ವೀಣಾವರ್ಷ ವೈಭವ: 25 ವೀಣಾ ವಾದಕರಿಂದ ವಾದನ
Team Udayavani, Jul 3, 2017, 3:45 AM IST
ಉಡುಪಿ: ಶ್ರೀಕೃಷ್ಣಮಠ ಪರ್ಯಾಯ ಶ್ರೀಪೇಜಾವರ ಮಠದ ಆಶ್ರಯದಲ್ಲಿ ಮಣಿಪಾಲದ ಡಾ|ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ರವಿವಾರ ರಾಜಾಂಗಣದಲ್ಲಿ ಪ್ರಸ್ತುತ ಪಡಿಸಿದ ವೀಣಾ ವರ್ಷ ವೈಭವ, ಮಣಿಪಾಲದ ಕಲಾಸ್ಪಂದನದ 22ನೆಯ ವಾರ್ಷಿಕೋತ್ಸವದಲ್ಲಿ 25 ವೀಣಾ ವಾದಕರು ಏಕಕಾಲದಲ್ಲಿ ವೀಣೆಯನ್ನು ನುಡಿಸಿದರು.
16 ವರ್ಷ ಪ್ರಾಯದ ರಮಣ ಬಾಲಚಂದ್ರನ್ ವೀಣಾ ವಾದನ ಕಛೇರಿಯನ್ನು ನಡೆಸಿಕೊಟ್ಟನು. ಬೆಳಗ್ಗೆ ಶ್ರೀಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷೆ ದೇವಕಿ ಕೆ. ಭಟ್ ವಹಿಸಿದ್ದರು. ಸರೋಜಾ ಆರ್. ಆಚಾರ್, ಡಾ| ಅನುಸೂಯ ದೇವಿ, ಡಾ| ಬಾಲಚಂದ್ರ ಆಚಾರ್, ವೀಣಾ ಶಿಕ್ಷಕಿ ಪವನ ಆಚಾರ್ ಉಪಸ್ಥಿತರಿದ್ದರು. ಶ್ರೀವಿಶ್ವೇಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಎಂ.ರಾಮದಾಸ ಆಚಾರ್ಯ ಸಾಮಗನ ಮಾಡಿದರೆ ಪವನ ಆಚಾರ್ ವೀಣೆಯನ್ನು ಸಾಮಗಾನದ ರೀತಿ ನುಡಿಸಿದರು. ಅರ್ಜುನ್, ಡಾ|ಬಾಲಕೃಷ್ಣನ್, ವೈಭವ್ ಅವರು ವೀಣಾ, ವೇಣು, ವಯಲಿನ್ ನುಡಿಸಿದರು. ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ಶ್ರೀಕೃಷ್ಣನ ಆಗಮನ ಯಕ್ಷ ನೃತ್ಯಕ್ಕೆ ವೀಣಾವಾದನ ಪ್ರಯೋಗ ನಡೆಯಿತು. ಕಿಶೋರ ವೀಣೆಯಲ್ಲಿ ರಾಮಕೃಷ್ಣನ್ ಎಸ್., ಪಂಚವೀಣಾ ವಾದನವನ್ನು ವಿಪಂಚಿ ಬಳಗದ ಪವನ, ವೀನಾ ಉಪಾಧ್ಯ, ಸುಮಂಗಲಾ ಹೆಬ್ಟಾರ್, ಶಿಲ್ಪಾ ಜೋಶಿ, ಜಾಹ್ನವಿ ನುಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್