ರಸ್ತೆ ಕುಸಿತ: ಕರಾವಳಿಯಲ್ಲಿ ತರಕಾರಿ ಕೊರತೆ ?


Team Udayavani, Aug 23, 2018, 2:50 AM IST

vegetables-600.jpg

ಕುಂದಾಪುರ: ಶಿರಾಡಿ, ಸಂಪಾಜೆ ಘಾಟಿ ಬಂದ್‌ ಹಾಗೂ ಚಾರ್ಮಾಡಿಯಲ್ಲೂ ಕುಸಿತ ಭಯ ಕಾಡುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ತರಕಾರಿ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಂಭವವಿದೆ. ದರ ಏರಿಕೆ ಸಾಧ್ಯತೆ ಇದೆ. ಮೈಸೂರು,  ಬೆಂಗಳೂರು ಗ್ರಾಮಾಂತರ ಭಾಗದಿಂದ ತರಕಾರಿ ಸಾಗಣೆ ವಾಹನಗಳು ಚಾರ್ಮಾಡಿ ಘಾಟಿಯ ಮೂಲಕವೇ ಬರಬೇಕು. ಉಡುಪಿ ಹಾಗೂ ದ.ಕ. ಜಿಲ್ಲೆಗೆ ಚಿಕ್ಕಮಗಳೂರಿನಿಂದಲೂ ತರಕಾರಿ ಬರುತ್ತಿದ್ದು, ಚಾರ್ಮಾಡಿ ಘಾಟಿಯಲ್ಲೂ ವಾಹನ ಸಂಚಾರ ನಿಷೇದಿಸಿದರೆ ತರಕಾರಿ ಕೊರತೆ ಹೆಚ್ಚಲಿದೆ.

ಚಿಕ್ಕಮಗಳೂರು ಮೂಲ
ಶೇ. 80ರಷ್ಟು ತರಕಾರಿ ಚಿಕ್ಕಮಗಳೂರು ಭಾಗದ್ದಾಗಿದ್ದು, ಬೀನ್ಸ್‌, ಬೆಂಡೆಕಾಯಿ, ಕ್ಯಾರೆಟ್‌, ಟೊಮೇಟೊ, ಸೌತೆಕಾಯಿ, ನವಿಲುಕೋಸು, ಮುಳ್ಳುಸೌತೆ, ಚೀನಿಕಾಯಿ, ಮೂಲಂಗಿ, ಕುಂಬಳಕಾಯಿ, ಹೀರೆಕಾಯಿ, ಬದನೆಕಾಯಿ, ತೊಂಡೆಕಾಯಿ, ನೀರುಳ್ಳಿ, ಬಟಾಟೆ, ಕೋಸನ್ನು ಪೂರೈಸಲಾಗುತ್ತಿದೆ. ನ್ಯಾಮತಿ, ಬೆಂಗಳೂರು, ಹಾಸನ ಕಡೆಯಿಂದಲೂ ತರಕಾರಿ ಬರುತ್ತಿದೆ. ಚಾರ್ಮಾಡಿ ಸಂಚಾರ ನಿಷೇಧವಾಗಿದ್ದಾಗ ಕುದುರೆಮುಖ- ಎಸ್‌ಕೆ ಬಾರ್ಡರ್‌, ಜಯಪುರ ಶೃಂಗೇರಿ ಮುಖಾಂತರ ಚಿಕ್ಕಮಗಳೂರಿಗೆ ತರಕಾರಿ ವಾಹನಗಳು ಹೋಗುತ್ತಿ ದ್ದವು. ಈ ರಸ್ತೆಯೂ ಖಾತ್ರಿಯಿಲ್ಲದಾಗಿದೆ.

ಹುಣಸೂರಿನಿಂದ ಕಾಯಿಮೆಣಸು, ಶೇಂಗಾ, ಮರಗೆಣಸು; ವಿರಾಜಪೇಟೆಯಿಂದ ಸಿಹಿಗೆಣಸು ಬರುತ್ತಿತ್ತು. ಈಗ ಆ ಮಾರ್ಗವೂ ಇಲ್ಲ. ಮಂಗಳೂರಿಗೆ ಟೊಮೇಟೊ ಸರಬರಾಜಿನ ಮೂಲ ಕೋಲಾರ. ಬಳಿಕ ಚೆನ್ನರಾಯಪಟ್ಟಣ, ಕಬ್ಜಳ್ಳಿಯ ಸರದಿ. ಹಳೆಬೀಡಿನಿಂದಲೂ ಕೆಲವು ತರಕಾರಿ ಬರುತ್ತಿದ್ದು, ಅದಕ್ಕೂ ಚಾರ್ಮಾಡಿ ರಸ್ತೆಯೇ ಆಧಾರ. ಚಾರ್ಮಾಡಿಯಲ್ಲಿ ಬೆಳ್ತಂಗಡಿ ಕಡೆಯಿಂದ ವಾಹನಗಳನ್ನು ಬಿಡದಿದ್ದಾಗ ದುಪ್ಪಟ್ಟು ಬಾಡಿಗೆ ತೆತ್ತು ಚಿಕ್ಕಮಗಳೂರಿನ ವಾಹನಗಳಲ್ಲಿ ತರಕಾರಿ ಹಾಕಿದ್ದೂ ಇದೆ ಎನ್ನುತ್ತಾರೆ ಉಜಿರೆಯ ತರಕಾರಿ ವ್ಯಾಪಾರಿ ಭರತ್‌ ಜೈನ್‌.

