ಹುಲ್ಲು ಕಟಾವಿಗಾಗಿ ಯಂತ್ರ ಹಿಡಿದ ವಡಭಾಂಡೇಶ್ವರ ವಾರ್ಡ್‌ ಸದಸ್ಯ

ಪೌರ ಕಾರ್ಮಿಕರನ್ನು ಕಾಯದೇ 

Team Udayavani, Nov 14, 2019, 5:09 AM IST

1311MLE1

ಮಲ್ಪೆ: ಜನಪ್ರತಿನಿಧಿಗಳು ಅಂದ್ರೆ ಹೇಗಿರಬೇಕು ಎಂಬುವುದಕ್ಕೆ ಇಲ್ಲೊಂದು ತಾಜಾ ನಿದರ್ಶನ ಇದೆ. ನಗರಸಭೆ ಸದಸ್ಯರೊಬ್ಬರು, ಆಡಳಿತ ವ್ಯವಸ್ಥೆಯಲ್ಲಿ ಸೂಕ್ತ ಸಮಯದಲ್ಲಿ ಕಾರ್ಮಿಕರು ಸಿಗದಿದ್ದಾಗ ಅವರನ್ನು ಕಾಯದೇ ಜನರ ಹಿತದೃಷ್ಟಿಯಿಂದ ಹುಲ್ಲು ಕತ್ತರಿಸುವ ಯಂತ್ರವನ್ನು ಹಿಡಿದು ವಾರ್ಡ್‌ನ ಸುತ್ತಮುತ್ತ ತಾವೇ ಖುದ್ದಾಗಿ ಹುಲ್ಲು ಕತ್ತರಿಸುವ ಮೂಲಕ ನಾಗರಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಡಭಾಂಡೇಶ್ವರ ವಾರ್ಡ್‌ನ ಸದಸ್ಯ ಯೋಗೀಶ್‌ ಸಾಲ್ಯಾನ್‌ ವಾರ್ಡ್‌ನ ನಿವಾಸಿಗಳ ಮೆಚ್ಚುಗೆ ಪಡೆದವರು. ನಗರಸಭೆಯ ವತಿಯಿಂದ ಪೌರ ಕಾರ್ಮಿಕರಿಂದ ನಡೆಯಬೇಕಾಗಿದ್ದ ವಾರ್ಡ್‌ನ ಎಲ್ಲ ರಸ್ತೆಗಳ ಕೆಲಸವನ್ನು ತನ್ನ ಬಿಡುವಿನ ಸಮಯದಲ್ಲಿ ಇದೀಗ ತಾವೇ ನಿರ್ವಹಿಸುತ್ತಿದ್ದಾರೆ.

ವಾರ್ಡ್‌ನ ಕೆಲವೊಂದು ಭಾಗದಲ್ಲಿ ಆಳೆತ್ತರಕ್ಕೆ ಹುಲ್ಲುಗಳು ಬೆಳೆದಿವೆ. ಇದು ವಾಹನ ಸವಾರರಿಗೆ ಮುಂದೆ ಬರುವ ವಾಹನಗಳು ಕಾಣಿಸದೆ ಎಷ್ಟೋ ಸಲ ಅಪಘಾತಗಳಿಗೂ ಕಾರಣವಾಗುತ್ತಿದೆ. ಈ ಬಗ್ಗೆ ದಿನನಿತ್ಯ ನಾಗರಿಕರು ವಾರ್ಡ್‌ ಸದಸ್ಯ ಯೋಗೀಶ್‌ ಅವರಲ್ಲಿ ದೂರು ನೀಡುತ್ತಿದ್ದರು. ಆದರೆ ನಗರಸಭೆಯಲ್ಲಿ ಪೌರ ಕಾರ್ಮಿಕರ ಕೊರತೆಯಿಂದಾಗಿ ವಾರಕ್ಕೆ ಒಂದು (ಸೋಮವಾರ) ದಿನ ಮಾತ್ರ ಕಾರ್ಯ ನಡೆಯುತ್ತಿತ್ತು. ಅದು ಕೆಲವೇ ಗಂಟೆಗಳು ಮಾತ್ರವಾಗಿತ್ತು.

