ಎರಡು ವರ್ಷಗಳಲ್ಲಿ ನಗರಕ್ಕೆ ವಾರಾಹಿ ನೀರು ಖಚಿತ


Team Udayavani, May 23, 2019, 6:10 AM IST

raghupati-bhat

ಉಡುಪಿ: ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ 2021 ರೊಳಗೆ ವಾರಾಹಿ ಕುಡಿಯುವ ನೀರು ಯೋಜನೆ ಜಾರಿಗೊಳಿಸುವುದು ಖಚಿತ ಎಂದು ಶಾಸಕ ಕೆ.ರಘುಪತಿ ಭಟ್‌ ತಿಳಿಸಿದ್ದಾರೆ.

– ಈ ಬೇಸಗೆಯಲ್ಲಿ ನಗರದಲ್ಲಿ ಉದ್ಭವಿಸಿದ ನೀರಿನ ಕೊರತೆ ಸಂಬಂಧ ಕೈಗೊಳ್ಳಬೇಕಾದ ಶಾಶ್ವತ ಪರಿಹಾರಗಳ ಕುರಿತು ಉದಯವಾಣಿ ನಡೆಸಿದ ಸಂದರ್ಶನದಲ್ಲಿ ಶಾಸಕರು ಈ ವಿಷಯವನ್ನು ಸ್ಪಷ್ಟಪಡಿಸಿದರು.
“ಈ ವರ್ಷ ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಲು ಸ್ವರ್ಣಾ ನದಿಯ ಬಜೆ ಅಣೆಕಟ್ಟು ಪ್ರದೇಶ ಮತ್ತು ಒಳಹರಿವಿನ ಪ್ರದೇಶಗಳ ನಿರ್ವಹಣೆಯಲ್ಲಿ ವಿಫ‌ಲವಾಗಿರುವುದು. ಜತೆಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿಯೇ ಮಳೆ ನಿಂತಿರುವುದು ಕಾರಣ’ ಎಂದು ವಿವರಿಸಿದರು.