ಹೊಡೆತ
ಚಾರ್ಮಾಡಿ ಬಿಟ್ಟರೆ ನ್ಯಾಮತಿಯಿಂದ ಆಗುಂಬೆ ಮೂಲಕ ತರಕಾರಿ ಬರುತ್ತದೆ. ಆದರೆ ಅಲಸಂಡೆ, ಕ್ಯಾಬೇಜ್‌, ಬೀಟ್‌ ರೂಟ್‌, ಟೊಮೇಟೊ ಮಾತ್ರ. ಉಳಿದವುಗಳ ಕೊರತೆ ಸಂಭವಿಸಲಿದೆ ಎಂಬುದು ವ್ಯಾಪಾರಿಗಳ ಆತಂಕ.

ಉಡುಪಿಗೆ
ಉಡುಪಿ ಮಾರುಕಟ್ಟೆಗೆ ಆಗುಂಬೆ ಮೂಲಕ ಶಿವಮೊಗ್ಗ, ನ್ಯಾಮತಿ, ಚಿಕ್ಕಮಗಳೂರಿನಿಂದ ತರಕಾರಿ ತರಲಾಗುತ್ತದೆ. ಕುಂದಾಪುರ ಮೂಲಕ ಪುಣೆ ಯಿಂದ ನೀರುಳ್ಳಿ, ಬಟಾಟೆ, ಬೆಳಗಾವಿಯಿಂದ ಬೀನ್ಸ್‌, ಬೆಂಡೆಕಾಯಿ, ಶೇಂಗಾ, ಕ್ಯಾಪ್ಸಿಕಮ್‌, ನುಗ್ಗೆ, ತೊಂಡೆಕಾಯಿ ಬರುತ್ತವೆ.

ಕುಂದಾಪುರ ಮಾತ್ರ
ಚಾರ್ಮಾಡಿ ರಸ್ತೆ ಕೈ ಕೊಟ್ಟರೆ ತರಕಾರಿ ಸರಬರಾಜಿಗೆ ಆಧಾರ ಕುಂದಾಪುರ ರಸ್ತೆ, ಆಗುಂಬೆ ಘಾಟಿ. ಘಾಟಿ ರಸ್ತೆ ಹದಗೆಟ್ಟಾಗ, ಸಂಚಾರ ನಿರ್ಬಂಧಕ್ಕೆ ಒಳಗಾದರೆ ವ್ಯಾಪಾರಿ ಹಾಗೂ ಗ್ರಾಹಕರಿಗೆ ಸಮಸ್ಯೆಯಾಗಲಿದೆ. ಚಿಕ್ಕಮಗಳೂರೇ ಪ್ರಧಾನ ಕೇಂದ್ರವಾದ ಕಾರಣ ಏಜೆಂಟರು ಹೇಳಿದ ದರ ತೆತ್ತು ವ್ಯಾಪಾರಸ್ಥರು ಖರೀದಿಸುವ ಸ್ಥಿತಿ ಇದೆ. ನವಂಬರ್‌ ಬಳಿಕ ಸ್ಥಳೀಯವಾಗಿ ತೊಂಡೆ, ಅಲಸಂಡೆ, ಕುಂಬಳ, ಬದನೆ ಇತ್ಯಾದಿ ಸಿಗುತ್ತವೆ. ಚಿಕ್ಕಮಗಳೂರು ತರಕಾರಿಯ ಮೇಲಿನ ಅವಲಂಬನೆ ಕೊಂಚ ಕಡಿಮೆಯಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು. 

ಹೇಳಿದ ದರ ಕೊಡಬೇಕಿದೆ
ಬೆಳಗಾವಿ, ನ್ಯಾಮತಿ ಕಡೆಯಿಂದ ಬರುವ ತರಕಾರಿ ಕಡಿಮೆ. ಚಿಕ್ಕಮಗಳೂರು ಕಡೆಯದ್ದೇ ಹೆಚ್ಚು. ಆದ್ದರಿಂದ ಅಲ್ಲಿಂದ ತರುವವರು ಹೇಳುವ ದರ ಕೊಟ್ಟು ಖರೀದಿಸುತ್ತಿದ್ದೇವೆ. ನವೆಂಬರ್‌ ವರೆಗೂ ಅವರ ಅವಲಂಬನೆ ಇರುತ್ತದೆ.
– ಯಶವಂತ್‌ ಪಾಂಡೆ, ಕುಂದಾಪುರ, ತರಕಾರಿ ವ್ಯಾಪಾರಸ್ಥರು.

ಚಿಕ್ಕಮಗಳೂರಿನಿಂದ ದೂರದ ರಸ್ತೆಗಳ ಮೂಲಕ ಸಾಗಿಸಬೇಕಾಗುತ್ತದೆ. ಹಾಗಾಗಿ ದರ ಏರಿಕೆ ಅನಿವಾರ್ಯವಾಗಿದೆ. ತರಕಾರಿ ವಾಹನಗಳಿಗೂ ಹಾಲಿನ ವಾಹನದಂತೆ ವಿನಾಯಿತಿ ದೊರೆಯಬೇಕು.
– ಬಸವರಾಜ, ಹೋಲ್‌ ಸೇಲ್‌ ಮಾರಾಟಗಾರರು, ಚಿಕ್ಕಮಗಳೂರು

— ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ ಅಡಿಗೆ ಸಿಲುಕಿದ ಬೈಕ್; ಯಕ್ಷಗಾನ ಕಲಾವಿದ ಸ್ಥಳದಲ್ಲೇ ಮೃತ್ಯು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wqewqewq

Doping: ಶಾಲು ಚೌಧರಿ ದೋಷಮುಕ್ತ

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.