“ಮುಕ್ತಿದಾತ’ ವಿಶು ಶೆಟ್ಟಿ ಅವರಿಂದ ಶತ ಶವ ಸಂಸ್ಕಾರ


Team Udayavani, Apr 23, 2019, 6:47 AM IST

vishu

ಉಡುಪಿ: ಮನೆಯಲ್ಲಿ ಸಾವು ಸಂಭವಿಸಿದರೆ ಭಯದಿಂದ ಮಾರುದ್ದ ನಿಲ್ಲುವ ಜನರಿರುವ ಕಾಲಘಟ್ಟದಲ್ಲಿ ಅನಾಥ ಶವಗಳ ಅಂತ್ಯ ಸಂಸ್ಕಾರ ಪೂರೈಸುವ ಎದೆಗಾರಿಕೆ ಎಲ್ಲರಿಗೂ ಬರುವುದಿಲ್ಲ. ಆದರೆ ಇದಕ್ಕೆ ತದ್ವಿರುದ್ಧವೋ ಎಂಬಂತೆ ಉಡುಪಿ ಅಂಬಲಪಾಡಿಯ ಸಮಾಜ ಸೇವಕ ವಿಶು ಶೆಟ್ಟಿ ಅವರು ಕಳೆದ 35 ವರ್ಷಗಳಿಂದ ಇದುವರೆಗೆ ನೂರು ಅನಾಥ ಶವಗಳಿಗೆ ಮುಕ್ತಿ ನೀಡುವ ಮೂಲಕ ಉಡುಪಿ ಪರಿಸರದಲ್ಲಿ “ಮುಕ್ತಿದಾತ’ ಎನ್ನುವ ಬಿರುದಿಗೆ ಪಾತ್ರರಾಗಿದ್ದಾರೆ. ಬಾಲ್ಯದಿಂದಲೇ ಸಮಾಜ ಸೇವೆ ಶೆಟ್ಟರು ತಮ್ಮ ಚಿಕ್ಕಂದಿನಲ್ಲಿ ಊರಿನಲ್ಲಿ ಯಾರಾದರೂ ಮೃತಪಟ್ಟರೆ, ಅವರ ಶವ ಹೊತ್ತುಕೊಂಡು ಹೋಗುವಾಗ ಶವದ ಹಿಂದೆಯೇ ತೆರಳಿ ಮನೆಯವರು ಪಡುವ ನೋವು-ವೇದನೆಯನ್ನು ಕುತೂಹಲದಿಂದ ಗಮನಿಸುತ್ತಿದ್ದರು, ಮನದಲ್ಲಿಯೇ ಮರುಗುತ್ತಿದ್ದರು. 6ನೇ ತರಗತಿಯಲ್ಲಿರುವಾಗಲೇ ರಾ.ಹೆ.ಯಲ್ಲಿ ಅಪಘಾತವೊಂದು ಸಂಭವಿಸಿದಾಗ ಯುವಕನನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಅವರ ಸಮಾಜ ಸೇವಾ ಕಾರ್ಯ ಆರಂಭಗೊಂಡಿತು. ಶೆಟ್ಟರು ಪಿಯುಸಿ ಯಲ್ಲಿರುವಾಗ ಪ್ರಸಿದ್ಧ ಭಾಗವತ ಕಾಳಿಂಗ ನಾವಡರನ್ನು ಆಸ್ಪತ್ರೆಗೆ ದಾಖಲಿಸಿದರು. ಕಾಲೇಜಿಗೆ ತೆರಳುತ್ತಿದ್ದ ಸಂದರ್ಭ ಶೆಟ್ಟಿ ಅವರಲ್ಲಿ ಖರ್ಚಿಗೆ ಹಣವಿರಲಿಲ್ಲ. ಆಗ ಆ್ಯಂಬುಲೆನ್ಸ್‌ ಸೌಕರ್ಯವಿರಲಿಲ್ಲ (ಶವ ಹೊತ್ತುಕೊಂಡು ಸಾಗಬೇಕಿತ್ತು), ಜನಸಂಪರ್ಕವೂ ಇರಲಿಲ್ಲ, ಇಲಾಖೆಗಳಿಂದ ಸಹಕಾರವಿರಲಿಲ್ಲ ಅಂತಹ ಕಾಲದಲ್ಲಿಯೂ ಸಾವಿರಾರು ಮಂದಿಯ ಜೀವ ರಕ್ಷಣಾ ಕಾಯಕ ಮಾಡಿರುವುದು ಅವರ ದೊಡ್ಡ ಗುಣ.

