ಇನ್ನೂ ಹಾಕಿಲ್ಲ ವಾರಾಹಿ ಗೇಟು: ಕುಡಿಯುವ ನೀರಿಗೆ ಸಂಕಷ್ಟ !


Team Udayavani, Oct 30, 2018, 2:25 AM IST

varahi-water-29-10.jpg

ಕುಂದಾಪುರ: ಭೀಕರ ಮಳೆಗೆ ತೆರೆದ ವಾರಾಹಿ ನದಿಯ ಉಪನದಿ ಜಂಬೂ ನದಿಯ ಗೇಟು ಮುಚ್ಚದಿದ್ದ ಕಾರಣ ಕುಂದಾಪುರ ಪುರಸಭೆಗೆ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಸಂಗ್ರಹವಾಗದಿದ್ದರೆ ಈ ಬಾರಿಯ ಬೇಸಗೆ ಕಡು ಕಷ್ಟಕಾಲ ತರಲಿದೆ. ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ.

ತೆರೆದ ಗೇಟು
ಆಗಸ್ಟ್‌ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಜಂಬೂ ನದಿ ತುಂಬಿ ಹರಿದಿತ್ತು. ಆ.14ರಂದು ವಾರಾಹಿ ಜಲವಿದ್ಯುತ್‌ ಯೋಜನೆ ವತಿಯಿಂದ ಗೇಟು ತೆರೆಯುವ ಪ್ರಕಟನೆ ನೀಡಲಾಗಿತ್ತು. ತದನಂತರದ ದಿನಗಳಲ್ಲಿ ಗೇಟು ಮುಚ್ಚದ ಕಾರಣ ನೀರು ಸರಾಗವಾಗಿ ಹರಿದು ಸಮುದ್ರ ಸೇರುತ್ತಿತ್ತು. ರವಿವಾರ ರಾತ್ರಿ ಪುರಸಭೆಗೆ ಕುಡಿಯುವ ನೀರಿಗೆ ಬರುವ ನೀರಿನ ಪ್ರಮಾಣ ಕಡಿಮೆಯಾದಾಗ ಅವಾಂತರ ಗಮನಕ್ಕೆ ಬಂದಿದೆ.

ಏನು ಸಮಸ್ಯೆ
ಹೊಳೆಯಲ್ಲಿ ನೀರು ಖಾಲಿಯಾದರೆ ಐದು ಪಂಚಾಯತ್‌ ಹಾಗೂ ಕುಂದಾಪುರ ಪುರಸಭೆ ವ್ಯಾಪ್ತಿಯ ಜನರಿಗೆೆ ಕುಡಿಯುವ ನೀರಿಗೆ ಇರುವ ಏಕೈಕ ಆಧಾರ ಕೈ ಕೊಟ್ಟಂತಾಗುತ್ತದೆ. ಈಗಲೇ ನೀರಿನ ಹರಿವು ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಬರಬಹುದು. 

ಸಮುದ್ರದ ಉಬ್ಬರ ಇಳಿತದ ಸಂದರ್ಭ ಈ ಪ್ರದೇಶಕ್ಕೆ ಹಿನ್ನೀರು ಹೋಗುತ್ತದೆ. ಆಗ ಕೂಡಾ ಗೇಟಿನ ಆವಶ್ಯಕತೆ ಇರುತ್ತದೆ. ಉಪ್ಪುನೀರು ನದಿಯೊಳಗೆ ಮರಳಿ ಹರಿದಾಗ ಗೇಟು ಹಾಕಿರದಿದ್ದರೆ ಕುಡಿಯುವ ನೀರಿನ ಜತೆ ಉಪ್ಪು ನೀರು ಸೇರಿ ಸಮಸ್ಯೆ ಬಿಗಡಾಯಿಸುತ್ತದೆ. ಹಾಗೇನೂ ಸಮಸ್ಯೆಯಾಗಲು ಬಿಡುವುದಿಲ್ಲ. ಕುಡಿಯುವ ನೀರಿನ ಅಗತ್ಯವಿದೆ ಎಂದ ಕೂಡಲೇ ನಮ್ಮಲ್ಲಿ ನೀರಿನ ಲಭ್ಯತೆಯಿದ್ದು ತತ್‌ಕ್ಷಣ ಗೇಟು ಹಾಕಿ ಸಹಕರಿಸುತ್ತೇವೆ ಎಂದು ವಾರಾಹಿ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಮಂಜುನಾಥ್‌ ಹೆಗಡೆ ‘ಉದಯವಾಣಿ’ಗೆ ತಿಳಿಸಿದ್ದಾರೆ.

ಕುಂದಾಪುರಕ್ಕೆ ನೀರು
ಜಂಬೂ ನದಿಯಿಂದ ಜಪ್ತಿ ಎಂಬಲ್ಲಿ ನೀರು ಸಂಗ್ರಹಿಸಿ ಶುದ್ಧೀಕರಿಸಿ ಪುರಸಭೆ ನಾಗರಿಕರಿಗೆ ಕುಡಿಯಲು ನೀರು ಕೊಡಲಾಗುತ್ತದೆ. ಹೀಗೆ ಪೈಪ್‌ಲೈನ್‌ ಮೂಲಕ ನೀರು ತರುವಾಗ ಪೈಪ್‌ಲೈನ್‌ ಹಾದುಹೋಗುವ ಆನಗಳ್ಳಿ, ಬಸ್ರೂರು, ಕೋಣಿ, ಹಂಗಳೂರು, ಕಂದಾವರ, ಭಾಗಶಃ ಕೋಟೇಶ್ವರ ಪಂಚಾಯತ್‌ನ ಜನತೆಗೆ ನೀರು ಒದಗಿಸಲಾಗುತ್ತದೆ. ಪುರಸಭೆಯಲ್ಲಿ 2,815 ಮನೆಗಳಿಗೆ, 35 ಇತರ, 169 ವಾಣಿಜ್ಯ ಸಂಪರ್ಕಗಳಿವೆ. ಅಗ್ನಿಶಾಮಕ ಠಾಣೆ ಹಾಗೂ ಎಂಜಿನಿಯರಿಂಗ್‌ ಕಾಲೇಜಿಗೆ ಕೂಡಾ ಇದೇ ನೀರಿನ ಸಂಪರ್ಕವಿದೆ. 