ಮಲ್ಪೆ ಮೀನುಗಾರಿಕೆಗೆ ಬಂದರಿನಲ್ಲಿ ಮೀನು ವ್ಯಾಪಾರದ ವೃತ್ತಿಯನ್ನು ನಡೆಸುತ್ತಿರುವ ಅವರು ಮುಂಜಾನೆ 4 ರಿಂದ ಪೂರ್ವಾಹ್ನ 11ರವರೆಗೆ ಬಂದರಿನಲ್ಲಿ ಕೆಲಸ ಮಾಡುತ್ತಾರೆ. ಆನಂತರ ತನ್ನ ವಾರ್ಡ್‌ಗೆ ಬಂದು ಸಂಜೆ 3ಗಂಟೆಯ ವರೆಗೆ ಕಟಾವು ಯಂತ್ರ ಹಿಡಿದು ರಸ್ತೆ ಬದಿಯ ಹುಲ್ಲು ಕಟಾವಿನಲ್ಲಿ ನಿರತರಾಗುತ್ತಾರೆ.

ಹೊಸ ಕಟಾವು ಯಂತ್ರ ಖರೀದಿ
ಈ ಕೆಲಸಕ್ಕಾಗಿ ಕೃಷಿ ಇಲಾಖೆಯಲ್ಲಿ 30 ಸಾವಿರ ರೂಪಾಯಿ ಬೆಲೆಯ ಹೊಸ ಕಟಾವು ಯಂತ್ರವನ್ನು ಖರೀದಿಸಿದ್ದಾರೆ. ತನಗೆ ಬೇಕಾಗುವಷ್ಟು ಭೂಮಿ ಇಲ್ಲದ್ದರಿಂದ ಸಬ್ಸಿಡಿಗಾಗಿ ಸ್ನೇಹಿತನ ಕೃಷಿ ಭೂಮಿಯ ಆಧಾರದಲ್ಲಿ ಯಂತ್ರವನ್ನು ಖರೀದಿಸಿದ್ದಾರೆ. ಪ್ರತಿನಿತ್ಯ ಇದಕ್ಕೆ ಬೇಕಾಗುವ ಪೆಟ್ರೋಲಿನ ವೆಚ್ಚವನ್ನು ತಾವೇ ಭರಿಸುತ್ತಾರೆ.

20 ಕಿ.ಮೀ. ದೂರದ ರಸ್ತೆ
ವಡಭಾಂಡೇಶ್ವರ ವಾರ್ಡ್‌ನಲ್ಲಿ ಮುಖ್ಯ ರಸ್ತೆ ಸೇರಿ ಸುಮಾರು 14 ರಸ್ತೆಗಳಿವೆ. ಸುಮಾರು 20 ಕಿ.ಮೀ. ಉದ್ದದ ರಸ್ತೆ ಇದೆ. ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದು ಹೆಚ್ಚುವರಿ ಕಾರ್ಮಿಕರನ್ನು ನೇಮಿಸಿ ಕೆಲಸ ನಿರ್ವಹಿಸಲು ಹಲವಾರು ಬಾರಿ ಮನವಿ ಮಾಡಿದ್ದರೂ, ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಬೇಸತ್ತ ಯೋಗೀಶ್‌ ಸಾಲ್ಯಾನ್‌ ಅವರು ಹುಲ್ಲು ಕತ್ತರಿಸುವ ಯಂತ್ರಯನ್ನು ತಾನೆ ಹಣಕೊಟ್ಟು ಖರೀದಿಸಿ ಸ್ವತಃ ತಾವೇ ಯಂತ್ರದ ಮೂಲಕ ಕತ್ತರಿಸಲು ಆರಂಭಿಸಿದರು.

ನಿರಂತರ ಕೆಲಸ
ಸಮಸ್ಯೆಯ ಕುರಿತು ಸಾಕಷ್ಟು ಕರೆಗಳು ಬರುತ್ತಿತ್ತು. ನಮ್ಮ ಆಡಳಿತ ವ್ಯವಸ್ಥೆಗೆ ತುಕ್ಕು ಹಿಡಿದಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ನಗರಸಭಾ ಸದಸ್ಯನಾದವನು ಪೌರಕಾರ್ಮಿಕ ಮಾಡುವ ಕೆಲಸಕ್ಕೂ ಸಿದ್ಧನಿರಬೇಕು. ಈ ನಿಟ್ಟಿನಲ್ಲಿ ಈ ಕಾರ್ಯಕ್ಕೆ ಮುಂದಾಗಿದೇªನೆ. ಎರಡು ದಿನದ ಹಿಂದೆ ಕಟಾವು ಕೆಲಸ ಆರಂಭಿಸಿದ್ದೇನೆ. ನನ್ನ ಸದಸ್ಯ ಅವಧಿಯವರೆಗೂ ನಿರಂತರ ಈ ಕೆಲಸ ಮುಂದುವರಿಯುತ್ತದೆ.
-ಯೋಗೀಶ್‌ ಸಾಲ್ಯಾನ್‌,
ನಗರಸಭಾ ಸದಸ್ಯರು ವಡಭಾಂಡೇಶ್ವರ ವಾರ್ಡ್‌

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.