ಕಾಸಿಲ್ಲದಾಗಲೂ ಶಿವನ ಬಿಟ್ಟಿ !
ಕಾಲೇಜಿಗೆ ಹೋಗುತ್ತಿರುವಾಗ ಅಪರಿಚಿತರ ಶವ ಸಂಸ್ಕಾರ ಮಾಡುವುದಕ್ಕೆ ಹಣವಿಲ್ಲದೆ, ಜೇಬಿನಲ್ಲಿದ್ದಷ್ಟು ಹಣವನ್ನು ಬೀಡಿನಗುಡ್ಡೆಯ ಸ್ಮಶಾನದಲ್ಲಿ ವನಜಕ್ಕನಿಗೆ ಕೊಟ್ಟು ಶವ ಸಂಸ್ಕಾರ ನಡೆಸುತ್ತಿದ್ದರು. ಅಂದು ವನಜಕ್ಕನವರು ಮಾಡಿದ ಸಹಕಾರವನ್ನು ಅವರು ಇಂದಿಗೂ ಸ್ಮರಿಸುತ್ತಾರೆ. ಈಗಾಗಲೇ ಉತ್ತರ ಪ್ರದೇಶ, ಬಿಹಾರ, ಕೇರಳ, ಉತ್ತರ ಕರ್ನಾಟಕ ಭಾಗದ 25 ಶವಗಳನ್ನು ಸಂಬಂಧಪಟ್ಟವರನ್ನು ಹುಡುಕಿ ಅವರಿಗೆ ಒಪ್ಪಿಸಿದ್ದಾರೆ. ವಾರಸುದಾರರಿಲ್ಲದ ಶವಗಳ ಸಂಸ್ಕಾರಕ್ಕೆ ತಗಲುವ ಸಂಪೂರ್ಣ ಖರ್ಚು ವೆಚ್ಚಗಳನ್ನು ಸ್ವತಃ ಅವರೇ ಭರಿಸುತ್ತಾರೆ.

ಕರೆ,ಮಾಹಿತಿಗೆ ಶೀಘ್ರ ಸ್ಪಂದನೆ
ಹುಟ್ಟಿನಿಂದಲೂ ಕಷ್ಟದಿಂದಲೇ ಬೆಳೆದ ಶೆಟ್ಟಿ ಅವರು ಕಷ್ಟದಲ್ಲಿರುವವನ್ನು ಕಂಡಾಗ ಮನ ಕರಗಿ ಅವರಿಗೆ ಕೈಲಾದಷ್ಟು ಸಹಾಯ ಮಾಡಬೇಕೆನ್ನುವ ಇರಾದೆ ಹೊಂದಿದ್ದಾರೆ. ಡಿಪ್ಲೋಮಾ ಮೆಕ್ಯಾನಿಕಲ್‌ ಎಂಜಿನಿಯರ್‌ ಪದವೀಧರರಾದ ಅವರಿಗೀಗ 47 ವರ್ಷ. ಕಷ್ಟದಲ್ಲಿರುವವರು, ಅಸಹಾಯಕರಲ್ಲದೆ ಇತರರ ಶವ ಸಂಸ್ಕಾರಕ್ಕೆ ಇಂದಿಗೂ ತೆರಳಿಲ್ಲ. ಅವರು ಜೀವನೋಪಾಯಕ್ಕೆ ರೂಫಿಂಗ್‌ ವರ್ಕ್ಸ್ (ವಿವಿಧ ಬಗೆಯ ಕಬ್ಬಿಣದ ಮಾಡಿನ ಕೆಲಸ) ಮಾಡುತ್ತಾ, ಕರೆಯ ಮಾಹಿತಿ ಸಿಕ್ಕೊಡನೆ ಹಗಲು ರಾತ್ರಿಯೆನ್ನದೇ ಸ್ಥಳಕ್ಕೆ ಧಾವಿಸಿ ಕಷ್ಟಕ್ಕೆ ಸ್ಪಂದಿಸುತ್ತಾರೆ.