ರಾಜ್ಯಕ್ಕೆ ನಂ.1
ನೀರಿನ ವಿತರಣೆ ಹಾಗೂ ಬಿಲ್ಲು ಸಂಗ್ರಹದಲ್ಲಿ ಶೇ.85 ವಸೂಲಿ ಮಾಡಿದ ಇಲ್ಲಿನ ಪುರಸಭೆ ರಾಜ್ಯದಲ್ಲಿ ನಂ.1 ಸ್ಥಾನ ಗಳಿಸಿದ ಹೆಗ್ಗಳಿಕೆಯಲ್ಲಿದೆ. 2017-18ರಲ್ಲಿ 1.15 ಕೋ.ರೂ. ನೀರಿನ ಬಿಲ್ಲು ಸಂಗ್ರಹಿಸಿದ್ದು ಈ ವರ್ಷ ಎಪ್ರಿಲ್‌ನಿಂದ ಅ.25ರವರೆಗೆ 59.54 ಲಕ್ಷ ರೂ. ಸಂಗ್ರಹಿಸಿದೆ. ಈ ವರ್ಷ ಈಗಾಗಲೇ 65,12,38,912ಲೀ. ನೀರು ಖರ್ಚಾಗಿದೆ. ಕಳೆದ ವರ್ಷ 102,08,88,741 ಲೀ. ನೀರು ಖರ್ಚಾಗಿದೆ. 

ದಿನವಿಡೀ ನೀರು
ಪುರಸಭೆಯಲ್ಲಿ ಒಟ್ಟು 23 ವಾರ್ಡ್‌ ಗಳಿದ್ದು ಈಗ 3 ವಾರ್ಡ್‌ಗಳಿಗೆ ದಿನವಿಡೀ ನೀರು ಪೂರೈಸಲಾಗುತ್ತಿದೆ. ಉಳಿದ 17 ವಾರ್ಡ್‌ಗಳಿಗೆ 8 ಗಂಟೆ ನೀರು ಕೊಡಲಾಗುತ್ತಿದ್ದು ಕೋಡಿಯ ಮೂರು ವಾರ್ಡ್‌ಗಳಿಗೆ ನೀರು ಸರಬರಾಜು ವ್ಯವಸ್ಥೆ ಇಲ್ಲ. ಇಲ್ಲಿಗೆ 17 ಕೋ.ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿ ಆರಂಭವಾಗಿದೆ. ಇದಾದ ಬಳಿಕ ಇಡೀ ಪುರಸಭೆ ವ್ಯಾಪ್ತಿಗೆ ದಿನದ 24 ತಾಸು ನೀರು ಕೊಡಲು ಪುರಸಭೆ ಚಿಂತನೆ ನಡೆಸಿದೆ.

ಕ್ರಮ ವಹಿಸಲಾಗುವುದು
ಸಾಮಾನ್ಯವಾಗಿ ವರ್ಷವೂ ನ.15ರ ನಂತರ ಗೇಟು ಹಾಕಲಾಗುತ್ತದೆ. ಹಿನ್ನೀರು ಬಂದಿದೆಯೇ ಎಂದು ಪರಿಶೀಲಿಸಲಾಗುತ್ತಿದ್ದು ಉಪ್ಪುನೀರು ಬಂದ ಕೂಡಲೇ ಗೇಟು ಹಾಕಲಾಗುತ್ತದೆ. ಪುರಸಭೆಗೆ ನೀರು ಕಡಿಮೆಯಾಗಿದೆ ಎಂದು ಮಾಹಿತಿ ತಿಳಿದ ಕೂಡಲೇ ಗೇಟು ಹಾಕಲು ಕ್ರಮ ವಹಿಸಲಾಗುವುದು.
– ಅಶೋಕ್‌, ಸಹಾಯಕ ಎಂಜಿನಿಯರ್‌, ವಾರಾಹಿ ಯೋಜನೆ

ಮಾಹಿತಿ ಕೊಡಲಾಗಿದೆ
ವಾರಾಹಿ ಯೋಜನೆಯವರಿಗೆ ನೀರು ಕಡಿಮೆಯಾದ ಕುರಿತು ಮಾಹಿತಿ ಕೊಡಲಾಗಿದೆ. ಅವರು ಗೇಟು ಹಾಕಿದ ಬಳಿಕ ಪರಿಸ್ಥಿತಿ ಸುಧಾರಿಸಬಹುದು ಎಂಬ ವಿಶ್ವಾಸವಿದೆ.
– ಮಂಜುನಾಥ್‌ ಶೆಟ್ಟಿ, ಎಂಜಿನಿಯರ್‌, ಪುರಸಭೆ, ಕುಂದಾಪುರ

— ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.