ಮತ ಎಣಿಕೆ: ಉಡುಪಿಯಲ್ಲಿ ಸಂಚಾರ ಬದಲು
Team Udayavani, May 22, 2019, 10:49 AM IST
ಉಡುಪಿ: ಬ್ರಹ್ಮಗಿರಿ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆಯಲ್ಲಿ ಮತ ಎಣಿಕೆ ನಡೆಯಲಿರುವುದರಿಂದ ಮೇ 23ರಂದು ಬೆಳಗ್ಗೆ 5ರಿಂದ ಮತ ಎಣಿಕೆ ಮುಗಿಯುವ ವರೆಗೆ ಅಜ್ಜರಕಾಡು-ಬ್ರಹ್ಮಗಿರಿ ಮತ್ತು ಪಕ್ಕದ ರಸ್ತೆಯಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.
ಬ್ರಹ್ಮಗಿರಿ ಜಂಕ್ಷನ್ನಿಂದ ಅಜ್ಜರಕಾಡು ಎಲ್ಐಸಿ ಕಚೇರಿವರೆಗೆ ಏಕಮುಖ ಸಂಚಾರ ವ್ಯವಸ್ಥೆ ನಿಷೇಧಿಸಿ ದ್ವಿಚಕ್ರ ಮತ್ತು ಲಘು ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ರಸ್ತೆಯ ಇನ್ನೊಂದು ಬದಿ ದ್ವಿಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ.
ಅಜ್ಜರಕಾಡು ಲಾಲ್ಬಹದ್ದೂರ್ ಶಾಸ್ತ್ರೀ ರಸ್ತೆಯಿಂದ ಎಲ್ಐಸಿ ಕ್ರಾಸ್ವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಮತ ಎಣಿಕೆ ಸಿಬಂದಿ, ಏಜೆಂಟ್, ಅಭ್ಯರ್ಥಿಗಳು ಮತ್ತು ಮಾಧ್ಯಮದವರ ವಾಹನಗಳಿಗೆ, ಸುದರ್ಶನ್ ಅಪಾರ್ಟ್ಮೆಂಟ್ ಮತ್ತು ಅದರ ಎದುರು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸೈಂಟ್ ಸಿಸಿಲೀಸ್ ಕಾನ್ವೆಂಟ್ ರಸ್ತೆ – ಬ್ರಹ್ಮಗಿರಿ ಮಾರ್ಗವಾಗಿ ಜಗನ್ನಾಥ ನಾಯಕ್ ಕ್ರಾಸ್ ರಸ್ತೆಯವರೆಗೆ ವಾಹನ ಓಡಾಟ ನಿಷೇಧಿಸಿದೆ.