13 ಸಾವಿರಕ್ಕೂ ಹೆಚ್ಚು ಜನರ ರಕ್ಷಣೆ
ಮಾನಸಿಕ ಅಸ್ವಸ್ಥರಲ್ಲಿ ಯುವತಿಯರು, ಮಹಿಳೆಯರೇ ಹೆಚ್ಚಿರುತ್ತಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿ ಅವರು ಗುಣಮುಖರಾದಾದ ಅದಮ್ಯ ಸಂತೋಷವಾಗುತ್ತದೆ ಎಂದು ಶೆಟ್ಟರು ಹೇಳುತ್ತಾರೆ. ಅವರು ಇದುವರೆಗೆ 400ಕ್ಕೂ ಅಧಿಕ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಹಾಜರಾಗಿದ್ದಾರೆ. 13 ಸಾವಿರಕ್ಕೂ ಹೆಚ್ಚು ರೋಗಿಗಳು, ಅಸಹಾಯಕರು, ಕಾಯಿಲೆಗೆ ತುತ್ತಾದವರು, ಮಾನಸಿಕ ಅಸ್ವಸ್ಥರು, ಹಲ್ಲೆಗೊಳಗಾದವರನ್ನು ರಕ್ಷಿಸಿದ್ದಲ್ಲದೆ, 250ಕ್ಕೂ ಹೆಚ್ಚು ಜನರನ್ನು ಖಾಸಗಿ/ಸರಕಾರಿ ಅನಾಥಾಶ್ರಮ/ವೃದ್ಧಾಶ್ರಮ, ಮಹಿಳಾ ನಿಲಯ, ಪುನರ್ವಸತಿ ಕೇಂದ್ರ, ಮಕ್ಕಳ ರಕ್ಷಣಾ ಘಟಕಕ್ಕೆ ಶೇ. 50ರಷ್ಟು ಸ್ವತಃ ಖರ್ಚು ಭರಿಸಿ ಸೇರಿಸಿದ್ದಾರೆ.

ಜಾತಿ,ಧರ್ಮಾನುಸಾರ ಸಂಸ್ಕಾರ
ಶವ ಸಂಸ್ಕಾರಕ್ಕೆ ಜೆಸಿಬಿ, ಆ್ಯಂಬುಲೆನ್ಸ್‌, ಪೊಲೀಸ್‌ ಇಲಾಖೆ, ಶ್ಮಶಾನ ನಿರ್ವಹಣೆಯ ವನಜಕ್ಕ, ಸಮಾಜ ಸೇವಕ ತಾರನಾಥ ಮೇಸ್ತ ಅವರ ಸಹಕಾರವನ್ನು ಶೆಟ್ಟಿಯವರು ಸ್ಮರಿಸುತ್ತಾರೆ. ಮೃತಪಟ್ಟ ಅಪರಿಚಿತ ವ್ಯಕ್ತಿಯು ನಿರ್ದಿಷ್ಟ ಜಾತಿ ಅಥವಾ ಧರ್ಮದವರೆಂದು ಗೊತ್ತಾದಲ್ಲಿ, ಜಾತಿ, ಧರ್ಮಕ್ಕೆ ಸಂಬಂಧಪಟ್ಟವರ ಸಹಾಯ ಪಡೆದು ಅಂತಿಮ ಸಂಸ್ಕಾರದ ವಿಧಿವಿಧಾನ ನೆರವೇರಿಸಿದ ಸಾಕಷ್ಟು ಪ್ರಕರಣಗಳಿವೆ.

*ಎಸ್.ಜಿ.ನಾಯ್ಕ್ ಸಿದ್ದಾಪುರ

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.