· ನೀರಿನ ಕೊರತೆ ಉಲ½ಣಿಸದಂತೆ ನೋಡಿಕೊಳ್ಳ ಬಹುದಿತ್ತೆ?
– ಸ್ವರ್ಣಾ ನದಿಯ ಬಜೆ ಡ್ಯಾಂ ಪ್ರದೇಶ ಸೇರಿದಂತೆ ಶೀರೂರು, ಮಾಣೈ ಮೊದಲಾದೆಡೆ ಅಪಾರ ಹೂಳು ತುಂಬಿದೆ. ಕೆಲವೆಡೆ ನದಿಯಲ್ಲಿ ದ್ವೀಪದಂಥ ಪ್ರದೇಶ ನಿರ್ಮಾಣವಾಗಿದೆ. ಇದನ್ನು ತೆರವುಗೊಳಿಸಬೇಕು. ಅಧಿಕಾರಿಗಳಿಗೆ ಇಚ್ಛಾಶಕ್ತಿಯೇ ಇಲ್ಲ. ಬಜೆ ಡ್ಯಾಂ ಬಳಿ ಹೂಳೆತ್ತಿದ್ದರೆ 3 ತಿಂಗಳು ಹೆಚ್ಚುವರಿ ಅವಧಿಗೆ ನೀರು ಸಂಗ್ರಹಿಸಬಹುದು. ಈ ವರ್ಷ ನಾನು ನನ್ನ ಸ್ವಯಂ ಆಸಕ್ತಿಯಿಂದ ಬಜೆ ಡ್ಯಾಂನ ಜಾಕ್‌ವೆಲ್‌ ಬಳಿ ಇದ್ದ ಸುಮಾರು 100 ಲಾರಿಯಷ್ಟು ಹೂಳನ್ನು ತೆರವು ಮಾಡಿಸಿದ್ದೇನೆ. ನೀರಿನ ಸಮಸ್ಯೆ ತಲೆದೋರುವ ಕುರಿತು ಜಿಲ್ಲಾಧಿಕಾರಿಗಳ ಗಮನೆ ಸೆಳೆದು ಸೂಕ್ತ ಕ್ರಮಕ್ಕೆ ಹಲವು ಬಾರಿ ಒತ್ತಾಯಿಸಿದರೂ ಸ್ಪಂದಿಸಲಿಲ್ಲ. ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತವೂ ಇಲ್ಲ. ಅಧಿಕಾರಿಗಳು ನೀತಿ ಸಂಹಿತೆಯ ನೆಪವೊಡ್ಡಿ ನಿರ್ಲಕ್ಷ್ಯ ತೋರಿದರು. ಕೊನೆಗೇ ನಾವೆಲ್ಲಾ ಕಾರ್ಯಕರ್ತರು ಶ್ರಮದಾನ, ಹಿಟಾಚಿ ಮೂಲಕ ಕಲ್ಲು, ತಡೆಗಳನ್ನು ತೆರವುಗೊಳಿಸಿ ನೀರು ಹರಿವಿಗೆ ಅವಕಾಶ ಕಲ್ಪಿಸಿದೆವು. ಹಾಗಾಗಿ ಸ್ಥಿತಿ ಸ್ವಲ್ಪ ಸುಧಾರಿಸಿತು. ಹಳ್ಳಗಳಲ್ಲಿ ತುಂಬಿದ ನೀರನ್ನು ಡ್ಯಾಂನತ್ತ ಪಂಪ್‌ ಮಾಡುವ ಕೆಲಸವನ್ನು ಕೊನೆಯ ಕ್ಷಣದಲ್ಲಿ ಕೈಗೆತ್ತಿಕೊಳ್ಳಲಾಯಿತು. ನದಿ ಒಣಗುವ ಮೊದಲೇ ಕ್ರಮ ಕೈಗೊಂಡಿದ್ದರೆ ಸಮಸ್ಯೆ ಬಿಗಡಾಯಿಸುತ್ತಿರಲಿಲ್ಲ.

· ಇನ್ನಾದರೂ ಡ್ರೆಜ್ಜಿಂಗ್‌ ನಡೆಯಬಹುದೆ?
– ಅಧಿಕಾರಿಗಳ ನಿರ್ಲಕ್ಷ್ಯ ಗಮನಿಸುವಾಗ ಡ್ರೆಜ್ಜಿಂಗ್‌ ಶೀಘ್ರ ಆರಂಭಗೊಳ್ಳುವಂತೆ ಕಾಣುತ್ತಿಲ್ಲ. ಪ್ರತಿ ದಿನವೂ ಅಧಿಕಾರಿಗಳನ್ನು ವಿಚಾರಿಸುತ್ತಿದ್ದೇನೆ. ಬಜೆ, ಪುತ್ತಿಗೆ, ಭಂಡಾರಿಬೆಟ್ಟು, ಮಾಣೈ, ಶೀರೂರಿನಲ್ಲಿ ಪ್ರತ್ಯೇಕ ಟೆಂಡರ್‌ ಕರೆದು ಹೂಳೆತ್ತಿ, ಅನಂತರ ಅದನ್ನು ಏಲಂ ಹಾಕಲಿ. ಈಗ ಹಳ್ಳಗಳಲ್ಲಿ ಡ್ರೆಜ್ಜಿಂಗ್‌  ನಡೆಸಬೇಕು. ಮಳೆಗಾಲದಲ್ಲಿ ನೀರಿನ ಹೊರಹರಿವು ಉಂಟಾ ದಾಗ ಪಂಪ್‌ ಬಳಸಿ ಡ್ರೆಜ್ಜಿಂಗ್‌ ಮಾಡಬೇಕಾದೀತು.

·ಸ್ವರ್ಣಾ 2ನೇ ಹಂತದಿಂದ ಎಷ್ಟು ಪ್ರಯೋಜನ ವಾಯಿತು?
-ಸ್ವರ್ಣಾ 2ನೇ ಹಂತ ವಿಫ‌ಲವಾಗಿಲ್ಲ. ಶೀರೂರಿನಲ್ಲಿ 2ನೇ ಹಂತದ ಅಣೆಕಟ್ಟು ಮಾಡಿದ ಪರಿಣಾಮ ಇದುವರೆಗೂ ನಗರಕ್ಕೆ ನೀರು ಲಭ್ಯವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಧಿಕಾರಿ ಗಳ ನಿರ್ಲಕ್ಷ್ಯದಿಂದಾಗಿ ನಿರ್ವಹಣೆ ಸರಿಯಾಗಿಲ್ಲ. ಸ್ವರ್ಣಾ 2ನೇ ಹಂತ ಮಾಡುವಾಗಲೇ ಮುಂದಿನ ದಿನಗಳಲ್ಲಿ ವಾರಾಹಿ ಯೋಜನೆ ಅನಿವಾರ್ಯ ಎಂದು ತೀರ್ಮಾನಿಸಲಾಗಿತ್ತು. ಆದರೆ ಆಗ ಬೇಕಾದಷ್ಟು ಹಣಕಾಸು ಇರಲಿಲ್ಲ.

·ವಾರಾಹಿಯಿಂದ ನೀರು ತರಲು ಏನು ಅಡ್ಡಿ?
-ವಾರಾಹಿಯಿಂದ ಉಡುಪಿಗೆ ನೀರು ತರುವ ಯೋಜನೆಗೆ ಈ ಹಿಂದೆ ಕರೆದ ಟೆಂಡರ್‌ನಲ್ಲಿ ಲೋಪವಿತ್ತು. ವಾರಾಹಿಯಿಂದ ಶುದ್ಧೀಕರಿಸದ ನೀರನ್ನು (ಕಚ್ಚಾ ನೀರು) ನಗರಕ್ಕೆ ತರುವ ಯೋಜನೆ ಇದಾಗಿತ್ತು. ಆದರೆ ಪೈಪ್‌ಲೈನ್‌ ಹಾದು ಹೋಗುವ ಗ್ರಾಮಗಳವರು ವಿರೋಧ ವ್ಯಕ್ತಪಡಿಸಿದ್ದರು. ಅವರಿಗೆ ಶುದ್ಧ ನೀರು ಕೊಡಬೇಕೆಂಬ ಬೇಡಿಕೆ ಇತ್ತು. ಹಾಗಾಗಿ ಪ್ರತಾಪಚಂದ್ರ ಶೆಟ್ಟಿ ಅವರು ವಿಧಾನಪರಿಷತ್‌ ಅರ್ಜಿ ಸಮಿತಿಗೆ ಆಕ್ಷೇಪ ಸಲ್ಲಿಸಿದ್ದರು. ನಾನು ಆ ಯೋಜನೆಯನ್ನು ಬದಲಿಸಿದ್ದು ವಾರಾಹಿ ಸಮೀಪದ ಭರತ್ಕಲ್‌ನಲ್ಲಿಯೇ 45 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಣ ಘಟಕ ಸ್ಥಾಪಿಸಿ ನೀರನ್ನು ಉಡುಪಿಗೆ ತರಲಾಗುವುದು. ಪೈಪ್‌ಲೈನ್‌ ಹಾದು ಹೋಗುವ ಗ್ರಾಮಗಳಿಗೆ ನೀರು ನೀಡಲಾಗುವುದು. ಬಲ್ಕ್ ಮೀಟರ್‌ ಕೂಡ ಅಳವಡಿಸಲಾಗುವುದು.

ಯೋಜನೆಯ ಸ್ವರೂಪ ಬದಲಾದ ಅನಂತರ ಪ್ರತಾಪಚಂದ್ರ ಶೆಟ್ಟಿ ಅವರು ಒಪ್ಪಿಗೆ ನೀಡಿದ್ದಾರೆ. ಅರ್ಜಿ ಸಮಿತಿ ಒಪ್ಪಿಗೆ ನೀಡಬೇಕಿದೆ. ಮೇ 31ಕ್ಕೆ ಅರ್ಜಿ ಸಮಿತಿ ಒಪ್ಪಿಗೆ ದೊರೆತು ಅನಂತರ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ.

· ಆಡಳಿತ ವರ್ಗ ನಿರ್ಲಕ್ಷಿಸಿದರೆ ಅದರ ವಿರುದ್ಧ ಕ್ರಮವೇನು?
-ಯಾವ ಅಧಿಕಾರಿ ನಿರ್ಲಕ್ಷ್ಯ, ತಪ್ಪು ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದು ಈ ಹಂತದಲ್ಲಿ ಕಷ್ಟ. ನಾನೂ ವಿಚಾರಿಸಿದ್ದೇನೆ. ಎಲ್ಲಿ ಕಡತ ಬಾಕಿಯಾಗಿತ್ತು ಎಂಬುದು ತಿಳಿದರೆ ಕ್ರಮ ಕೈಗೊಳ್ಳಬಹುದು.

· ನೀರು ಪೋಲು ಮಾಡುವವರಿಗೆ ಎಚ್ಚರಿಕೆಯೂ ಇಲ್ಲವೆ?
-ನೀರಿನ ಜಾಗೃತಿ ಜನರಲ್ಲಿ ಸ್ವಯಂ ಆಗಿ ಮೂಡಬೇಕು. ಇಷ್ಟರವರೆಗೆ ದಿನದ ಹೆಚ್ಚಿನ ಅವಧಿ ನೀರು ಸಿಗುತ್ತಿತ್ತು. ಆಗ ಯಥೇತ್ಛವಾಗಿ ಬಳಸುತ್ತಿದ್ದವರು ಈಗ ಕಡಿಮೆ ನೀರು ಸಿಗುವಾಗ ಉಳಿತಾಯವನ್ನು ಕಲಿತಿದ್ದಾರೆ. ನೀರನ್ನು ಪೋಲು ಮಾಡಬಾರದು ಎಂಬುದು ಜನರಿಗೆ ಗೊತ್ತಾಗುತ್ತಿದೆ.

·ಉಪಕ್ರಮಗಳತ್ತ ಗಮನ ನೀಡುತ್ತಿಲ್ಲವೆ?
-ಪ್ರತಿ ಕಟ್ಟಡಗಳಲ್ಲೂ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಬೇಕು ಎಂಬ ಕಡ್ಡಾಯ ನಿಯಮವಿದೆ. ಆದರೆ ಅದು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ನಗರಸಭೆಯಲ್ಲಿ ನಮ್ಮ (ಬಿಜೆಪಿ) ಅಧಿಕಾರ ಬಂದ ಅನಂತರ ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳುವೆ.

·ಒಳಚರಂಡಿ ಅವ್ಯವಸ್ಥೆಯಿಂದ ಬಾವಿಗಳು ಹಾಳಾಗಿವೆ…
-ಹೌದು. ಹಲವು ಬಾವಿಗಳು ಒಳಚರಂಡಿ ನೀರಿನಿಂದ ನಿರುಪಯೋಗ ವಾಗಿವೆ. ಒಳಚರಂಡಿ ವ್ಯವಸ್ಥೆ ಸರಿಪಡಿಸಲು 36 ಕೋ.ರೂ. ಮೀಸಲಿರಿಸಲಾಗಿದೆ. ಈ ಕಾಮಗಾರಿ ಕೂಡ ಕೈಗೆತ್ತಿಕೊಳ್ಳಲಾಗುವುದು.

-   ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ ಅಡಿಗೆ ಸಿಲುಕಿದ ಬೈಕ್; ಯಕ್ಷಗಾನ ಕಲಾವಿದ ಸ್ಥಳದಲ್ಲೇ ಮೃತ್ಯು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.