಲಿ ಗಾಯಕರು ಕನ್ನಡದ ರೆಟ್ರೋ ಹಾಗೂ ಹೊಸ ಸಿನಿಮಾದ ಹಾಡುಗಳನ್ನು ಹಾಡುವ ಮೂಲಕ ತಮ್ಮ ಧ್ವನಿಯಿಂದ ಜನರನ್ನು ಮೋಡಿ ಮಾಡಿದರು. ಕಾರ್ಯಕ್ರಮವನ್ನು ಅವಿನಾಶ್ ಕಾಮತ್ ತಮ್ಮ ನಿರೂಪಣೆಯಿಂದ ಇನ್ನಷ್ಟು ಅಂದಗಾಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ಲವ ಸಂವತ್ಸರದ ಸ್ವಾಗತಕ್ಕೆ ಸಜ್ಜಾದ ಜನತೆ
ಮತ್ತೆ ಕುಂಟುತ್ತಾ ಸಾಗಿದ ಫ್ಲೈಓವರ್ ಕಾಮಗಾರಿ : ಮತ್ತೂಮ್ಮೆ ಹೊಸ ಗಡುವು ನಿರೀಕ್ಷೆ!
ಪರ್ಕಳ ರಾ.ಹೆ. ವಿಸ್ತರಣೆ ಕಾಮಗಾರಿ : ಖಾಲಿ ಕಟ್ಟಡಗಳ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿ
ಮಿಸ್ ಯೂನಿವರ್ಸ್ಇಂಟರ್ ನ್ಯಾಷನಲ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ ಉಡುಪಿಯ ಬೆಡಗಿ
ಕಟಪಾಡಿ: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ!