ಚಿಕಿತ್ಸೆ ಪಡೆಯದ ಮನೋರೋಗಿಗಳಿಂದ ಮಾತ್ರ ಕುಕೃತ್ಯ ಸಾಧ್ಯ: ಡಾ|ಪಿ.ವಿ.ಭಂಡಾರಿ ಅಭಿಮತ

ಸಮಾಜವೂ ಇಂಥ ಸಂದರ್ಭಗಳಲ್ಲಿ ಸೂಕ್ಷ್ಮವಾಗಿ ವರ್ತಿಸಬೇಕು

Team Udayavani, Jan 23, 2020, 6:58 AM IST

led-35

ಉಡುಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬು ಇರಿಸಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂಬ ಸುದ್ದಿ ಎಲ್ಲೆಡೆ ಬಿತ್ತರಗೊಳ್ಳುತ್ತಿದೆ. ಇಂತಹ ಕೃತ್ಯಗಳನ್ನು ಎಸಗುವವರು ಒಂದೋ ಉದ್ದೇಶಪೂರ್ವಕವಾಗಿ ಮಾಡಿರಬೇಕು ಇಲ್ಲವೆ ಮಾನಸಿಕ ಸ್ತಿಮಿತವನ್ನು ಕಳೆದು ಕೊಂಡಿರಬೇಕು. ಉದ್ದೇಶ ಪೂರ್ವಕವಾಗಿ ಮಾಡುವವರನ್ನು ಉಗ್ರಗಾಮಿಗಳು, ವಿಘ್ನ ಸಂತೋಷಿಗಳು, ಕಿಡಿಗೇಡಿಗಳು ಎನ್ನುತ್ತೇವೆ. ಮೂರನೆಯ ವರ್ಗವಿಲ್ಲ. ಮಂಗಳೂರಿನ ಪ್ರಕರಣದಲ್ಲಿ ಮಾನಸಿಕ ಅಸ್ವಸ್ಥ ಎಂಬ ಸುದ್ದಿಯೇ ಪ್ರಮುಖ ಸ್ಥಾನ ಪಡೆಯುತ್ತಿದೆ. ಈ ಬಗ್ಗೆ ಹಾಗೂ ಇಂಥ ಸಂದರ್ಭದಲ್ಲಿ ಸಮಾಜವೂ ಸೂಕ್ಷ್ಮ ಸಂವೇದನೆಯಿಂದ ವರ್ತಿಸಬೇಕೆಂಬುದರ ಕುರಿತು ಮನಃಶಾಸ್ತ್ರಜ್ಞ ಡಾ|ಪಿ.ವಿ.ಭಂಡಾರಿಯವರು “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

 ಬಾಂಬು ಪ್ರಕರಣದ ಆರೋಪಿ ಮಾನಸಿಕ ಅಸ್ವಸ್ಥ ಎಂದು ಪ್ರಚಾರ ನಡೆಯುತ್ತಿದೆ. ಅಸ್ವಸ್ಥರು ಹೀಗೆ ಮಾಡುವ ಸಾಧ್ಯತೆ ಇದೆಯೆ?
ಹೀಗೆ ಪ್ರಚಾರ ನಡೆಯುತ್ತಿದೆ. ಮಾನಸಿಕ ಕಾಯಿಲೆ ಇದ್ದು ಚಿಕಿತ್ಸೆ ಪಡೆಯದೆ ಇದ್ದವರು ಮಾತ್ರ ಹೀಗೆ ಮಾಡಬಹುದೆ ವಿನಾ ಅದು ಖಚಿತಗೊಳಿಸಿಕೊಳ್ಳದೇ ನೇರವಾಗಿ ಮಾನಸಿಕ ಅಸ್ವಸ್ಥರು ಎಂದು ಘೋಷಿಸುವುದು ಸರಿಯಲ್ಲ. ಮಾನಸಿಕ ಕಾಯಿಲೆ ಇದ್ದು ಅವರಿಗೆ ಅ ಕುರಿತು ಗೊತ್ತಿಲ್ಲದಿದ್ದರೆ ಅಥವ ಬೇರೆ ಕಾರಣಗಳಿಂದ ಚಿಕಿತ್ಸೆ ಪಡೆಯದೆ ಇದ್ದಾಗ ಹೀಗೆ ಮಾಡಬಹುದು. ಇಲ್ಲವಾದರೆ ಮಾನಸಿಕ ರೋಗಿಗಳೆಲ್ಲ ಇಂತಹ ಕೃತ್ಯಗಳನ್ನು ಎಸಗುತ್ತಾರೆಂಬ ತಪ್ಪು ತಿಳಿವಳಿಕೆ ಸಮಾಜದಲ್ಲಿ ಉಂಟಾಗುತ್ತದೆ. ಈ ಬಗ್ಗೆ ಎಲ್ಲರೂ ಎಚ್ಚರವಹಿಸಬೇಕು.

 ಸಂಶಯಿತ ವ್ಯಕ್ತಿ ಉನ್ನತ ಶಿಕ್ಷಣ ಪಡೆದವ ಎಂದು ಹೇಳಲಾಗುತ್ತಿದೆ. ಇದು ಶಿಕ್ಷಿತರು, ಅಶಿಕ್ಷಿತರಿಬ್ಬರಿಗೂ ಅನ್ವಯವೆ?
ಮಾನಸಿಕ ಕಾಯಿಲೆ ಶಿಕ್ಷಿತರಿಗೂ ಬರಬಹುದು, ಅಶಿಕ್ಷಿತರಿಗೂ ಬರಬಹುದು. ಯಾವುದೇ ಒಂದು ಪ್ರಕರಣ ನಡೆದಾಗ ಸಂಶಯಿತ ಆರೋಪಿಯ ಸಮಸ್ಯೆಗಳೇನು? ಅವರ ಹಿಂದಿನ ಜೀವನ ಚರಿತ್ರೆ ಏನು? ಕುಟುಂಬದ ಇತಿಹಾಸವೇನು ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕಬೇಕಾಗುತ್ತದೆ. ಆಮೇಲೆ ಒಂದು ತೀರ್ಮಾನಕ್ಕೆ ಬರಬೇಕು.

 ಉನ್ನತ ಶಿಕ್ಷಣ ಪಡೆದೂ ಅದಕ್ಕೆ ತಕ್ಕುದಲ್ಲದ ಕೆಲಸಕ್ಕೆ ಸೇರುವ ಪ್ರವೃತ್ತಿ ಏಕೆ ಉಂಟಾಗುತ್ತದೆ?
ಎಂಜಿನಿಯರಿಂಗ್‌ ಕಲಿತವ ಸೆಕ್ಯುರಿಟಿ ಗಾರ್ಡ್‌ ಆಗಿದ್ದನೆಂದು ವರದಿಯನ್ನು ಓದಿದ್ದೇನೆ. ಇದನ್ನು ಸೋಶಿಯಲ್‌ ಶಿಫ್ಟ್ ಅಥವಾ ಗ್ರಿಫ್ಟ್ ಎನ್ನುತ್ತೇವೆ. ಎಷ್ಟೋ ಕಡೆ ಇಂತಹ ಉದಾಹರಣೆಗಳು ಕಂಡುಬರುತ್ತವೆ. ಮಾನಸಿಕ ಕಾಯಿಲೆಯೇ ಇದಕ್ಕೆ ಕಾರಣ. ಇದರಿಂದ ಆತನಿಗೆ ಶೈಕ್ಷಣಿಕ ಮಟ್ಟಕ್ಕೆ ಸರಿಯಾದ ಉದ್ಯೋಗ (ಸಾಮಾಜಿಕ / ಆರ್ಥಿಕ) ಲಭಿಸಿರುವುದಿಲ್ಲ. ಇವನ ಬುದ್ಧಿಶಕ್ತಿ ಕಡಿಮೆಯಾಗಿಯೋ, ಹಣಕಾಸು ಸಮಸ್ಯೆಯಿಂದಲೋ ಹೀಗೆ ಮಾಡಿರಲೂ ಬಹುದು.

 ಮಾನಸಿಕ ಅಸ್ವಸ್ಥನೆಂದು ಪ್ರಚಾರ ಮಾಡುವುದು ಸರಿಯೇ?
ಅಪರಾಧ ಪ್ರಕರಣಗಳಲ್ಲಿ ಮಾಧ್ಯಮ ದವರ ಹೊಣೆ ದೊಡ್ಡದಿದೆ. ಹೀಗೆ ಹೇಳುವುದು ಮಾನವ ಹಕ್ಕುಗಳ ಉಲ್ಲಂಘನೆಯೂ ಹೌದು. ಊಹಾಪೋಹಗಳನ್ನು ಹರಿಬಿಡುವುದು ಜಾಸ್ತಿಯಾಗುತ್ತಿದೆ. “ಮಾನಸಿಕ ಅಸ್ವಸ್ಥನಿರ ಬಹುದೆ?’ ಎಂದು ಬರೆಯಬಹುದು. ತಂದೆ ತಾಯಿಗಳು, ಅಣ್ಣ ತಮ್ಮಂದಿರನ್ನು ಅನಗತ್ಯವಾಗಿ ಎಳೆದು ತರುವುದು ಸರಿಯಲ್ಲ. ಅವರ ಸಮಸ್ಯೆಗಳು ನಮಗೆ ಗೊತ್ತಿಲ್ಲ. ಅವರು ನಾಳೆ ಇದೇ ಸಮಾಜದಲ್ಲಿ ಬದುಕುವುದು ಬೇಡವೆ? ಅವರೆಲ್ಲರನ್ನೂ ಟಾರ್ಗೆಟ್‌ ಮಾಡಿದಂತಾಗುತ್ತದೆ. ಅವರೂ ಆವರ ಮಾಡದ ತಪ್ಪಿಗೆ ಖನ್ನತೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವು ನೇತ್ಯಾತ್ಮಕವಾಗಿ ಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ಬಾಲಿವುಡ್‌ ಸಿನೆಮಾಗಳಲ್ಲಿ ಒಬ್ಬ ಹುಚ್ಚನಿಂದ ಶೂಟ್‌ ಮಾಡಿಸುವುದು,
ಮಾನಸಿಕ ಅಸ್ವಸ್ಥನೆಂದು ತೋರಿಸಿದರೆ ಶಿಕ್ಷೆ ಪ್ರಮಾಣ ಕಡಿಮೆಯಾಗುತ್ತದೆ ಅಂತ ತೋರಿಸುವುದೂ ಇದೆ. ಇಂಥವೂ ಸರಿಯಲ್ಲ.

ಇವನ ಸಮಸ್ಯೆ ಏನಿರಬಹುದು?
ಯಾರೋ ತನಗೆ ತೊಂದರೆ ಕೊಡು ತ್ತಿದ್ದಾರೆ ಎಂಬ ಸಂಶಯ ಪ್ರವೃತ್ತಿ ಹೆದರಿಕೆ ಯನ್ನು ಉಂಟು ಮಾಡುತ್ತದೆ. ಇದನ್ನು ಪ್ಯಾರನಾಯ್ಡ ಇಲ್‌ನೆಸ್‌ ಎನ್ನುತ್ತೇವೆ. ಈ ಆರೋಪಿಯಲ್ಲಿ ಉದ್ಯೋಗದ ಸಮಸ್ಯೆ ಕಾಣುತ್ತದೆ ಅಥವಾ ಉದ್ಯೋಗವನ್ನು ಆಗಾಗ್ಗೆ ಬದಲಾಯಿಸುವುದು ಕಂಡುಬರುತ್ತದೆ. ವಾಸ್ತವ ಲೋಕದಲ್ಲಿ ಇರದೆ ತಪ್ಪು ಭಾವಿಸಿಕೊಳ್ಳುವ ಇಚ್ಛಿತ ಚಿತ್ತ ವಿಕಲ ರೋಗ (ಸ್ಕಿಜೋ ಫ್ರೆನಿಯ), ಮೇನಿಯ (ವಾಸ್ತವಕ್ಕೆ ದೂರವಾದ ದೊಡ್ಡ ದೊಡ್ಡ ಕಲ್ಪನೆಗಳನ್ನು ಹರಿಬಿಡು ವುದು), ಮದ್ಯ-ಗಾಂಜಾ ಇತ್ಯಾದಿಗಳ ಸೇವನೆ, ಯಾವುದೋ ಸಂದರ್ಭ ತಲೆಗೆ ಪೆಟ್ಟಾಗಿ ಮಿದುಳಿನ ಲಲಾಟ ಭಾಗಕ್ಕೆ ತೊಂದರೆಯಾಗಿರುವುದು, ಫಿಟ್ಸ್‌, ಜನ್ಮದಾರಭ್ಯದಿಂದ ಬಂದ ವ್ಯಕ್ತಿತ್ವ ದೋಷ (ಚಿಕ್ಕಪುಟ್ಟ ವಿಷಯಕ್ಕೆ ಭಾರೀ ಜಗಳ ಮಾಡುವವರು) ಇತ್ಯಾದಿಗಳು ಕುಕೃತ್ಯಗಳಿಗೆ ಕಾರಣವಾಗಬಹುದು. ಇವರಿಗೆ ನಿಜ ಮತ್ತು ಕಲ್ಪನೆಯ ವ್ಯತ್ಯಾಸ ತಿಳಿಯದು. ಇವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಬೇಕು. ಚಿಕಿತ್ಸೆ ಪಡೆದುಕೊಂಡಾಗ ಆತನಿಂದಾಗುವ ಕುಕೃತ್ಯಗಳ ನಡವಳಿಕೆ ಕಡಿಮೆಯಾಗುತ್ತದೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.