ಅಧ್ಯಯನ ತಂಡ ಭೇಟಿ:ಮಾಹಿತಿ-ಮಾರ್ಗದರ್ಶನ
Team Udayavani, Mar 12, 2019, 1:00 AM IST
ಕಟಪಾಡಿ: ಮಟ್ಟುಗುಳ್ಳ ಬೆಳೆಗಾರರ ಸಂಘಕ್ಕೆ ಭಾರತೀಯ ತೋಟಗಾರಿಕಾ ಸಂಶೋಧನಾ ಕೆಂದ್ರ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಕೇಂದ್ರಗಳ ಸಂಶೋಧಕರು, ವೈದ್ಯರು ಮಟ್ಟುಗುಳ್ಳದ ಬೆಳೆಯ ಅಧ್ಯಯನಕ್ಕಾಗಿ ಭೇಟಿ ನೀಡಿ ಮಾಹಿತಿ ಕಲೆ ಹಾಕಿ, ಮಾರ್ಗದರ್ಶನ ನೀಡಿದರು.
ಮಟ್ಟುಗುಳ್ಳ ಬೆಳೆಯುವ ರೈತರಿಗೆ ಮಟ್ಟುಗುಳ್ಳಕ್ಕೆ ತಗಲುವ ಕೀಟ ಮತ್ತು ರೋಗಬಾಧೆಯ ನಿವಾರಣೆಯ ಬಗ್ಗೆ ಕೊರಗ ಸುವರ್ಣ ಅವರ ಗದ್ದೆಯ ಭಾಗದಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ಸಾವಯವ ರೀತಿಯಲ್ಲಿ ಈ ಕೀಟ ಬಾಧೆಯನ್ನು ನಿಯಂತ್ರಿಸುವ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಮಟ್ಟುಗುಳ್ಳ ಬೆಳೆಗಾರರಿಗೆ ಜಾಗೃತಿ ಮೂಡಿಸಲಾಯಿತು.
ಭಾರತೀಯ ಕೃಷಿ ಅನುಸಂಧಾನ ಪರಿಷತ್ ಡಾ|ಡಿ.ಕಲೈವನನ್, ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ ಡಾ|ಪಿ.ವಿ. ರೆಡ್ಡಿ, ಬ್ರಹ್ಮಾವರ ಕೆ.ವಿ.ಕೆ ವಿಜ್ಞಾನಿ ವಿಕ್ರಂ, ಮಟ್ಟುಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ದಯಾನಂದ ಬಂಗೇರ, ಕಾರ್ಯದರ್ಶಿ ನಾಗರಾಜ, ಕೋಶಾಧಿಕಾರಿ ರವಿ ಶೇರಿಗಾರ್, ಪ್ರಬಂಧಕ ಲಕ್ಷ್ಮಣ್ ಮಟ್ಟು, ಮಟ್ಟುಗುಳ್ಳ ಬೆಳೆಗಾರರು, ಸುಮಾರು 40ರಷ್ಟು ವೈದ್ಯರ ತಂಡವು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್